Kranti : ಡಿ ಬಾಸ್ ಕ್ರಾಂತಿ ಸಿನಿಮಾ ಹವಾ ನೋಡಿ ಬೆಚ್ಚಿಬಿದ್ದ ಬಾಲಿವುಡ್ ಮಂದಿ! 100 ಕೋಟಿ ಕಲೆಕ್ಷನ್

ಜಸ್ಟ್ ಕನ್ನಡ : 2023ರ ಆರಂಭದಲ್ಲಿ ಕನ್ನಡ ಚಿತ್ರ ರಂಗದ ‘ಕ್ರಾಂತಿ’ ಸಿನಿಮಾ ಬಿಡುಗಡೆ ಆಗಿದೆ. ಬಾಲಿವುಡ್ ನಲ್ಲಿ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅವರ ‘ಪಠಾಣ್’ ಸಿನಿಮಾ ಬಿಡುಗಡೆ ಆಗಿದೆ. ‘ಕ್ರಾಂತಿ’ ಸಿನಿಮಾ ಬಿಡುಗಡೆಗೂ ಒಂದು ದಿನ ಮುಂಚಿತವಾಗಿ ಶಾರುಖ್ ಖಾನ್ ಅವರ ‘ಪಠಾಣ್’ ಸಿನಿಮಾ ಬಿಡುಗಡೆ ಆಗಿದ್ದು ”ಪಠಾಣ್’ ಸಿನಿಮಾದಲ್ಲಿ ಬಹುದೊಡ್ಡ ತಾರಾ ತಂಡವೇ ಇರುವ ಕಾರಣವಾಗಿ ಈ ಸಿನಿಮಾ ಇಡೀ ದೇಶದಾದ್ಯಂತ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಹಾಗೂ ಕೆಲವು ಭಾಗಗಳಲ್ಲಿ ಕೆಜೆಎಫ್, ಕೆಜೆಎಫ್-2 ಸಿನಿಮಾ ದಾಖಲೆಗಳನ್ನ ಅಳಿಸಿ ಹಾಕಿದೆ ಅಂತ ಹೇಳಲಾಗ್ತಿದೆ.

ಇನ್ನು ಮುಂಚೆ ಎಲ್ಲ ಬೇರೆ ಭಾಷೆಯ ದೊಡ್ಡ ಸ್ಟಾರ್ ಗಳ ಸಿನಿಮಾಗಳು ಕರ್ನಾಟದಲ್ಲಿ ಭಾರೀ ಸಂಖ್ಯೆಯ ಥಿಯೇಟರ್ ಗಳಲ್ಲಿ ಬಿಡುಗಡೆ ಆಗಿ ಕನ್ನಡ ಭಾಷೆಯ ಸಿನಿಮಾಗಳಿಗೆ ಥಿಯೇಟರ್ ಸಮಸ್ಯೆಯನ್ನ ಉಂಟು ಮಾಡುತಿತ್ತು. ಇದೀಗ ಕಾಲ ಬದಲಾಗಿದ್ದು ಕನ್ನಡ ಸಿನಿಮಾಗಳು ಇಡೀ ದೇಶದಾದ್ಯಂತ ತಮ್ಮ ಅಬ್ಬರವನ್ನ ಹೆಚ್ಚಿಸಿದ್ದು, ಉತ್ತರ ಭಾರತದಲ್ಲಿ ಕನ್ನಡ ಸಿನಿಮಾಗಳಿಗೆ ಭಾರೀ ಡಿಮ್ಯಾಂಡ್ ಉಂಟು ಮಾಡಿದೆ. ಕರ್ನಾಟಕದಲ್ಲಿ ಬಾಕ್ಸ್ ಆಫೀಸ್ ಸುಲ್ತಾನ ‘ಡಿಬಾಸ್’ ಅವರ ಬ್ಲಾಕ್ ಬಸ್ಟರ್ ಸಿನಿಮಾ ‘ಕ್ರಾಂತಿ’ ಇದೀಗ ಬಂದಿರುವ ಶಾರುಖ್ ಖಾನ್ ಸಿನಿಮಾ ‘ಪಠಾಣ್’, ‘ಕ್ರಾಂತಿ’ ಎದುರು ಮಂಕಾಗಿದೆ ಎನ್ನುವ ಮಾತುಗಳು ಸಹ ಕೇಳಿ ಬರುತಿದೆ.

ಹೌದು, ‘ಪಠಾಣ್’ ಸಿನಿಮಾ ಉತ್ತರ ಭಾರತದಲ್ಲಿ ಉತ್ತಮವಾಗಿ ಪ್ರದರ್ಶನವಾಗ್ತಿದ್ದು ಕೂಡ ಕರ್ನಾಟಕದಲ್ಲಿ ದರ್ಶನ್ ಅವರ ‘ಕ್ರಾಂತಿ’ ಸಿನಿಮಾ ಎದುರು ಕಲೆಕ್ಷನ್ ಅಲ್ಲಿ ಹಿಂದೆ ಸರಿದಿದೆ ಅಂತೆ. ‘ಪಠಾಣ್’ ಸಿನಿಮಾ ಬಿಡುಗಡೆ ಆದ ಮೂರು ದಿನಗಳಲ್ಲಿ ಸುಮಾರು 10 ರಿಂದ 15 ಕೋಟಿ ಕಲೆಕ್ಷನ್ ಮಾಡಿದ್ರೆ ದರ್ಶನ್ ಅವರ ‘ಕ್ರಾಂತಿ’ ಸಿನಿಮಾ ಕೇವಲ ಎರಡು ದಿನ ಗಳಲ್ಲಿ ಸುಮಾರು 25 ರಿಂದ 30 ಕೋಟಿ ಕಲೆಕ್ಷನ್ ಮಾಡಿದೆ ಹಾಗೂ ‘ಕ್ರಾಂತಿ’ ಸಿನಿಮಾ ಮೊದಲ ವಾರದಲ್ಲೇ 1೦೦ ಕೋಟಿ ಕ್ಲಬ್ ಸೇರ್ತಿದೆ ಎನ್ನುವ ಮಾತುಗಳು ಗಾಂಧೀ ನಗರಗಳಲ್ಲಿ ಕೇಳಿ ಬರ್ತಿದೆ. ನಿಮ್ಮ ಪ್ರಕಾರ ಕ್ರಾಂತಿ ಸಿನಿಮಾ ಒಟ್ಟಾರೆ ಆಗಿ ಎಷ್ಟು ಕಲೆಕ್ಷನ್ ಮಾಡುತ್ತದೆ ಕಮೆಂಟ್ ಮಾಡಿ ನಿಮ್ಮ ಅನಿಸಿಕೆಗಳನ್ನು ತಿಳಿಸಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ಜಸ್ಟ್ ಕನ್ನಡ (Just Kannada) ಲೈಕ್ ಮತ್ತು ಶೇರ್ ಮಾಡೋದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..
  • ಮದುವೆಯ ರಾತ್ರಿ ವಧು-ವರರ ಜೊತೆಗೆ ಮಲಗುವ ತಾಯಿ! ಇಂತಹ ಸಂಪ್ರದಾಯ ಇರುವುದೆಲ್ಲಿ ಗೊತ್ತಾ.?

    Just kannada :- ಮದುವೆ ಸಂಪ್ರದಾಯಗಳು ವಿಚಿತ್ರ ಹಾಗು ವಿಭಿನ್ನ ರೀತಿಯಾಗಿರುತ್ತದೆ. ಜಗತ್ತಿನ ಬಹುತೇಕ ಕಡೆಗಳಲ್ಲಿ ಇದನ್ನೆಲ್ಲಾ ಚಾಚೂ ತಪ್ಪದೇ ಪಾಲಿಸುತ್ತಾರೆ. ಇದಕ್ಕೆಲ್ಲಾ ಅದರದ್ದೇ ಆದಂತಹ ತರ್ಕವಿದೆ. ವಿವಾಹದ ನಂತರ ಎಲ್ಲಾ ಕಡೆ ನವ ವಧು-ವರರಿಗೆ ಮೊದಲ ರಾತ್ರಿ(ಫಸ್ಟ್ ನೈಟ್) ಆಯೋಜನೆ ಮಾಡುವುದು ಸಾಮಾನ್ಯ. ಆದರೆ ಇಂಟೆರೆಸ್ಟಿಂಗ್ ವಿಷಯ ಏನಂದ್ರೆ, ಮೊದಲ ರಾತ್ರಿ ವಧು-ವರರೊಂದಿಗೆ ವಧುವಿನ ತಾಯಿ ಕೂಡ ಅವರೊಂದಿಗೆ ಮಲಗುವಂತಹ ವಿಚಿತ್ರ ಸಂಪ್ರದಾಯವೊಂದಿದೆ. ಆಫ್ರಿಕನ್ ಖಂಡದ ಅನೇಕ ದೇಶಗಳಲ್ಲಿ ಇಂತಹ ವಿಚಿತ್ರ ಆಚರಣೆ ಈಗಲೂ ಇದೆ.

    ಇದನ್ನೂ ಓದಿ :- ಈ ಅದ್ಭುತ ಹಣ್ಣು ಮಕ್ಕಳಿಲ್ಲದವರಿಗೆ ಹೆಚ್ಚು ಲಾಭದಾಯಕ.!

    ಆಫ್ರಿಕನ್ ಖಂಡದ ಕೆಲವು ಬುಡಕಟ್ಟು ಪ್ರದೇಶಗಳಲ್ಲಿ ವಿವಾಹದ ನಂತರ ಹುಡುಗಿಯ ತಾಯಿ ಕೂಡ ನವ ದಂಪತಿಗಳೊಂದಿಗೆ ಮೊದಲ ರಾತ್ರಿ(ಫಸ್ಟ್ ನೈಟ್) ಮಲಗುತ್ತಾಳೆ. ಇಂತಹ ಸಂಪ್ರದಾಯ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇಂತಹ ವಿಚಿತ್ರ ಆಚರಣೆಯನ್ನು ಅಲ್ಲಿನ ನಿವಾಸಿಗಳೆಲ್ಲರೂ ಈಗಲೂ ಚಾಚೂ ತಪ್ಪದೇ ಪಾಲಿಸುತ್ತಾರೆ. ವಧು-ವರರು ಒಬ್ಬರಿಗೊಬ್ಬರು ಹೊಸಬರಾದ ಕಾರಣ ನವ ದಂಪತಿಗಳಿಗೆ ಸಲಹೆಗಳನ್ನು ನೀಡಲು ಅವರೊಂದಿಗೆ ಮೊದಲ ರಾತ್ರಿ ವಧುವಿನ ತಾಯಿ ಕೂಡ ಇರುತ್ತಾರೆ ಅನ್ನೋದು ಅಲ್ಲಿನ ಜನರ ವಾದ.

    ಇದನ್ನೂ ಓದಿ :- ಕೇವಲ ಒಂದು ವಾರ ದಾಳಿಂಬೆ ಹಣ್ಣು ತಿಂದರೆ ಏನಾಗುತ್ತೆ ಅಂತ ಗೊತ್ತಾದ್ರೆ…

    ವಿವಾಹದ ನಂತರ ಹೇಗೆ ಸಂತೋಷದ ಜೀವನವನ್ನು ನಡೆಸಬೇಕು.? ಅದಕ್ಕಾಗಿ ಏನೆಲ್ಲಾ ಮಾಡಬೇಕು ಎನ್ನುವುದು ನವ ದಂಪತಿಗಳಿಗೆ ವಧುವಿನ ತಾಯಿ ಹೇಳಿಕೊಡುತ್ತಾಳಂತೆ. ಮರುದಿನ ವಧುವಿನ ತಾಯಿ ನವದಂಪತಿಗಳ ಮೊದಲ ರಾತ್ರಿ ಹೇಗಿತ್ತು.? ಅವರು ಸಂತೋಷವಾಗಿದ್ದರೋ, ಇಲ್ಲವೋ ಅನ್ನುವುದನ್ನು ಕುಟುಂಬದ ಇತರ ಸದಸ್ಯರಿಗೆ ಹೇಳುತ್ತಾಳೆ. ವಿಷಯ ತಿಳಿಯಲು ಕುಟುಂಬದ ಸದಸ್ಯರು ಕೂಡ ಕಾಯುತ್ತಿರುತ್ತಾರೆ. ಇಂತಹ ಆಚರಣೆ ಚೀನಾದ ಕೆಲವು ಪ್ರದೇಶಗಳಲ್ಲಿ ಕೂಡ ಪಾಲಿಸುತ್ತಾರೆ. ಇಲ್ಲಿ ವಧು ಹಾಗು ಆಕೆಯ ಕುಟುಂಬದವರು ವಿವಾಹದ ಮುನ್ನ ವರನೊಂದಿಗೆ ಸಮಯವನ್ನು ಕಳೆಯುತ್ತಾರಂತೆ.

    ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ’ (JustKannada) ಲೈಕ್ ಮತ್ತು ಶೇರ್ ಮಾಡೋದನ್ನ ಮರೆಯಬೇಡಿ.

  • Actor Darshan : ಹುಟ್ಟುಹಬ್ಬಕ್ಕೆ ಡಿಬಾಸ್ ದರ್ಶನ್ ಮಾಡಿದ ಮನವಿ ಏನು ಗೊತ್ತಾ.?

    Actor Darshan : ಚಾಲೆಂಜಿಂಗ್ ಸ್ಟಾರ್ ಡಿಬಾಸ್ ದರ್ಶನ್ (Darshan) ಅವರು ಇದೇ ಫೆಬ್ರವರಿ 16ರಂದು ತಮ್ಮ ಹುಟ್ಟು ಹಬ್ಬವನ್ನು ಅಭಿಮಾನಗಳ ಜೊತೆ ಅದ್ದೂರಿಯಾಗಿ ಆಚರಿಸಿಕೊಳ್ಳಲು ನಿರ್ಧರಿಸಿದ್ದು, ಈಗಾಗಲೇ ಡಿಬಾಸ್ ತಮ್ಮ ಅಭಿಮಾನಿಗಳಿಗೆ ಸಂದೇಶವೊಂದನ್ನು ರವಾನಿಸಿದ್ದು, ಯಾರೂ ಕೂಡ ಕೇಕ್ ಮತ್ತು ಬ್ಯಾನರ್ ಕಟ್ಟದಂತೆ ಕೇಳಿಕೊಂಡಿದ್ದಾರೆ. ಹಾಗೆಯೇ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ಅಭಿಮಾನಿಗಳಲ್ಲಿ ದವಸ ಧಾನ್ಯಗಳನ್ನು ಉಡುಗೊರೆಯಾಗಿ ನೀಡಿ ಎಂದು ದರ್ಶನ್ ಅವರು ಮನವಿ ಮಾಡಿಕೊಂಡಿದ್ದಾರೆ.

    ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬದ ಸಂಭ್ರಮದಲ್ಲಿಯೇ ಡಿಬಾಸ್ ಅಭಿಮಾನಿಗಳಿಗೆ ಮತ್ತೊಂದು ಸಿಹಿಸುದ್ದಿ ಸಿಕ್ಕಿದ್ದು, ದರ್ಶನ್ ಅಭಿನಯದ ಡೆವಿಲ್ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡುವ ಸಾಧ್ಯತೆ ಇದೆಯಂತೆ. ಈಗಾಗಲೇ ಪ್ರಕಾಶ್ ವೀರ್ ನಿರ್ದೇಶನದ ಡಿಬಾಸ್ ದರ್ಶನ್ ನಾಯಕರಾಗಿ ನಟಿಸುತ್ತಿರುವ ‘ಡೆವಿಲ್’ ಸಿನಿಮಾದ ಸ್ಕ್ರಿಪ್ಟ್ ಪೂಜೆ ಸರಳವಾಗಿ ನೆರೆವೇರಿತ್ತು.

  • Actor Sudeep : ಪ್ರಸಿದ್ಧ ವಾಲ್ಮೀಕಿ ಜಾತ್ರೆಗೆ ನಟ ಕಿಚ್ಚ ಸುದೀಪ್‌ ಗೆ ಆಹ್ವಾನ ಇಲ್ವಾ.? ಜಾತ್ರಾ ಕಮಿಟಿಯ ತೀರ್ಮಾನ.?

    Actor Sudeep : ಪ್ರತೀ ವರ್ಷ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ಅದ್ಧೂರಿಯಾಗಿ ನಡೆಯುವ ಪ್ರಸಿದ್ಧ ವಾಲ್ಮೀಕಿ ಜಾತ್ರೆಗೆ ಈ ಬಾರಿ ನಟ ಸುದೀಪ್ ಅವರನ್ನು ಕರೆಯದಿರಲು ಜಾತ್ರಾ ಕಮಿಟಿ ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ. ಇದೇ ತಿಂಗಳ 8 ಹಾಗು 9 ಕ್ಕೆ ವಾಲ್ಮೀಕಿ ಜಾತ್ರೆಯನ್ನ ಆಯೋಜಿಸಲಾಗಿದೆ.

    ನಟ ಸುದೀಪ್ ಬಂದಾಗ ಜಾತ್ರೆಯಲ್ಲಿ ಆಗುತ್ತಿರುವ ಗಲಾಟೆ – ಗೊಂದಲಗಳ ಕಾರಣಕ್ಕಾಗಿ ಕಿಚ್ಚ ಸುದೀಪ್ ಅವರನ್ನು ಜಾತ್ರೆಗೆ ಆಹ್ವಾನಿಸದಿರಲು ಜಾತ್ರಾ ಕಮಿಟಿ ನಿರ್ಧಾರ ಮಾಡಿದೆ. ಇದು ಕಿಚ್ಚನ ಅಭಿಮಾನಿಗಳಿಗೆ ಸಾಕಷ್ಟು ನಿರಾಶೆ ಮತ್ತು ಆಕ್ರೋಶವನ್ನು ಉಂಟು ಮಾಡಿದೆ. ಸುದೀಪ್ ಅವರು ವಾಲ್ಮೀಕಿ ಸಮುದಾಯದ ನಾಯಕ ಆಗಿರುವುದರಿಂದ ವಾಲ್ಮೀಕಿ ಜಾತ್ರೆಗೆ ಸುದೀಪ್ ಅವರ ಆಗಮನವನ್ನು ಪ್ರತೀ ವರ್ಷ ಅಭಿಮಾನಿಗಳು ನಿರೀಕ್ಷೆ ಮಾಡುತ್ತಾರೆ.

  • Darshan Thoogudeepa : ದರ್ಶನ್ ಫೋಟೋ ಹಾಕಿಕೊಂಡಿರುವ ಪವಿತ್ರ ಗೌಡ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾದ ಪತ್ನಿ ವಿಜಯಲಕ್ಷ್ಮಿ.!

    Darshan Thoogudeepa : ಸ್ಯಾಂಡಲ್‌ವುಡ್ ನಟಿ ಪವಿತ್ರ ಗೌಡ ವಿರುದ್ಧ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಿಡಿದಿದ್ದಾರೆ. ತನ್ನ ಗಂಡನ ಫೋಟೋಗಳನ್ನ ಶೇರ್ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಆಕ್ರೋಶ ಹೊರಹಾಕಿದ್ದಾರೆ. ನಟಿ ಪವಿತ್ರ ಗೌಡ ಅವರು ಡಿ ಬಾಸ್ ದರ್ಶನ್ ಜೊತೆಗಿನ ಆತ್ಮೀಯ ಫೋಟೋಗಳನ್ನ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ನಮ್ಮ ರಿಲೇಶನ್ ಶಿಪ್ ಗೆ 10 ವರ್ಷ ಎಂದು ಬರೆಯುವ ಮೂಲಕ ಪೋಸ್ಟ್ ಹಾಕಿಕೊಂಡಿದ್ದಾರೆ.

    ಫೋಟೋದಲ್ಲಿ ಪವಿತ್ರ ಗೌಡ ಮತ್ತು ಆಕೆಯ ಮಗಳ ಜೊತೆಗೆ ದರ್ಶನ್ ಕಾಣಿಸಿಕೊಂಡಿದ್ದಾರೆ. ಪವಿತ್ರ ಗೌಡ ಹಾಕಿರುವ ಪೋಸ್ಟ್ ಕಂಡು ದರ್ಶನ್ ಪತ್ನಿ ವಿಜಯಲಕ್ಷ್ಮಿ ಆಕ್ರೋಶ ಹೊರಹಾಕಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪವಿತ್ರ ಗೌಡ ಮತ್ತು ಆಕೆಯ ಪತಿ ಸಂಜಯ್ ಸಿಂಗ್ ಫೋಟೋ ಹಾಕಿಕೊಂಡು ಬೇರೊಬ್ಬರ ಗಂಡನ ಚಿತ್ರವನ್ನು ಪೋಸ್ಟ್ ಮಾಡುವ ಮೊದಲು ಈ ಮಹಿಳೆಗೆ ಪ್ರಜ್ಞೆ ಇರಬೇಕು ಎಂದು ನಾನು ಭಾವಿಸುತ್ತೇನೆ. ಅದು ಅವಳ ಪಾತ್ರ ಮತ್ತು ನೈತಿಕ ನಿಲುವಿನ ಬಗ್ಗೆ ಮಾತನಾಡುತ್ತದೆ. ಪುರುಷ ವಿವಾಹಿತನೆಂದು ತಿಳಿದುಕೊಂಡು ಆಕೆ ತನ್ನ ವೈಯಕ್ತಿಕ ಅಗತ್ಯಗಳು ಮತ್ತು ಕಾರ್ಯಸೂಚಿಗಾಗಿ ಬಂದು ಉಳಿಯಲು ಆಯ್ಕೆ ಮಾಡಿಕೊಳ್ಳುತ್ತಾಳೆ.

    ಇದನ್ನೂ ಕೂಡ ಓದಿ : PM Kisan Maan-Dhan Yojana : ರೈತರಿಗೆ ಪ್ರತಿ ತಿಂಗಳಿಗೆ ₹3,000 ಹಣ ಘೋಷಣೆ – FID ನಂಬರ್ ಇರುವ ಸಣ್ಣ ರೈತರಿಗೆ ಮೋದಿ ಬಂಪರ್.!

    ಈ ಚಿತ್ರಗಳಲ್ಲಿ ಪವಿತ್ರ ಗೌಡ ಮತ್ತು ಸಂಜಯ್ ಸಿಂಗ್ ಅವರ ಮಗಳು ಖುಷಿ ಗೌಡ ಎಂಬುದು ಸ್ಪಷ್ಟವಾಗಿ ಕಾಣಿಸುತ್ತದೆ. ನಾನು ಸಾಮಾನ್ಯವಾಗಿ ವೈಯಕ್ತಿಕ ವಿಷಯಗಳ ಬಗ್ಗೆ ಧ್ವನಿ ಎತ್ತಲು ಸಾಮಾಜಿಕ ಮಾಧ್ಯಮವನ್ನು ಬಳಸಿಕೊಳ್ಳುವುದಿಲ್ಲ. ಆದರೆ ಈಗ ನನ್ನ ಕುಟುಂಬದ ಹಿತದೃಷ್ಟಿಯಿಂದ ಧ್ವನಿ ಎತ್ತುವ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ. ಇಡೀ ಸಮಾಜಕ್ಕೆ ವಿಭಿನ್ನ ಚಿತ್ರಣ ನೀಡಲು ಯತ್ನಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬರೆಯುವ ಮೂಲಕ ಸಂಜಯ್ ಸಿಂಗ್ ಖುಷಿಗೌಡ, ಶಾನ್ವಿಸಮ್ ಸೂರಿ ಹಾಗು ಪವಿತ್ರ ಗೌಡ ಅಕೌಂಟ್ ಗೆ ಟ್ಯಾಗ್ ಮಾಡಿದ್ದಾರೆ.

    ಒಟ್ಟಿನಲ್ಲಿ ಪವಿತ್ರ ಗೌಡ ಹಾಕಿಕೊಂಡಿರುವ ದರ್ಶನ್ ಫೋಟೋಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕಾನೂನು ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ. ಗೌರವಕ್ಕೆ ದಕ್ಕೆ ತರುತ್ತಿರುವ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಇದಕ್ಕೆಲ್ಲಾ ನಟಿ ಪವಿತ್ರ ಗೌಡ ಏನು ಉತ್ತರ ಕೊಡಲಿದ್ದಾರೆ ಎಂದು ಕಾದುನೋಡಬೇಕಿದೆ.

    ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

    ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.
    
    ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..
  • Darshan Thoogudeepa : ಒಬ್ಬ ಮನುಷ್ಯನಿಗೆ ಎಷ್ಟು ಅಂತ ಕಷ್ಟ ಕೊಡ್ತೀರಾ ಎಂದು ನೋವು ಹೊರ ಹಾಕಿದ ದರ್ಶನ್.!

    Darshan Thoogudeepa : ಕನ್ನಡದ ಹೆಸರಾಂತ ನಟ ದರ್ಶನ್ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆಯಾ.? ಇಂತಹದ್ದೊಂದು ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಇದೀಗ ದರ್ಶನ್ ಅವರನ್ನ ಟಾರ್ಗೆಟ್ ಮಾಡಿದ್ದು ಯಾರು? ದರ್ಶನ್ ತುಂಬಾನೇ ನೋವು ಪಟ್ಟುಕೊಂಡು ಯಾಕೆ.? ನೋಡೋಣ.

    ಕಾಟೇರ ಸಿನಿಮಾದ ಸಕ್ಸಸ್ ಅನ್ನು ಸಹಿಸಿಕೊಳ್ಳೋಕೆ ಆಗದೆ ಅವರಿಗೆ ತೊಂದರೆ ನೀಡಲಾಗುತ್ತಿದೆ ಎಂದು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮಾಧ್ಯಮಗಳ ಮುಂದೆ ಹೇಳಿಕೆ ನೀಡುತ್ತಿದ್ದಂತೆ ದರ್ಶನ್ ಅಭಿಮಾನಿಗಳು ಟಾರ್ಗೆಟ್ ಮಾಡ್ತಿರುವುದು ಯಾರು ಎನ್ನುವ ಚರ್ಚೆ ಶುರು ಮಾಡಿದ್ದಾರೆ. ನಟ ದರ್ಶನ್ ನಟನೆಯ ಕಾಟೇರ ಸಿನಿಮಾದ ಸಕ್ಸಸ್ ಪಾರ್ಟಿಯ ನಂತರ ಇಡೀ ಸಿನಿಮಾಗೆ ತೊಂದರೆ ತಂದೊಡ್ಡಿತ್ತು. ಬೆಳಗಿನ ಜಾವದವರೆಗೂ ಪಾರ್ಟಿ ಮಾಡಿದ್ರು ಅಂತ ನಟ ದರ್ಶನ್ ಸೇರಿ ಎಂಟು ಸ್ಟಾರ್ ನಟರಿಗೆ ನೋಟೀಸ್ ನೀಡಿದ ಪೊಲೀಸರ ಮುಂದೆ ಎಂಟು ಸ್ಟಾರ್‌ಗಳು ನಿನ್ನೆ ಠಾಣೆಗೆ ಬಂದು ವಿಚಾರಣೆ ಎದುರಿಸಿದರು.

    ಇದನ್ನೂ ಕೂಡ ಓದಿ : Gruhalakshmi Updates : ಗೃಹಲಕ್ಷ್ಮಿ 5ನೇ ಕಂತಿನ ಹಣ ಬೇಕಾ.? ಹೊಸ ನಿಯಮ ಜಾರಿಗೆ / ಉಚಿತ ಹಣ ಬೇಕಿದ್ರೆ ಇದನ್ನ ಫಾಲೋ ಮಾಡಿ

    ಜನವರಿ ಮೂರನೇ ತಾರೀಕಿನ ರಾತ್ರಿ ಜೆಟ್‌ಲ್ಯಾಗ್ ಪಬ್‌ನಲ್ಲಿ ಕಾಟೇರ ಸಿನಿಮಾ ತಂಡ ಸಕ್ಸಸ್ ಪಾರ್ಟಿ ಮಾಡಿತ್ತು. ಸುಮಾರು ಒಂದು ಗಂಟೆಗಳ ಕಾಲ ವಿಚಾರಣೆ ಎದುರಿಸಿ ಹೊರಬಂದ ಮೇಲೆ ಮಾತನಾಡಿದ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರು ದರ್ಶನ್ ಅವರನ್ನು ಟಾರ್ಗೆಟ್ ಮಾಡಲಾಗಿದೆ ಅಂದಿದ್ದಾರೆ. ಯಾರು ಮಾಡುತ್ತಿದ್ದಾರೆ ಅಂತಾನೂ ಗೊತ್ತು. ಕಾಟೇರ ಸಿನಿಮಾ ಸಕ್ಸಸ್ ಸಹಿಸಿಕೊಳ್ಳಲಾಗದೆ ಈ ರೀತಿ ಮಾಡುತ್ತಿದ್ದಾರೆ. ಊಟ ಕ್ಕೆ ಬಂದವರಿಗೆ ನೋಟಿಸ್ ಕೊಟ್ಟಿದ್ದು ಇದೇ ಮೊದಲು. ಬರೀ ಊಟಕ್ಕೆ ಹೋಗಿದ್ವಿ ಅವತ್ತು ತಡರಾತ್ರಿ ಪಾರ್ಟಿ ಮಾಡಿಲ್ಲ ಅಂತ ಆರೋಪ ತಳ್ಳಿ ಹಾಕಿದರು.

    ಇದನ್ನೂ ಕೂಡ ಓದಿ : Labour : ನೀವು ಕಾರ್ಮಿಕರಾ.? ಕಾರ್ಮಿಕರಿಗೆ ಸಿಗುತ್ತೆ 10 ಲಕ್ಷ.! ನೋಂದಣಿ ಮಾಡಿಸಿ ಇದರ ಲಾಭ ಪಡೆಯಿರಿ

    ಇನ್ನು ಎಷ್ಟು ಅಂತ ಆ ಮನುಷ್ಯನಿಗೆ ತೊಂದರೆ ಕೊಡ್ತೀರಾ ನೀವು.? ದರ್ಶನ್ ಏಳಿಗೆ ಸಹಿಸಿಕೊಳ್ಳಲು ಆಗದೇ ಈ ರೀತಿ ಕೆಲಸ ಮಾಡಿದ್ದೀರಾ.? ನೀವು ಎಷ್ಟೇ ತೊಂದರೆ ಕೊಟ್ಟರೂ, ಇನ್ನೂ ಎತ್ತರಕ್ಕೆ ಹೋಗ್ತಾರೆ. ಕೆಳಗೆ ಯಾವತ್ತೂ ಬರಲ್ಲ ಎನ್ನುವ ಮಾತು ಹೇಳಿದ್ದಾರೆ ರಾಕ್ ಲೈನ್ ವೆಂಕಟೇಶ್.

    ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

    ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.
    
    ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..
  • Darshan Thoogudeepa : ದರ್ಶನ್ ಪೋಲೀಸ್ ಸ್ಟೇಷನ್ ಹೋಗಿದ್ದಕ್ಕೆ ಕಾರಣ ಯಾರು ಅಂತ ತಿಳಿಸಿದ ಪತ್ನಿ ವಿಜಯಲಕ್ಷ್ಮಿ! ಎಲ್ಲರೂ ಶಾಕ್.!

    Darshan Thoogudeepa : ನಿನ್ನೆ ತಾನೇ ನಟ ದರ್ಶನ್ ಹಾಗೂ ಸ್ನೇಹಿತರು ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದರು. ನಟ ದರ್ಶನ್ ಪೋಲೀಸ್ ಸ್ಟೇಷನ್ ಹೋಗಿದ್ದಕ್ಕೆ ಪತ್ನಿ ವಿಜಯಲಕ್ಷ್ಮಿ ಅವರು ಕಾರಣ ಯಾರು ಅಂತ ತಿಳಿಸಿ ಕಣ್ಣೀರು ಹಾಕಿದ್ದಾರೆ. ಹಾಗಾದ್ರೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹೇಳಿದ್ದೇನು ಗೊತ್ತಾ.? ನೋಡೋಣ.

    ಇದನ್ನೂ ಕೂಡ ಓದಿ : Labour : ನೀವು ಕಾರ್ಮಿಕರಾ.? ಕಾರ್ಮಿಕರಿಗೆ ಸಿಗುತ್ತೆ 10 ಲಕ್ಷ.! ನೋಂದಣಿ ಮಾಡಿಸಿ ಇದರ ಲಾಭ ಪಡೆಯಿರಿ

    ಪಬ್‌ನಲ್ಲಿ ನಿಯಮ ಮೀರಿ ತಡ ರಾತ್ರಿವರೆಗೆ ಪಾರ್ಟಿ ಮಾಡಿದ ಆರೋಪದ ಮೇಲೆ ನೋಟಿಸ್ ನೀಡಿದ ಹಿನ್ನೆಲೆ ನಟ ದರ್ಶನ್ ಸೇರಿ ಸ್ಯಾಂಡಲ್ ವುಡ್ ನ ಕಲಾವಿದರು ಸುಬ್ರಹ್ಮಣ್ಯ ಪೊಲೀಸ್ ಠಾಣೆ ಗೆ ವಿಚಾರಣೆಗೆ ಹಾಜರಾಗಿದ್ದರು. ಬೆಂಗಳೂರಿನ ಸುಬ್ರಮಣ್ಯ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿನ ಜೆಟ್‌ಲ್ಯಾಗ್ ಪಬ್‌ನಲ್ಲಿ ಕಾಟೇರ ಸಿನಿಮಾ ಸಕ್ಸಸ್ ಪಾರ್ಟಿಯನ್ನು ನಡೆಸಲಾಗಿತ್ತು. ಮಧ್ಯರಾತ್ರಿ 1.30 ರ ನಂತರವೂ ಪಾರ್ಟಿ ನಡೆಸಲಾಗಿತ್ತು ಎನ್ನುವ ಆರೋಪ ಕೇಳಿಬಂದಿತ್ತು. ನಿಯಮ ಮೀರಿ ತಡರಾತ್ರಿ ಪಾರ್ಟಿ ಮಾಡುತ್ತಿರುವುದು ಕಂಡು ಬಂದಿತು.

    ಇದನ್ನೂ ಕೂಡ ಓದಿ : PM Kisaan Samman Nidhi : ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಡಿಯಲ್ಲಿ ₹12000- ಹಣ ಏರಿಕೆ!! ಬಂಪರ್ ಸುದ್ದಿ!!

    ಈ ಸಂಬಂಧ ನಟ ದರ್ಶನ್, ರಾಕ್ ಲೈನ್ ವೆಂಕಟೇಶ್, ಡಾಲಿ ಧನಂಜಯ್, ಸಂಗೀತ ನಿರ್ದೇಶಕ ವಿ ಹರಿಕೃಷ್ಣ, ನಿರ್ದೇಶಕ ತರುಣ್ ಸುದೀರ್, ಅಭಿಷೇಕ್ ಅಂಬರೀಶ್, ಚಿಕ್ಕಣ್ಣ ಸೇರಿದಂತೆ ಎಂಟು ಮಂದಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಈ ಬಗ್ಗೆ ಮಾತನಾಡಿರುವ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಕೆಲವರು ದರ್ಶನ್ ಹಿಂದೆ ಬಿದ್ದಿದ್ದಾರೆ. ದರ್ಶನ್ ಏನ್ ಮಾಡ್ತಾರೆ.? ಎಲ್ಲಿ ಹೋಗ್ತಾರೆ.? ಅವರನ್ನ ಫಾಲೋ ಮಾಡುವುದೇ ಅವರ ಕೆಲಸವಾಗಿದೆ. ಕಾಟೇರ ಸಿನಿಮಾದ ಸಕ್ಸಸ್ ಸಹಿಸಿಕೊಳ್ಳಲಾಗದೇ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಈ ರೀತಿ ಮಾಡುತ್ತಿರುವುದು ಸರಿಯಲ್ಲ ಎಂದಿದ್ದಾರೆ ವಿಜಯಲಕ್ಷ್ಮಿ.

    ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

    ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.
    
    ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..
  • Katera : ದ್ವೇಷ ಮರೆತು ದರ್ಶನ್ ಕಾಟೇರಾ ಸಿನೆಮಾ ಬಗ್ಗೆ ಧೃವಸರ್ಜಾ ಹೇಳಿದ್ದೇನು ಗೊತ್ತಾ.? ಡಿ ಬಾಸ್ ಶಾಕ್.!

    Katera : ನಿಮಗೆಲ್ಲ ಗೊತ್ತಿರುವಂತೆ ದರ್ಶನ ದ್ರುವ ಸರ್ಜಾ ನಡುವೆ ಒಂದು ಸಣ್ಣ ವೈಮನಸ್ಸು ಮನೆ ಮಾಡಿದೆ. ಆದರೆ ಇಬ್ಬರಿಗೂ ಕನ್ನಡದ ಸಿನಿಮಾಗಳ ಮೇಲೆ ಹಾಗೂ ಅಭಿಮಾನಿಗಳ ಮೇಲೆ ಅಪಾರ ಪ್ರೀತಿ, ಗೌರವ. ದರ್ಶನ್ ಅವರ ಕಾಟೇರ ಸಿನಿಮಾ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದೀಗ ದರ್ಶನ್ ಅವರ ಕಾಟೇರ ಸಿನಿಮಾದ ಬಗ್ಗೆ ನಟ ಧ್ರುವ ಸರ್ಜಾ ಅವರು ಎಂತಹ ಮಾತು ಹೇಳಿದ್ದಾರೆ ಗೊತ್ತಾ.? ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ? ಹಾಗಾದ್ರೆ ದರ್ಶನ್ ಅವರ ಬಗ್ಗೆ ಧ್ರುವ ಸರ್ಜಾ ಹೇಳಿದ್ದೇನು? ನೋಡೋಣ.

    ಇದನ್ನೂ ಕೂಡ ಓದಿ : Bank Updates : ಎಲ್ಲಾ ಬ್ಯಾಂಕಿನ ಗ್ರಾಹಕರಿಗೆ ಗುಡ್ ನ್ಯೂಸ್ – ಆರ್ ಬಿಐನಿಂದ ಎಲ್ಲಾ ಗ್ರಾಹಕರಿಗೆ – ಬ್ಯಾಂಕ್ ಅಕೌಂಟ್ ಇದ್ದವರಿಗೆ..

    ಯಾವುದೇ ಚಿತ್ರರಂಗದಲ್ಲಿ ಎರಡು ಕುಟುಂಬಗಳ ನಡುವೆ ಇಬ್ಬರು ತಾರೆಯರ ನಡುವೆ ವೈಮನಸ್ಸು ಇದ್ದೇ ಇರುತ್ತದೆ. ಆದರೆ ಇಬ್ಬರೂ ಅದನ್ನು ಗೊತ್ತಿದ್ದೋ, ಗೊತ್ತಿಲ್ಲದೆಯೋ ಮುಚ್ಚಿಡುವ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಹಾಗಂತ ಈ ವೈಮನಸ್ಸು ಕೂಡ ಶಾಶ್ವತವೇನೂ ಅಲ್ಲ. ಯಾವಾಗ ಬೇಕಾದರೂ ಮತ್ತೆ ಒಂದಾಗುತ್ತಾರೆ. ಕಾವೇರಿ ಬಂದ್ ಸಮಯದಲ್ಲಿ ಶಿವಣ್ಣನೊಂದಿಗೆ ಧ್ರುವ ಸರ್ಜಾ ಕೂತಿದ್ದರು. ಇತ್ತ ದರ್ಶನ್ ವೇದಿಕೆ ಮೇಲೆ ಬರುತ್ತಿದ್ದಂತೆ ಧ್ರುವ ಸರ್ಜಾ ಅಲ್ಲಿಂದ ಹೊರಟು ಹೋಗಿದ್ದರು. ವೇದಿಕೆ ಮೇಲೆ ಒಟ್ಟಿಗೆ ಕಂಡರೂ ಮಾತನಾಡಿಕೊಂಡಿರಲಿಲ್ಲ.

    ಅದೇ ಹುಟ್ಟುಹಬ್ಬದ ಸಮಯದಲ್ಲಿ ದರ್ಶನ್ ಅವರಿಗೆ ಮೂರು ಪ್ರಶ್ನೆಗಳನ್ನು ಕೇಳಬೇಕು. ಅದು ಉತ್ತರ ಸಿಕ್ಕ ಮೇಲೆ ನನಗೊಂದು ಕ್ಲಾರಿಟಿ ಸಿಗುತ್ತದೆ. ನಮಗೂ ಒಂದು ಸೆಲ್ಫ್ ರೆಸ್ಪೆಕ್ಟ್ ಅಂತ ಇದ್ದೆ ಇರುತ್ತದೆ ಎಂದು ಧ್ರುವ ಸರ್ಜಾ ಹೇಳಿದ್ದರು. ಇದೀಗ ಧ್ರುವ ಸರ್ಜಾ ಅವರ ಮಾರ್ಟಿನ್ ಸಿನಿಮಾ ಕೂಡ ರಿಲೀಸ್ ಗೆ ರೆಡಿಯಾಗಿದೆ. ಮಾಧ್ಯಮದವರು ಧ್ರುವ ಸರ್ಜಾ ಅವರಿಗೆ ಕನ್ನಡದ ಕಾಟೇರ ಸಿನಿಮಾ ಭರ್ಜರಿ ಗೆಲುವು ಸಾಧಿಸಿದೆ. ಈ ಬಗ್ಗೆ ನೀವು ಏನು ಹೇಳುತ್ತೀರಾ ಅಂತ ಕೇಳಿದ್ದರು.

    ಇದನ್ನೂ ಕೂಡ ಓದಿ : Gruhalakshmi scheme : ಗೃಹಲಕ್ಷ್ಮಿ ಯರಿಗೆ ಗುಡ್ ನ್ಯೂಸ್ — ಹಣ ಡಬಲ್ ಹೊಸ ಯೋಜನೆ ಘೋಷಣೆ

    ಕನ್ನಡ ಸಿನಿಮಾಗಳು ಎಲ್ಲ ಕಡೆ ಸದ್ದು ಮಾಡುತ್ತಿದೆ. ಇದು ಒಳ್ಳೆಯ ಬೆಳವಣಿಗೆ. ಕೆಜಿಎಫ್, ಕಾಂತಾರ, ಕಾಟೇರದಂತಹ ಚಿತ್ರಗಳು ಮತ್ತಷ್ಟು ಬರಬೇಕು. ಕಾಟೇರ ಕೂಡ ಒಳ್ಳೆಯ ಕತೆಯಿರುವ ಸಿನಿಮಾವಾಗಿದೆ. ಇಂತಹ ಸಿನಿಮಾಗಳು ಬಂದರೆ ಖಂಡಿತಾ ಜನ ನೋಡುತ್ತಾರೆ. ಇಡೀ ಚಿತ್ರ ತಂಡಕ್ಕೆ ಒಳ್ಳೆಯದಾಗಲಿ. ಮಾರ್ಟಿನ್ ಕೂಡ ದೊಡ್ಡ ಮಟ್ಟದ ಸಿನಿಮಾ. ಖಂಡಿತ ಎಲ್ಲರಿಗೂ ಇಷ್ಟ ಆಗುತ್ತೆ. ನಮ್ಮ ಕನ್ನಡ ಚಿತ್ರರಂಗ ಬೇರೆ ಹಂತಕ್ಕೆ ಹೋಗುತ್ತೆ ಅನ್ನುವ ಮಾತು ಹೇಳಿದ್ದಾರೆ ಅನ್ನುವ ಸುದ್ಧಿ ಸೋಶಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿದೆ.

    ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

    ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.
    
    ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..
  • ಸಂಪ್ರದಾಯದಡಿ ಹೆಣ್ಣಿನ ಜನನಾಂಗಕ್ಕೆ ಕತ್ತರಿ – ಜೀವನಶೈಲಿ

    ವಿಶ್ವದಾದ್ಯಂತ ಚಿತ್ರ-ವಿಚಿತ್ರ ಪದ್ಧತಿ, ಸಂಪ್ರದಾಯಗಳು ಜಾರಿಯಲ್ಲಿವೆ. ಕೆಲ ಪದ್ಧತಿಗಳು ಆಶ್ಚರ್ಯ ಹುಟ್ಟಿಸಿದ್ರೆ ಮತ್ತೆ ಕೆಲ ಪದ್ಧತಿಗಳು ದಂಗಾಗಿಸುತ್ತವೆ. ಭಯ ಹುಟ್ಟಿಸುವಂತಹ ಪದ್ಧತಿಯೊಂದು ವಿಶ್ವದ ಅನೇಕ ಕಡೆಗಳಲ್ಲಿದೆ. ಆಶ್ಚರ್ಯವೆಂದ್ರೆ ಭಾರತದ ಅನೇಕ ಕಡೆಯೂ ಮಹಿಳೆಯರ ಜನನಾಂಗ ಕತ್ತರಿಸುವ ಪದ್ಧತಿಯಿದೆ.

    ಮಹಿಳೆಯರು ಮದುವೆ ನಂತ್ರ ಗಂಡನಿಗೆ ನಿಷ್ಠೆಯಿಂದ ಇರ್ತಾಳೆ. ಮನೆಯಿಂದ ಹೊರಗೆ ಹೋಗಲ್ಲ ಎಂದು ನಂಬಲಾಗಿದೆ. ರೇಸರ್ ಬ್ಲೇಡ್ ನಿಂದ ಮಹಿಳೆ ಜನನಾಂಗ ಕತ್ತರಿಸುವ ಪದ್ಧತಿ ಈಗ್ಲೂ ಚಾಲ್ತಿಯಲ್ಲಿದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಇದ್ರಿಂದ ನಾಲ್ಕು ರೀತಿಯ ಅಪಾಯ ಕಾಡುವ ಸಾಧ್ಯತೆಯಿರುತ್ತದೆ.

    ರೇಸರ್ ಬ್ಲೇಡ್ ಬಳಸಿ ಈ ಕೆಲಸ ಮಾಡುವುದ್ರಿಂದ ಜನನಾಂಗ ಪೂರ್ತಿ ಕತ್ತರಿಸುವ ಸಾಧ್ಯತೆಯಿರುತ್ತದೆ. ಸ್ವಲ್ಪ ಕತ್ತರಿಸುವುದು, ಯೋನಿ ಹೊಲಿಗೆ ಹಾಗೂ ಚುಚ್ಚುವಿಕೆ ತೀವ್ರ ನೋವನ್ನುಂಟು ಮಾಡುತ್ತದೆ. ಕೆಲ ಯುವತಿಯರು ಸೋಂಕಿಗೊಳಗಾಗಿ ಜೀವನವನ್ನು ಅಪಾಯಕ್ಕೆ ದೂಡುತ್ತಾರೆ.

    ವಿಶ್ವದ ಅನೇಕ ಕಡೆ ಇದಕ್ಕೆ ವಿರೋಧ ವ್ಯಕ್ತವಾಗಿದೆ. ಬಹುತೇಕ ಭಾಗಗಳಲ್ಲಿ ಜನನಾಂಗ ಕತ್ತರಿಸುವ ಪದ್ಧತಿಗೆ ಬ್ರೇಕ್ ಬಿದ್ದಿದೆ. ಭಾರತದ ದಾವೂದಿ ಬೋಹ್ರಾ (dawoodi bohra) ಜನಾಂಗದ ಮಹಿಳೆಯರು ಈ ಪದ್ಧತಿಗೆ ಕಡಿವಾಣ ಹಾಕುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಮನವಿ ಮಾಡಿದ್ದಾರೆ. ಈ ಪದ್ಧತಿಗೆ ಯಾವುದೇ ಕಾನೂನಿಲ್ಲ. ದಾವೂದಿ ಬೋಹ್ರಾ (dawoodi bohra) ಜನಾಂಗದಲ್ಲಿ ಈಗ್ಲೂ ಈ ಪದ್ಧತಿ ಜಾರಿಯಲ್ಲಿದೆ.

    ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

    ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.
    
    ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..
  • Katera : ಕಾಟೇರ ಸಿನೆಮಾ ನೋಡಿದ್ರಾ ಅಂತ ಕೇಳಿದ್ದಕ್ಕೆ ಕಿಚ್ಚ ಸುದೀಪ್ ಎಂಥಹ ಮಾತು ಹೇಳಿದ್ದಾರೆ ನೋಡಿ !‌ ದರ್ಶನ್ ಶಾಕ್.!

    Katera : ನಟ ಕಿಚ್ಚ ಸುದೀಪ್ ಅವರು ದರ್ಶನ್ ಅವರ ಕಾಟೇರ ಸಿನಿಮಾವನ್ನ ನೋಡ್ತಾರೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಈ ಬಗ್ಗೆ ಸುದೀಪ್ ಅವರನ್ನ ಕೇಳಿದ್ದಕ್ಕೆ ಕಿಚ್ಚ ಎಂತಹ ಮಾತು ಹೇಳಿದ್ದಾರೆ ಗೊತ್ತಾ? ಕೇಳಿದ್ರೆ ದರ್ಶನ್ ಫ್ಯಾನ್ಸ್ ಶಾಕ್ ಆಗ್ತೀರಾ?

    ಇದನ್ನೂ ಕೂಡ ಓದಿ : ಅಂದು ಕ್ರಾಂತಿ ಸಿನಿಮಾ ಚಿತ್ರೀಕರಣ 15 ದಿನ ನಿಲ್ಲಿಸಿದ್ದರು ಏಕೆ ಗೊತ್ತೆ.? | Darshan Thoogudeepa

    ಕಾಟೇರ ಸಿನಿಮಾ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕಾಟೇರ ಚಿತ್ರತಂಡ ಸ್ಯಾಂಡಲ್ ವುಡ್ ನ ಕಲಾವಿದರಿಗೆ ವಿಶೇಷ ಪ್ರದರ್ಶನ ಕೂಡ ಏರ್ಪಡಿಸಲಾಗಿತ್ತು. ಕಾಟೇರ ಸೆಲೆಬ್ರಿಟಿ ಶೋ ನೋಡಿದ ನಟ ನಟಿಯರು ಮೆಚ್ಚುಗೆ ವ್ಯಕ್ತಪಡಿಸಿದರು ಈ ವೇಳೆ ನಟ ಕಿಚ್ಚ ಸುದೀಪ್ ಅವರಿಗೂ ಕೂಡ ಆಹ್ವಾನ ಹೋಗಿತ್ತಂತೆ. ಆದರೆ ಶೂಟಿಂಗ್ ನಲ್ಲಿ ಬಿಝಿ ಇದ್ದ ಕಾರಣ ಬರಲು ಸಾಧ್ಯವಾಗಿರಲಿಲ್ಲ. ಆದರೆ ಬೆಂಗಳೂರಿಗೆ ಬಂದ ಕೂಡಲೇ ಸಿನಿಮಾ ನೋಡ್ತೀನಿ ಅನ್ನುವ ಮಾತು ಹೇಳಿದ್ದರಂತೆ. ಆದರೆ ಸುದ್ದಿ ಬಂದಾಗ ದರ್ಶನ್ ಹಾಗೂ ಚಿತ್ರತಂಡದವರು ದುಬೈಗೆ ಹಾರಿದ್ದರು. ಇದೀಗ ದರ್ಶನ್ ಹಾಗೂ ಸ್ನೇಹಿತರು ದುಬೈನಿಂದ ವಾಪಸ್ ಆಗಿದ್ದಾರೆ.

    ಇದನ್ನೂ ಕೂಡ ಓದಿ : ಕಾಟೇರ ಸಿನಿಮಾಗೆ ದರ್ಶನ್ ಪಡೆದ ಸಂಭಾವನೆ ಎಷ್ಟು ಗೊತ್ತಾ.? | D Boss Darshan

    ಕಾಟೇರ ಸಿನಿಮಾ ನೋಡಿದ್ರಾ ಅಂತ ಕಿಚ್ಚ ಸುದೀಪ್ ಅವರನ್ನ ಮಾಧ್ಯಮದವರು ಪ್ರಶ್ನಿಸಿದ್ದಕ್ಕೆ ಇನ್ನೂ ಇಲ್ಲ. ಶೂಟ್ ಕಾರಣ ನಿನ್ನೆ ತಾನೆ ಬೆಂಗಳೂರಿಗೆ ಬಂದೆ ನಿರ್ಮಾಪಕರು ಶೋ ನೋಡಲು ಕರೆದರೆ ಖಂಡಿತ ನೋಡ್ತೀನಿ ಅನ್ನುವ ಮಾತು ಹೇಳಿದ್ದಾರೆ. ಸದ್ಯದಲ್ಲೇ ಕಿಚ್ಚ ದಚ್ಚು, ಒಟ್ಟಿಗೆ ಕಾಟೇರ ಸಿನಿಮಾ ನೋಡಲಿದ್ದಾರೆ ಎನ್ನುವ ಮಾತು ಸೋಷಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿದೆ ಕಿಚ್ಚ ದಚ್ಚು ಮತ್ತೆ ಒಂದಾಗಬೇಕು ಎಂಬುದು ಕೋಟ್ಯಾಂತರ ಅಭಿಮಾನಿಗಳ ಆಸೆ. ಆಸೆ ಕಾಟೇರ ಸಿನಿಮಾದಿಂದ ಈಡೇರುತ್ತಾ ಕಾದು ನೋಡಬೇಕು.

  • Deepika Das | ನಾನು ‘ಯಶ್’ ತಂಗಿ ಎಂದು ದೀಪಿಕಾ ದಾಸ್ ಎಲ್ಲಿಯೂ ಹೇಳಲ್ಲಾ ಯಾಕೆ ಗೊತ್ತಾ? | Do you know why Deepika Das never said Yash’s sister?

    Deepika Das | ನಾನು ‘ಯಶ್’ ತಂಗಿ ಎಂದು ದೀಪಿಕಾ ದಾಸ್ ಎಲ್ಲಿಯೂ ಹೇಳಲ್ಲಾ ಯಾಕೆ ಗೊತ್ತಾ.? | Do you know why Deepika Das never said Yash’s sister?

    ಜಸ್ಟ್ ಕನ್ನಡ : ತುಂಬಾ ಜನರಿಗೆ ಗೊತ್ತಿಲ್ಲದ ವಿಷಯ ಏನಪ್ಪಾ ಅಂದರೆ, ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ದೀಪಿಕಾ ದಾಸ್(Deepika Das) ರವರು ರಾಕಿಂಗ್ ಸ್ಟಾರ್ ‘ಯಶ್’ ರವರ ತಂಗಿ ಅನ್ನುವುದು. ಆದರೆ ಇವರಿಬ್ಬರು ತಮ್ಮ ಸಂಬಂಧದ ಬಗ್ಗೆ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಹೇಳಿರುವ ನಿರ್ದರ್ಶನಗಳೂ ಇಲ್ಲ. ‘ಯಶ್’ ಕನ್ನಡ ಚಿತ್ರರಂಗದಲ್ಲಿ ಟಾಪ್ ನಟರಾಗಿದ್ದರೂ, ಯಶ್ ನನ್ನ ಅಣ್ಣ ಎಂದು ದೀಪಿಕಾ ದಾಸ್ ಹೇಳಿಕೊಳ್ಳಲ್ಲ ಗೊತ್ತಾ..? ಅದರ ಬಗ್ಗೆನೇ ಎಲ್ಲಾ ಮಾಹಿತಿಯನ್ನು ತಿಳಿಯೋಣ.

    ‘ದೀಪಿಕಾ ದಾಸ್’ ಹಾಸನದ ಹುಡುಗಿ ಅಷ್ಟೇ ಅಲ್ಲದೇ ಈ ಬಾರಿಯ ಬಿಗ್ ಬಾಸ್ ಸೀಸನ್ ನಲ್ಲಿ ಆಕರ್ಷಣಿಯ ಕೇಂದ್ರ ಬಿಂದು ಆಗಿದ್ದರು. ದೂದ್ ಸಾಗರ್ ಚಿತ್ರದ ಮೂಲಕ ಚಿತ್ರ ರಂಗಕ್ಕೆ ಎಂಟ್ರಿ ಕೊಟ್ಟಂತಹ ದೀಪಿಕಾ ದಾಸ್ ರವರಿಗೆ ಸಕ್ಕತ್ ಜನಪ್ರಿಯತೆ ತಂದು ಕೊಟ್ಟದ್ದು ನಾಗಿಣಿ ಅನ್ನೋ ಸೀರಿಯಲ್.

    ಇದನ್ನೂ ಓದಿ :- ದರ್ಶನ್ ‘ಕ್ರಾಂತಿ’ ಸಿನಿಮಾ ನೋಡುತ್ತಾರಾ ಕಿಚ್ಚ ಸುದೀಪ್.!

    Deepika Das | ನಾನು 'ಯಶ್' ತಂಗಿ ಎಂದು ದೀಪಿಕಾ ದಾಸ್ ಎಲ್ಲಿಯೂ ಹೇಳಲ್ಲಾ ಯಾಕೆ ಗೊತ್ತಾ.? |  Do you know why Deepika Das never said Yash's sister?

    ಹೆಚ್ಚಿನ ಜನಕ್ಕೆ ದೀಪಿಕಾ ದಾಸ್ ರವರು ರಾಕಿಂಗ್ ಸ್ಟಾರ್ ‘ಯಶ್’ ರವರ ತಂಗಿ ಅನ್ನುವುದು ಗೊತ್ತಿಲ್ಲ. ‘ಯಶ್’ ರವರ ಚಿಕ್ಕಮ್ಮನ ಮಗಳೇ ಈ ದೀಪಿಕಾ ದಾಸ್. ಆದರೆ ತಾನು ‘ಯಶ್’ ತಂಗಿ ಎಂದು ಎಲ್ಲಿಯೂ ಹೇಳಿಕೊಳ್ಳುವುದಿಲ್ಲ. ಅದಕ್ಕೆ ಕಾರಣ ‘ಯಶ್’ ರವರ ಹೆಸರನ್ನು ಹೇಳಿಕೊಂಡು ಅವಕಾಶಗಳನ್ನು ಪಡೆಯಲು ಪ್ರಯತ್ನ ಪಡುತ್ತಿದ್ದಾಳೆ ಎಂದು ಜನ ಮಾತಾಡಿಕೊಳ್ಳುವುದು ಈಕೆಗೆ ಇಷ್ಟ ಇಲ್ಲ. ಹಾಗೆಯೇ ‘ಯಶ್’ ರವರ ಹೆಸರನ್ನು ಹೇಳಿಕೊಂಡು ಅವಕಾಶಗಳನ್ನು ಪಡೆಯುವುದು ಈಕೆಗೂ ಇಷ್ಟ ಇಲ್ಲ, ಹಾಗಾಗಿ ಎಲ್ಲೂ ತಮ್ಮ ಸಂಬಂಧಗಳ ಬಗ್ಗೆ ದೀಪಿಕಾ ದಾಸ್ ಹೇಳಿಕೊಳ್ಳುವುದಿಲ್ಲ. ಹೆಸರು ಹೇಳಿಕೊಂಡು ಬರುವುದರಿಂದ ಏನೂ ಪ್ರಯೋಜನ ಇಲ್ಲ. ಪ್ರತಿಭೆ ಇದ್ದರೆ ಮಾತ್ರ ಏನಾದರೂ ಸಾಧನೆ ಮಾಡಲು ಸಾಧ್ಯ ಎಂದು ಹೇಳುತ್ತಾರೆ ದೀಪಿಕಾ ದಾಸ್.

    ಅಣ್ಣನಿಗೆ ಗೌರವ ಮತ್ತು ಹೆಮ್ಮೆ ತರುವಂತಹ ಸಾಧನೆ ಮಾಡುವುದಾಗಿ ಹೇಳಿಕೊಂಡಿದ್ದಾರೆ. ‘ಯಶ್’ ನನ್ನ ಅಣ್ಣ ಎಂದು ಹೇಳಿಕೊಂಡು ಇಂಡಸ್ಟ್ರಿಯಲ್ಲಿ ಯಾವತ್ತೂ ಅದರ ಕ್ರೆಡಿಟ್ ಪಡೆಯಲು ‘ದೀಪಿಕಾ ದಾಸ್’ ಪ್ರಯತ್ನ ಮಾಡಿಲ್ಲ ಎನ್ನುವುದು ಗಾಂಧಿ ನಗರದ ಮಾತು. ಇದು ನಿಜಕ್ಕೂ ಒಳ್ಳೆಯ ಗುಣ ಅಲ್ಲವೇ. ತಮ್ಮ ಸ್ವಂತ ಪರಿಶ್ರಮದಿಂದ ಮೇಲೆ ಬಂದರೆ ಅದರಲ್ಲಿ ಇರುವ ಕಿಕ್ ಬೇರೇನೇ. ಯಾಕಂದ್ರೆ ಬೇರೆಯವರ ಹೆಸರು ಹೇಳಿಕೊಂಡು ಬೆಳೆದರೆ ಅದು ಎಷ್ಟು ದಿನ ನಮ್ಮ ಕೈ ಹಿಡಿಯುತ್ತೆ ಅಲ್ಲವೇ.

    ಇದನ್ನೂ ಓದಿ :- ಹೊಸ ದಾಖಲೆ ಬರೆದ ಕ್ರಾಂತಿ ಸಿನಿಮಾ.! ಎಲ್ಲಾ ಟಿಕೆಟ್ ಗಳು ಈಗಾಗಲೇ ಸೋಲ್ಡ್ ಔಟ್.! ಶಾಕಿಂಗ್!

    ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ಜಸ್ಟ್ ಕನ್ನಡ (Just Kannada) ಲೈಕ್ ಮತ್ತು ಶೇರ್ ಮಾಡೋದನ್ನ ಮರೆಯಬೇಡಿ.

    ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

    ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..
  • ಅಂದು ಕ್ರಾಂತಿ ಸಿನಿಮಾ ಚಿತ್ರೀಕರಣ 15 ದಿನ ನಿಲ್ಲಿಸಿದ್ದರು ಏಕೆ ಗೊತ್ತೆ.? | Darshan Thoogudeepa

    ಸ್ಯಾಂಡಲ್‌ ವುಡ್‌ ನಲ್ಲಿ ಇದೀಗ ಅಭಿಮಾನಿಗಳ ಮಧ್ಯೆಯೆ ಕಿಚ್ಚು ಹೊತ್ತಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಷ್ಟೇ ಅಲ್ಲದೇ ಹೊರಗಡೆಯೂ ಕೂಡ ಈ ಫ್ಯಾನ್‌ ವಾರ್‌ ಹಬ್ಬಿಕೊಂಡಿದೆ. ಇದಕ್ಕೆ ಒಂದು ತಾಜಾ ಉದಾಹರಣೆಯೆಂದರೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ನಡುವಿನ ಫ್ಯಾನ್ ವಾರ್.

    ಇದನ್ನೂ ಕೂಡ ಓದಿ : Rishabh Shetty | ರಿಷಬ್ ಶೆಟ್ಟಿ ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು(2012-2023) | Rishabh Shetty Hit And Flop Movies

    ಹೊಸಪೇಟೆಯಲ್ಲಿ ನಡೆದ ಕ್ರಾಂತಿ ಚಿತ್ರದ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ದರ್ಶನ್ ಮೇಲೆ ಚಪ್ಪಲಿ ಎಸೆದು ಕಿಡಿಗೇಡಿಗಳು ಫ್ಯಾನ್‌ ವಾರ್‌ ಅನ್ನು ಸದುಪಯೋಗಪಡಿಸಿಕೊಂಡಿದ್ದರು. ಯಾರೋ ಮೂರನೇಯವರು , ಕಿಡಿಗೇಡಿಗಳು ಮಾಡಿದ ನೀಚ ಕೆಲಸದಿಂದ ಕೆಸರೆರೆಚಿಸಿಕೊಂಡವರು ಮಾತ್ರ ದರ್ಶನ್ ಹಾಗೂ ಪುನೀತ್ ರಾಜ್‌ಕುಮಾರ್‌ ಅವರ ಅಭಿಮಾನಿಗಳು.

    I know why the shooting of Kranti movie was stopped for 15 days

    ಹೌದು, ಈ ಕೃತ್ಯವನ್ನು ಎಸಗಿದ್ದು ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿಗಳೇ ಎಂದು ದರ್ಶನ್ ಅಭಿಮಾನಿಗಳು ಆರೋಪಿಸಿದರೆ, ಇದನ್ನು ಯಾವುದೇ ಕಾರಣಕ್ಕೂ ಅಪ್ಪು ಫ್ಯಾನ್ಸ್ ಮಾಡಿಲ್ಲ ಎಂದು ಅವರ ವಾದಕ್ಕೆ ಪ್ರತಿವಾದವೆಂಬಂತೆ ಪುನೀತ್ ರಾಜ್‌ ಕುಮಾರ್‌ ಫ್ಯಾನ್ಸ್ ಇದ್ದರು. ಹೀಗಾಗಿ ಇಬ್ಬರು ಬಹುದೊಡ್ಡ ಕಲಾವಿದರ ಅಭಿಮಾನಿಗಳ ನಡುವಿನ ಈ ಕಿಡಿಗೇಡಿಗಳು ಹಚ್ಚಿದ ಕಿಚ್ಚು ಮತ್ತಷ್ಟು ಹೆಚ್ಚಾಗಿ ದೊಡ್ಡ ಮಟ್ಟದ ವಿವಾದವನ್ನೇ ಹುಟ್ಟುಹಾಕಿ, ದೊಡ್ಡ ಮಟ್ಟದಲ್ಲೇ ಸದ್ದು ಮಾಡಿತ್ತು.

    ಇದನ್ನೂ ಕೂಡ ಓದಿ : Dr. Puneeth Rajkumar ಪುನೀತ್ ರಾಜ್ ಕುಮಾರ್ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (2002-2021) | Puneeth Rajkumar Hit And Flop Movies

    I know why the shooting of Kranti movie was stopped for 15 days

    ಅಷ್ಟೇ ಅಲ್ಲದೇ ಇದಕ್ಕೆ ಪೂರಕವೆಂಬಂತೆ ಫ್ಯಾನ್‌ ವಾರ್‌ ಜೊತೆಗೆ ಇದರಲ್ಲಿ ಸ್ಟಾರ್ ಗಳ ಮಧ್ಯೆ ವಾರ್ ಕೂಡ ಇದೆ. ಹೀಗಾಗಿ ಯಾರೂ ಕೂಡ ಈ ವಿಷಯದ ಕುರಿತು ಮಾತನಾಡುತ್ತಿಲ್ಲ ಎಂಬ ಅಭಿಪ್ರಾಯವೂ ಸಹ ಕೆಲವರಲ್ಲಿ ವ್ಯಕ್ತವಾಗಿತ್ತು. ಈ ಅಭಿಪ್ರಾಯದ ಕುರಿತಾಗಿ ನಿರ್ಮಾಪಕ ಉಮೇಶ್ ಬಣಕರ್ (Producer Umesh Banaker) ಪ್ರತಿಕ್ರಿಯೆ ನೀಡಿದ್ದಾರೆ. ಸಿನಿರಸಿಕರ ಸ್ಟಾರ್‌ ವಾರ್‌ ಅಭಿಪ್ರಾಯದ ಕುರಿತು ಮಾತನಾಡಿದ ಉಮೇಶ್ ಬಣಕರ್, ” ಇವೆಲ್ಲಾ ಸತ್ಯಕ್ಕೆ ತುಂಬಾ ದೂರವಾದ ಮಾತು. ಪುನೀತ್ ರಾಜ್‌ಕುಮಾರ್ ನಿಧನ ಹೊಂದಿದ ವಿಷಯ ತಿಳಿಯುತ್ತಿದ್ದಂತೆ ಶೂಟಿಂಗ್‌ನಲ್ಲಿ ತೊಡಗಿಕೊಂಡಿದ್ದ ದರ್ಶನ್ ಆ ಕೂಡಲೇ ಶೂಟಿಂಗ್ ನಿಲ್ಲಿಸಿದ್ದರು. ಅಲ್ಲದೇ 15 ದಿನಗಳ ಕಾಲ ಯಾವುದೇ ಶೂಟಿಂಗ್ ಮಾಡುವುದು ಬೇಡ ಎಂದು ಹೇಳಿದ್ದರು. ಇಬ್ಬರ ನಡುವೆ ಅಂತಹ ಸ್ನೇಹ ಇತ್ತು.” ಎಂದು ತಿಳಿಸಿದರು. ಅವರ ಸ್ನೇಹಕ್ಕೆ ಈ ವಿಷಯವೇ ಸಾಕ್ಷಿ ಎಂದಿದ್ದಾರೆ.

    I know why the shooting of Kranti movie was stopped for 15 days

    ಈ ಫ್ಯಾನ್‌ವಾರ್ ಎಂಬುದನ್ನು ಒಬ್ಬ ಕಲಾವಿದನ ನಿಜವಾದ ಅಭಿಮಾನಿಗಳು ಮಾಡಲು ಸಾಧ್ಯವಿಲ್ಲ, ಇಬ್ಬರ ಮಧ್ಯೆ ತಂದಿಟ್ಟು ತಮಾಷೆ ನೋಡಿ ತೀಟೆ ತೀರಿಸಿಕೊಳ್ಳುವವರು ಮಾತ್ರ ಮಾಡುವ ಕೆಲಸವಿದು. ಹೇಗಿದ್ದರೂ ಜಿಯೋದಲ್ಲಿ ಮೂರು ತಿಂಗಳಿಗಳಿಗೊಮ್ಮೆ ಹಣ ಕಟ್ಟಿ ಡೇಟಾ ಬಳಸುವ ಅವಕಾಶವಿದೆ, ಹೀಗಾಗಿ ಕೆಲಸವಿಲ್ಲದ ಕಿಡಿಗೇಡಿಗಳು ಇಬ್ಬರ ಅಭಿಮಾನಿಗಳ ನಡುವೆ ಸಾಮಾಜಿಕ ಜಾಲತಾಣ ಎಂಬ ಆಯುಧ ಬಳಸಿ ಬೆಂಕಿ ಹಚ್ಚುತ್ತಿದ್ದಾರೆ.” ಎಂದಿದ್ದಾರೆ

    ಇದನ್ನೂ ಕೂಡ ಓದಿ : Darshan Thoogudeepa, (ದರ್ಶನ್) ಅವರ ಹಿಟ್ ಹಾಗು ಫ್ಲಾಪ್ ಸಿನಿಮಾಗಳು (2002-2023) | Darshan Hit and Flop Movies

    ಇನ್ನು ದರ್ಶನ್ ಆಪ್ತ ಗೆಳೆಯರಲ್ಲಿ ಒಬ್ಬರಾದ ವಿನೋದ್ ಪ್ರಭಾಕರ್ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಪುನೀತ್ ರಾಜ್‌ಕುಮಾರ್ ನಿಧನ ಹೊಂದಿದಾಗ ದರ್ಶನ್ ಅವರು ಯಾವ ರೀತಿ ಪ್ರತಿಕ್ರಿಯಿಸಿದ್ರು ಎಂಬುದನ್ನು ತಿಳಿಸಿದ್ದರು. ದರ್ಶನ್‌ ಆಗಲಿ ಪುನಿತ್‌ ರಾಜ್ ಕುಮಾರ್‌ ಅಗಲಿ ತಮ್ಮ ಅಭಿಮಾನಿಗಳಿಗೆ ವಾರ್‌ ಮಾಡಲು ಪ್ರೇರೆಪಿಸಿಲ್ಲ, ಅಂತಹ ಹೇಳಿಕೆಗಳನ್ನು ಇದುವರೆಗೂ ನೀಡಿಲ್ಲ ಎಂದಿದ್ದಾರೆ.

  • ಕಾಟೇರ ಸಿನಿಮಾಗೆ ದರ್ಶನ್ ಪಡೆದ ಸಂಭಾವನೆ ಎಷ್ಟು ಗೊತ್ತಾ.? | D Boss Darshan | D56 Movie | Darshan Thoogudeepa

    Darshan Thoogudeepa : ಕನ್ನಡ ಚಿತ್ರರಂಗದ ಸುಲ್ತಾನ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕಾಟೇರ ಸಿನಿಮಾದ ಗೆಲುವಿನ ಸಂಭ್ರಮದಲ್ಲಿ ಇದ್ದಾರೆ. ಕಾಟೇರ ಸಿನಿಮಾ ಮೊದಲ 4 ದಿನದಲ್ಲೇ ಕೋಟಿ ಕ್ಲಬ್ ಸೇರಿ ಬಾಕ್ಸ್ ಆಫೀಸ್ ಕಲೆಕ್ಷನ್ ಅಲ್ಲಿ ಹೊಸ ಇತಿಹಾಸವನ್ನ ಬರೆದಿದೆ. ಇದೀಗ ಕಾಟೇರ ಸಿನಿಮಾದ ನಂತರ ನಟ ದರ್ಶನ್ ಅವರು ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ವೊಂದನ್ನ ನೀಡಿದ್ದಾರೆ.

    ಇದನ್ನೂ ಕೂಡ ಓದಿ : ಡಿ ಬಾಸ್ ದರ್ಶನ್ ಅಭಿನಯದ ಕಾಟೇರ ಚಿತ್ರದ ದಾಖಲೆಯನ್ನ ಕೇವಲ 2 ಗಂಟೆಯಲ್ಲೇ ಧೂಳಿಪಟ ಮಾಡಿದೆಯಂತೆ ಯುವ ಸಿನಿಮಾದ ಟೀಸರ್.!

    ಡಿ ಬಾಸ್ ದರ್ಶನ್ ಅವರ ಹುಟ್ಟುಹಬ್ಬದ ಪ್ರಮುಕ್ತ 56ನೇ ಸಿನಿಮಾದ ಟೈಟಲ್ ಅನ್ನ ‘ಕಾಟೇರ’ ಎಂದು ಘೋಷಣೆ ಮಾಡಲಾಗಿತ್ತು. ಹಾಗಾದರೆ ಸ್ಯಾಂಡಲ್ ವುಡ್ ನಟರಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನ ಹೊಂದಿದ್ದಾರೆ ಎಂದು ಕರೆಸಿಕೊಳ್ಳುವ ಡಿ ಬಾಸ್ ಅವರು ‘ಕಾಟೇರ’ ಸಿನಿಮಾಕ್ಕೆ ಎಷ್ಟು ಸಂಭಾವನೆ ಪಡೆದಿದ್ದಾರೆ. ನಟ ದರ್ಶನ್ ಅವರ ಸಿನಿಮಾ ಆರಂಭವಾಗಿ ರಿಲೀಸ್ ಆಗುವ ತನಕ ಸದಾ ಸುದ್ದಿಯಲ್ಲೇ ಇರುತ್ತದೆ. ಹಾಗೂ ಪ್ರತಿಯೊಂದು ಚಿಕ್ಕ ವಿಷಯಕ್ಕೂ ಕೂಡ ದೊಡ್ಡ ಮಟ್ಟದಲ್ಲಿಯೇ ಸುದ್ದಿ ಮಾಡುತ್ತದೆ. 56ನೇ ಸಿನಿಮಾದ ಟೈಟಲ್ ಘೋಷಣೆಯಲ್ಲಿ ಕೂಡ ಸಿಕ್ಕಾಪಟ್ಟೆ ಸುದ್ದಿಯಲ್ಲೇ ಇದ್ದ ಸಿನಿಮಾಕ್ಕೆ ಕಾಟೇರ ಎಂದು ಹೆಸರಿಡಲಾಗಿತ್ತು. ಈ ಚಿತ್ರವನ್ನ ಚೌಕ ಮತ್ತು ರಾಬಟ್ ಖ್ಯಾತಿಯ ತರುಣ್ ಸುಧೀರ್ ಅವರು ನಿರ್ದೇಶನ ಮಾಡುತ್ತಿದ್ದಾರೆ.

    ‘ಕಾಟೇರ’ ಸಿನಿಮಾದಲ್ಲಿ ಕನಸಿನ ರಾಣಿ ಮಾಲಾಶ್ರೀ ಅವರ ಮಗಳು ಮೊದಲ ಬಾರಿಗೆ ಬೆಳ್ಳಿತೆರೆಗೆ ಕಾಲಿಡುತ್ತಿದ್ದು, ದರ್ಶನ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಈ ಸಿನಿಮಾದಲ್ಲಿ ನಟನೆ ಮಾಡಲು ನಟ ದರ್ಶನ್ ದಾಖಲೆಯ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಗಾಂಧಿ ನಗರದಲ್ಲಿ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ನಟ ದರ್ಶನ್ ಅವರು ಕಾಟೇರ ಸಿನಿಮಾದಲ್ಲಿ ನಟನೆಯನ್ನ ಮಾಡಲು ಸುಮಾರು 15 ರಿಂದ 20 ಕೋಟಿ ಸಂಭಾವನೆಯನ್ನ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಯನ್ನ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

    ಇದನ್ನೂ ಕೂಡ ಓದಿ : ಈ ಒಂದು ಕಾರಣಕ್ಕೆ ರಚಿತಾ ರಾಮ್ ಇನ್ನು ಮದುವೆನೇ ಆಗಿಲ್ಲ.! ಅಷ್ಟಕ್ಕೂ ಕಾರಣ ಏನು ಗೊತ್ತಾ.?

  • Katera : ಡಿ ಬಾಸ್ ‘ಕಾಟೇರ’ ಸಿನಿಮಾ ನೋಡಿ ಖುಷಿ ಪಟ್ಟ ಮೇಘಾ ಶೆಟ್ಟಿ : ನಟಿಯ ವಿಮರ್ಶೆ ಹೀಗಿದೆ

    Katera : ಸ್ಯಾಂಡಲ್ ವುಡ್ ನಟ ಡಿ ಬಾಸ್ ದರ್ಶನ್ ಅಭಿನಯದ ‘ಕಾಟೇರ’ ಬಾಕ್ಸ್ ಆಫೀಸ್ ನಲ್ಲಿ ಅಬ್ಬರಿಸುತ್ತಿದೆ. 100 ಕೋಟಿ ರೂಪಾಯಿ ಕಲೆಕ್ಷನ್ ನತ್ತ ದಾಪುಗಾಲಿಡುತ್ತಿದೆ ಕಾಟೇರ. ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳಿಗಾಗಿ ‘ಕಾಟೇರ’ ಚಿತ್ರತಂಡದಿಂದ ಜನವರಿ 3ರಂದು(ಬುಧವಾರ) ಬೆಂಗಳೂರಿನಲ್ಲಿ ಸೆಲೆಬ್ರಿಟಿ ಶೋವನ್ನ ಆಯೋಜಿಸಲಾಗಿತ್ತು.

    ರಮೇಶ್ ಅರವಿಂದ್, ರವಿಚಂದ್ರನ್, ಬಿ ಸರೋಜ ದೇವಿ, ಶ್ರುತಿ, ಮಾಲಾಶ್ರೀ, ಧನಂಜಯ್, ವಿನೋದ್ ಪ್ರಭಾಕರ್, ಸತೀಶ್ ನೀನಾಸಂ, ಅಮೂಲ್ಯ, ಮೇಘಾ ಶೆಟ್ಟಿ, ಧನ್ವೀರ್ ಗೌಡ, ಅರವಿಂದ್ ಕೆ ಪಿ, ದಿವ್ಯಾ ಉರುಡುಗ, ರಕ್ಷಿತಾ ಪ್ರೇಮ್, ಮನೋರಂಜನ್ ರವಿಚಂದ್ರನ್, ನಿರ್ದೇಶಕರಾದ ಯೋಗ ರಾಜ್ ಭಟ್, ಚೇತನ್ ಕುಮಾರ್, ಕೃಷ್ಣ, ನಿಶ್ವಿಕ ನಾಯ್ಡು, ಎಸ್. ನಾರಾಯಣ್, ಮೇಘನಾ ಗಾಂವ್ಕರ್, ವಸಿಷ್ಠ ಸಿಂಹ, ಹರಿ ಪ್ರಿಯ, ಪ್ರಿಯಾಂಕ, ಉಪೇಂದ್ರ, ಸುಮಲತಾ, ಅಭಿಷೇಕ್, ಅಂಬರೀಶ್, ಸಾಧು ಕೋಕಿಲ, ದೊಡ್ಡಣ್ಣ ಸೇರಿ ಸಾಕಷ್ಟು ಮಂದಿ ಕಾಟೇರ ಸೆಲೆಬ್ರಿಟಿ ಶೋಗೆ ಆಗಮಿಸಿದ್ದರು.

    ಇದನ್ನೂ ಕೂಡ ಓದಿ : Katera : ಕಾಟೇರ ಸಿನೆಮಾ ನೋಡಿ ಬಂದು ಕಣ್ಣೀರಾಕುತ್ತಾ ದರ್ಶನ್ ಬಗ್ಗೆ ನಟಿ ರಕ್ಷಿತಾ ಹೇಳಿದ್ದೇನು.?

    ಡಿ ಬಾಸ್ ದರ್ಶನ್ ಅಭಿನಯದ ‘ಕಾಟೇರ’ ಚಿತ್ರ ನೋಡಿ ಅಭಿಮಾನಿಗಳು ಮಾತ್ರವಲ್ಲದೇ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಕೂಡ ಫಿದಾ ಆಗಿದ್ದಾರೆ. ಹಾಗೆಯೇ ಕಿರುತೆರೆ ಮತ್ತು ಹಿರಿತೆರೆಯ, ಜೊತೆ ಜೊತೆಯಲಿ ಖ್ಯಾತಿಯ ಮೇಘಾ ಶೆಟ್ಟಿ ಅವರು ಕೂಡ ‘ಕಾಟೇರ’ ಚಿತ್ರವನ್ನು ವೀಕ್ಷಿಸಿದ್ದಾರೆ. ‘ಇದು 2024 ರ ಬೆಸ್ಟ್ ಫಿಲ್ಮ್’ ಎಂದು ತಮ್ಮ ವಿಮರ್ಶೆಯನ್ನು ಒಂದೇ ಮಾತಿನಲ್ಲಿ ತಿಳಿಸಿದ್ದಾರೆ. ಖ್ಯಾತ ನಿರ್ದೇಶಕ ತರುಣ್ ಸುಧೀರ್ ಅವರ ನಿರ್ದೇಶನದಲ್ಲಿ ಮೂಡಿ ಬಂದ ಈ ಸಿನಿಮಾಗೆ ರಾಕ್ ಲೈನ್ ವೆಂಕಟೇಶ್ ಅವರು ಬಂಡವಾಳ ಹೂಡಿದ್ದಾರೆ.

    ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

    ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.
    
    ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..
  • Katera : ಕಾಟೇರ ಸಿನೆಮಾ ನೋಡಿ ಬಂದು ಕಣ್ಣೀರಾಕುತ್ತಾ ದರ್ಶನ್ ಬಗ್ಗೆ ನಟಿ ರಕ್ಷಿತಾ ಹೇಳಿದ್ದೇನು.?

    Katera : ಕಾಟೇರ ಸಿನಿಮಾ ಜನ ಮೆಚ್ಚುಗೆಯ ಜೊತೆಗೆ ಕೋಟಿ ಕೋಟಿ ಕಲೆಕ್ಷನ್ ಮಾಡುವುದರ ಜೊತೆಗೆ ಶತಕೋಟಿಯ ಸನಿಹಕ್ಕೆ ಬಂದು ನಿಂತಿದೆ. ಈ ಖುಷಿಯನ್ನು ಇಡೀ ಚಿತ್ರ ತಂಡ ಸಂಭ್ರಮಿಸಿತು. ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳಿಗೆ ಸಿನಿಮಾ ಪ್ರದರ್ಶನಕ್ಕೆ ಆಹ್ವಾನಿಸಿತ್ತು. ಅದರಂತೆ ಚಂದನವನದ ಹಿರಿ ಕಿರಿ ಕಲಾವಿದರು ಕಾಟೇರ ಸೆಲೆಬ್ರಿಟಿ ಶೋಗೆ ಆಗಮಿಸಿದ್ದರು. ಈ ವೇಳೆ ಮಾತನಾಡಿದ ನಟಿ ರಕ್ಷಿತಾ, ಕಣ್ಣೀರು ಹಾಕುತ್ತಲೇ ದರ್ಶನ್ ಬಗ್ಗೆ ಎಂತಹ ಮಾತು ಹೇಳಿದ್ದಾರೆ ಗೊತ್ತಾ? ನಿಜಕ್ಕೂ ಶಾಕ್ ಆಗ್ತೀರಾ.?

    ಇದನ್ನೂ ಕೂಡ ಓದಿ : Katera : ದರ್ಶನ್ ಅವರ ಕಾಟೇರಾ ಸಿನೆಮಾ ನೋಡಿ ಶಾಕಿಂಗ್ ಹೇಳಿಕೆ ಕೊಟ್ಟ ಶಿವಣ್ಣ ! ಶಾಕ್ ಆದ ಡಿ ಬಾಸ್ ದರ್ಶನ್

    ಬೆಂಗಳೂರಿನ ಓರಿಯನ್ ಮಾಲ್ ನಲ್ಲಿ ಕಾಟೇರ ಸಿನಿಮಾದ ಸೆಲೆಬ್ರಿಟಿ ಶೋ ಆಯೋಜಿಸಲಾಗಿತ್ತು. ಸ್ಯಾಂಡಲ್‌ವುಡ್‌ನಿಂದ ಹಿರಿಯ ನಟಿ ಬಿ. ಸರೋಜ ದೇವಿ, ರಮೇಶ್ ಅರವಿಂದ್, ಯೋಗರಾಜ್ ಭಟ್, ಅಮೂಲ್ಯ ಸೇರಿ ಹಲವು ಕಲಾವಿದರು ಆಗಮಿಸಿ ಸಿನಿಮಾ ವೀಕ್ಷಿಸಿ ಸಂಭ್ರಮಿಸಿದರು. ಅದ್ಯಾವ ಮಟ್ಟಿಗೆ ಜನ ಸೇರಿತೆಂದರೆ ಸ್ವತಃ ದರ್ಶನ್ ಗೂ ಮತ್ತು ನಿರ್ಮಾಪಕ ರಾಕ್ ಲೈನ್ ಗೂ ಕುಳಿತುಕೊಳ್ಳಲು ಸೀಟ್ ಸಿಕ್ಕಿರಲಿಲ್ಲ. ಮೆಟ್ಟಿಲ ಮೇಲೆ ಕುಳಿತುಕೊಂಡೇ ಸಿನಿಮಾ ವೀಕ್ಷಿಸಿದ್ದಾರೆ. ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ರಮೇಶ್ ಅರವಿಂದ್, ಬಿ ಸರೋಜ ದೇವಿ ನಟಿ ಶ್ರುತಿ, ಮಾಲಾಶ್ರೀ, ಧನಂಜಯ್, ವಿನೋದ್, ಪ್ರಭಾಕರ್, ಸತೀಶ್ ನೀನಾಸಂ, ಅಮೂಲ್ಯ, ಮೇಘಾ ಶೆಟ್ಟಿ, ಧನ್ವೀರ್ ಗೌಡ, ಅರವಿಂದ್ ಕೆ ಪಿ, ದಿವ್ಯಾ ಉರುಡುಗ, ರಕ್ಷಿತಾ ಪ್ರೇಮ್ ಕುಮಾರ್, ರವಿಚಂದ್ರನ್, ಮನೋರಂಜನ್, ರವಿಚಂದ್ರನ್, ನಿರ್ದೇಶಕರಾದ ಯೋಗ ರಾಜ್ ಭಟ್, ಚೇತನ್ ಕುಮಾರ್, ಕೃಷ್ಣ, ನಿಶ್ವಿಕ ನಾಯ್ಡು, ಎಸ್. ನಾರಾಯಣ್, ಮೇಘನಾ ಗಾಂವ್ಕರ್, ವಸಿಷ್ಠ ಸಿಂಹ, ಹರಿ ಪ್ರಿಯ, ಪ್ರಿಯಾಂಕ, ಉಪೇಂದ್ರ, ಸುಮಲತಾ, ಅಭಿಷೇಕ್, ಅಂಬರೀಶ್, ಸಾಧು ಕೋಕಿಲ, ದೊಡ್ಡಣ್ಣ ಸೇರಿ ಸಾಕಷ್ಟು ಮಂದಿ ಕಾಟೇರ ಸೆಲೆಬ್ರಿಟಿ ಶೋಗೆ ಆಗಮಿಸಿದ್ದರು.

    ಇದನ್ನೂ ಕೂಡ ಓದಿ : Sangeetha Sringeri : ಸಂಗೀತಾ ಶೃಂಗೇರಿ ಒಂದು ವಾರಕ್ಕೆ ಸಂಭಾವನೆ ಎಷ್ಟು.?

    ಕಾಟೇರ ಸಿನಿಮಾವನ್ನ ವೀಕ್ಷಿಸಿದ ಬಳಿಕ ಮಾತನಾಡಿದ ನಟಿ ರಕ್ಷಿತಾ ಪ್ರೇಮ್ ತುಂಬಾನೇ ಭಾವುಕರಾಗಿದ್ದಾರೆ. ಹೌದು, ದರ್ಶನ್ ಅವರ ಆಪ್ತ ಸ್ನೇಹಿತೆಯಾಗಿರುವ ರಕ್ಷಿತಾ ಪ್ರೇಮ್, ದರ್ಶನ್ ಅವರ ಕಾಟೇರ ಸಿನಿಮಾವನ್ನ ನೋಡಿ ಜೈ ಡಿಬಾಸ್ ಎನ್ನುತ್ತ ಮಾತು ಆರಂಭಿಸಿದ್ದಾರೆ. ನಾನು ದರ್ಶನ್ ಅವರ ಅಭಿಮಾನಿ ಆಗಿ ಸಿನಿಮಾ ನೋಡಿದೆ. ಕಾಟೇರ ಸಿನಿಮಾ ನೋಡುತ್ತ ಕಣ್ಣಲ್ಲಿ ನೀರು ಬಂತು. ದರ್ಶನ್ ಅವರನ್ನ ತುಂಬಾನೇ ಡಿಫರೆಂಟಾಗಿ ತೋರಿಸಿದ್ದಾರೆ. ಪ್ರತಿಯೊಬ್ಬರು ಬಂದು ಸಿನಿಮಾ ನೋಡಿ ಎಂದಿದ್ದಾರೆ.

    ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

    ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.
    
    ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..
  • Sangeetha Sringeri : ಸಂಗೀತಾ ಶೃಂಗೇರಿ ಒಂದು ವಾರಕ್ಕೆ ಸಂಭಾವನೆ ಎಷ್ಟು.?

    Sangeetha Sringeri : ಕನ್ನಡದ ಚಾರ್ಲಿ ಸಿನಿಮಾದ ಮುಖಾಂತರ ಅತಿ ಹೆಚ್ಚು ಪರಿಚಿತರಾದವರು ಸಂಗೀತ ಶೃಂಗೇರಿ. ಅದಕ್ಕಿಂತ ಮುಂಚೆ ಈ ನಟಿ ಹರ ಹರ ಧಾರಾವಾಹಿ ಮೂಲಕ ಒಂದ ಷ್ಟು ಜನಕ್ಕೆ ಪರಿಚಿತರಾಗಿದ್ದರು. ಇದೆ ನೇಮ್ ಮತ್ತು ಫೇಮ್ ನಿಂದ ಸದ್ಯ ಬಿಗ್ ಬಾಸ್ ಮನೆಯಲ್ಲಿದ್ದಾರೆ. ಬಿಗ್ ಬಾಸ್ ನಲ್ಲಿ ಇರುವ ಎಲ್ಲ ಸ್ಪರ್ಧೆಗಳಲ್ಲಿ ಸಂಗೀತ ಶೃಂಗೇರಿ ಅವರು ಪ್ರಬಲ ಸ್ಪರ್ಧಿ ಅಂತ ಹೇಳಬಹುದು. ಇನ್ನು ಬಿಗ್ ಬಾಸ್ ಮನೆಯಲ್ಲಿ ಸಂಗೀತ ಶೃಂಗೇರಿ ಅವರು ಯಾವ ರೀತಿ ಆಟ ಆಡ್ತಿದ್ದಾರೆ ಅಂತ ನಿಮಗೆಲ್ಲ ಗೊತ್ತೇ ಇದೆ.

    ಇದನ್ನೂ ಕೂಡ ಓದಿ : Katera : ದರ್ಶನ್ ಅವರ ಕಾಟೇರಾ ಸಿನೆಮಾ ನೋಡಿ ಶಾಕಿಂಗ್ ಹೇಳಿಕೆ ಕೊಟ್ಟ ಶಿವಣ್ಣ ! ಶಾಕ್ ಆದ ಡಿ ಬಾಸ್ ದರ್ಶನ್

    ಅಸಮರ್ಥರಾಗಿ ಎಂಟ್ರಿ ಕೊಟ್ಟ ಸಂಗೀತ ಶೃಂಗೇರಿ ಅವರು ಫಿಸಿಕಲ್ ಟಾಸ್ಕ್ ಇರಬಹುದು ಅಥವಾ ಯಾವುದೋ ಒಂದು ಮಾತಿಗೆ ಸ್ಟಾಂಡ್ ತೆಗೆದುಕೊಳ್ಳುವುದು ಇರಬಹುದು. ಅದರಲ್ಲಿ ಸಂಗೀತ ಶೃಂಗೇರಿ ಅವರು ಮುಂದಿರುತ್ತಾರೆ. ಬಿಗ್ ಬಾಸ್ ಮನೆನಲ್ಲಿ ಯಾವುದೇ ಗಲಾಟೆ ಆದ್ರೂ ಅಲ್ಲಿ ಸಂಗೀತ ಶೃಂಗೇರಿ ಅವರ ಹೆಸರು ಕೇಳಿ ಬರುತ್ತೆ. ಇನ್ನು ಯಾವುದೇ ವಿಷಯ ಇದ್ದರೂ ಅದು ಕೊನೆಯಾಗುವುದು ಸಂಗೀತ ಶೃಂಗೇರಿ ಅವರ ಹೆಸರಿನಿಂದಲೇ. ಅದರಲ್ಲೂ ಸಂಗೀತ ಮತ್ತೆ ವಿನಯ್ ಮಧ್ಯೆ ನಡೆಯುವ ಗಲಾಟೆ ಬಿಗ್ ಬಾಸ್ ಮನೆಯಲ್ಲಿ ಯಾವಾಗಲೂ ಶಬ್ದ ಮಾಡ್ತಾನೆ ಇರುತ್ತೆ.

    ಇನ್ನು ಬಿಗ್ ಬಾಸ್ ನಲ್ಲಿ ನಡೆದ ಬಳೆ ವಿಚಾರದಲ್ಲಿ ಸಂಗೀತ ಶೃಂಗೇರಿ ಅತಿ ಹೆಚ್ಚು ಸದ್ದು ಮಾಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಈ ವರ್ಷದ ಬಿಗ್ ಬಾಸ್ ವಿನ್ನರ್ ಯಾರು ಅಂತ ನೋಡಿದ್ರೆ, ಮೊದಲ ಹೆಸರು ಕೇಳಿ ಬರುವುದೇ ಸಂಗೀತ ಅವರದ್ದು. ಹಾಗಾದರೆ ಈ ಸಂಗೀತ ಶೃಂಗೇರಿ ಯಾರು.? ಅವರ ಹಿನ್ನಲೆ ಏನು.? ಬಿಗ್ ಬಾಸ್ ಮನೆಯಲ್ಲಿ ಒಂದು ವಾರಕ್ಕೆ ಎಷ್ಟು ಸಂಭಾವನೆ ಪಡೀತಾರೆ.? ಅನ್ನುವುದನ್ನ ತಿಳಿಯೋಣ.

    ಇದನ್ನೂ ಕೂಡ ಓದಿ : Bigg Boss Kannada : ಕಾರ್ತಿಕ್ ಗೆ ಆತುರ ಜಾಸ್ತಿ ತಿರುಗಿಬಿದ್ದ ತನಿಷಾ ಕುಪ್ಪಂಡ

    ಸಂಗೀತ ಅವರು ಪರಿಚಯವಾಗಿರುವುದು ಸಿನಿಮಾ ಮತ್ತು ಧಾರಾವಾಹಿ ಮೂಲಕ. ಹಾಗಾಗಿ ಸಂಗೀತ ಶೃಂಗೇರಿ ಅವರು ಕ್ರೀಡಾ ಲೋಕದಲ್ಲಿ ಮಾಡಿದಂತಹ ಸಾಧನೆ ತುಂಬ ಜನರಿಗೆ ಗೊತ್ತಿಲ್ಲ. ಇನ್ನು ಸಂಗೀತ ಅವರು ಮೂಲತಃ ಚಿಕ್ಕಮಗಳೂರಿನ ಶೃಂಗೇರಿಯವರು. ಇವರ ತಂದೆ ಶಿವಕುಮಾರ್ ಅವರು ಇಂಡಿಯನ್ ಏರ್ ಲೈನ್ಸ್ ನಲ್ಲಿ ಕೆಲಸ ಮಾಡಿದ್ದಾರೆ. ಇನ್ನು ಸಂಗೀತ ಅವರು ತಮ್ಮ ಶಿಕ್ಷಣವನ್ನ ಬೆಂಗಳೂರಿನ ಕೇಂದ್ರೀಯ ವಿದ್ಯಾಲಯ ಜಾಲಹಳ್ಳಿಯಲ್ಲಿ ಮಾಡ್ತಾರೆ. 2012 ರಲ್ಲಿ ಕೋಕೋ ಆಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಚಿನ್ನದ ಪದಕವನ್ನು ಕೂಡ ಗೆಲ್ತಾರೆ.

    ಸಂಗೀತ ಅವರಿಗೆ ಮೋಡೆಲಿಂಗ್ ನಲ್ಲಿ ಆಸಕ್ತಿ ಇದ್ದ ಕಾರಣ 2014ರಲ್ಲಿ ಮಿಸ್ ಇಂಡಿಯಾ ಬ್ಯೂಟಿಯಲ್ಲಿ ಭಾಗವಹಿಸಿ ಟಾಪ್ ಹತ್ತರಲ್ಲಿ ಸ್ಥಾನ ಪಡೆದಿದ್ದಾರೆ. ಇದಾದ ನಂತ್ರ ವರ್ಲ್ಡ್ ಸೂಪರ್ ಮಾಡೆಲ್ ಸ್ಪರ್ಧೆಯಲ್ಲಿ ಭಾಗವಹಿಸಿ ಅಲ್ಲಿ ಕೂಡ ರನ್ನರ್ ಅಪ್ ಆಗಿದ್ದಾರೆ. ಅಲ್ಲಿಂದ ನಂತರ 2016 ರಲ್ಲಿ ಸ್ಟಾರ್ ಸುವರ್ಣ ವಾಹಿನಿಯ ಹರ ಹರ ಮಹಾದೇವ ಕನ್ನಡ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಡ್ತಾರೆ. ಆ ಧಾರಾವಾಹಿಯ ಪಾರ್ವತಿ ಪಾತ್ರದ ಮೂಲಕ ಹೆಚ್ಚು ಖ್ಯಾತಿ ಗಳಿಸಿದ್ದಾರೆ. ಅಲ್ಲಿಂದ ನಂತರ ಸಂಗೀತ ಅವರು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಾರೆ.

    ಇದನ್ನೂ ಕೂಡ ಓದಿ : 60 ವರ್ಷ ಮೇಲ್ಪಟ್ಟವರಿಗೆ ಪಿಂಚಣಿ ಹಣ ಹೆಚ್ಚಳ // 60 Years Old Age Pension Scheme in Karnataka

    ಸಾಲಗಾರರ ಸಹಕಾರ ಸಂಘ, ಚಾರ್ಲಿ, ಲಕ್ಕಿ ಮ್ಯಾನ್, ಶಿವಾಜಿ ಸುರತ್ಕಲ್ ಪಾರ್ಟ್ 2 ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. 2000ಕ್ಕೂ ಅಧಿಕ ಜನರು ಚಾರ್ಲಿ ಚಿತ್ರದ ನಾಯಕಿ ಪಾತ್ರಕ್ಕೆ ಆಡಿಷನ್ ಕೊಡ್ತಾರೆ. ಆದ್ರೆ ಎಲ್ಲರನ್ನೂ ಮೀರಿ ಅಲ್ಲಿ ಕೂಡ ಸಂಗೀತ ಅವರು ಗೆಲ್ತಾರೆ. ಒಳ್ಳೆ ಅವಕಾಶ ಪಡೆಯುತ್ತಾರೆ. ಪಾನ್ದ ಇಂಡಿಯಾ ಮಟ್ಟದಲ್ಲಿ ಆ ಸಿನಿಮಾ ರಿಲೀಸ್ ಆಗುತ್ತೆ, ಸದ್ದು ಕೂಡ ಮಾಡುತ್ತೆ. ಇಷ್ಟೆಲ್ಲ ಸಾಧನೆ ಮಾಡಿರೋ ಸಂಗೀತ ಶೃಂಗೇರಿ ಅವರು ಸದ್ಯ ಬಿಗ್ ಬಾಸ್ ಮನೆಯಲ್ಲಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಒಂದು ವಾರಕ್ಕೆ 3 ಲಕ್ಷ ರುಪಾಯಿ ಸಂಭಾವನೆ ಪಡೆಯುತ್ತಾರೆ. ಇನ್ನು ನೀವು ಬಿಗ್‌ಬಾಸ್ ಪ್ರೇಕ್ಷಕರಾಗಿದ್ರೆ ಈ ವರ್ಷದ ಬಿಗ್ ಬಾಸ್ ವಿನ್ನರ್ ಯಾರು ಆಗ್ಬೇಕು ಅನ್ನೋದನ್ನ ಕಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.

    ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

    ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.
    
    ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..
  • Katera : ದರ್ಶನ್ ಅವರ ಕಾಟೇರಾ ಸಿನೆಮಾ ನೋಡಿ ಶಾಕಿಂಗ್ ಹೇಳಿಕೆ ಕೊಟ್ಟ ಶಿವಣ್ಣ ! ಶಾಕ್ ಆದ ಡಿ ಬಾಸ್ ದರ್ಶನ್

    Katera : ಡಿ ಬಾಸ್ ದರ್ಶನ್ ನಟನೆಯ ಕಾಟೇರ ಸಿನಿಮಾ ಡಿಸೆಂಬರ್ 29 ರಂದು ರಾಜ್ಯಾದ್ಯಂತ ರಿಲೀಸ್ ಆಗಿದ್ದು, ಇಂದು ನಟ ಶಿವರಾಜ್ ಕುಮಾರ್ ಅವರು ಸಿನಿಮಾ ನೋಡಿ ದರ್ಶನ್ ಬಗ್ಗೆ ಹೇಳಿದ್ದೇನು ಗೊತ್ತಾ.? ಶಿವಣ್ಣ ಮಾತು ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ.?

    ಇದನ್ನೂ ಕೂಡ ಓದಿ : Labour Card : ಉಚಿತ ಮನೆ ನಿರ್ಮಿಸಿಕೊಳ್ಳಲು ಕಾರ್ಮಿಕರಿಗೆ ಅವಕಾಶ.! // ಲೇಬರ್ ಕಾರ್ಡ್ ಇದ್ದರೆ ಸಾಕಂತೆ.!

    ದರ್ಶನ್ ಅವರಂತೆ ಶಿವಣ್ಣ ಕೂಡ ಸರಳ ಸ್ವಭಾವದ ವ್ಯಕ್ತಿ ಅಂತ ನಿಮಗೆಲ್ಲಾ ಗೊತ್ತೇ ಇದೆ. ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಶಿವಣ್ಣ ಅವರ ಗುಣ ಅಭಿಮಾನಿಗಳಿಗೆ ತುಂಬಾನೇ ಇಷ್ಟ. ಶಿವಣ್ಣ ಹಾಗೂ ದರ್ಶನ್ ಮೊದಲಿನಿಂದಲೂ ತುಂಬಾನೇ ಒಳ್ಳೆಯ ಆತ್ಮೀಯರು. ಶಿವಣ್ಣ ಎಲ್ಲೇ ಕಂಡರೂ ದರ್ಶನ್ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಾರೆ. ಇದೀಗ ಶಿವಣ್ಣ ಅವರು ದರ್ಶನ್ ಅವರ ಕಾಟೇರ ಸಿನಿಮಾವನ್ನ ವೀಕ್ಷಿಸಿದ್ದು, ದರ್ಶನ್ ಅವರ ಬಗ್ಗೆ ಕೂಡ ಮಾತನಾಡಿದ್ದಾರೆ.

    ಇದನ್ನೂ ಕೂಡ ಓದಿ : Aadhar Card Updates : ಗಮನಿಸಿ UADAI ಕೇಂದ್ರ ಆಧಾರ್ ನೋಂದಣಿ ಇಲಾಖೆಯಿಂದ ಹೊಸ ಬದಲಾವಣೆ / ಹೀಗೆ ಮಾಡಿದರೆ ಇನ್ನು ಮುಂದೆ DBT ಹಣ ಜಮಾ ಆಗುತ್ತೆ

    ನಾನು ಕಾಟೇರಾ ಸಿನಿಮಾ ವೀಕ್ಷಿಸಿದೆ. ಅನುಭವ ಅದ್ಭುತವಾಗಿತ್ತು. ಸಿನಿಮಾದಲ್ಲಿನ ಅನೇಕ ದೃಶ್ಯಗಳಿಗೆ ನಾನು ಕಣ್ಣೀರು ಸುರಿಸಿದ್ದೇನೆ. ಸಿನಿಮಾ ನೋಡಿ ಹೊರ ನಡೆಯುತ್ತಿದ್ದಂತೆ ದರ್ಶನ್ ಅವರ ಶ್ರಮದ ಬಗ್ಗೆ ಹೆಮ್ಮೆ ಮತ್ತು ಗೌರವ ಆವರಿಸಿತು. ಇಂತಹ ಒಳ್ಳೆಯ ಚಿತ್ರಗಳು ಮತ್ತಷ್ಟು ಬರಬೇಕು. ಕನ್ನಡಿಗರು ಯಾವತ್ತೂ ಒಳ್ಳೆಯ ಸಿನಿಮಾಗಳನ್ನ ಕೈಬಿಡಲ್ಲ ಎಂದಿದ್ದಾರೆ ಶಿವಣ್ಣ. ಬಳಿಕ ಕಾಟೇರ ಸಿನಿಮಾ ನೀವು ನಿರ್ದೇಶಿಸಿದ ಬೆಸ್ಟ್ ಚಿತ್ರ ಎಂದು ನಿರ್ದೇಶಕ ತರುಣ್ ಸುಧೀರ್ ಗೆ ಶಿವಣ್ಣ ಹೊಗಳಿದ್ದಾರೆ. ಬಳಿಕ ಇಡೀ ಕಾಟೇರ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಶಿವಣ್ಣ ಅವರ ಮಾತಿನ ಬಗ್ಗೆ ನಿಮ್ಮ ಅನಿಸಿಕೆ ಗಳನ್ನು ತಪ್ಪ ದೇ ಕಮೆಂಟ್ ಮಾಡಿ ತಿಳಿಸಿ.

    ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

    ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.
    
    ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..
  • Bigg Boss Kannada : ಕಾರ್ತಿಕ್ ಗೆ ಆತುರ ಜಾಸ್ತಿ ತಿರುಗಿಬಿದ್ದ ತನಿಷಾ ಕುಪ್ಪಂಡ

    Bigg Boss Kannada : ಬಿಗ್ ಬಾಸ್ ಮನೆಯಲ್ಲಿ ಕುಚಿಕುಗಳಾಗಿದ್ದ ತನಿಶಾ ಕಾರ್ತಿಕ್ ನಡುವೆ ಕಿರಿಕ್ ಆಗಿದೆ. ಕಾರ್ತಿಕ್ ಗೆ ಆತುರ ಜಾಸ್ತಿ ಅಂತ ಗೆಳೆಯನಿಗೆ ತನಿಶಾ ಉಲ್ಟಾ ಹೊಡೆದಿದ್ದಾರೆ. ಇದರಿಂದ ಕಾರ್ತಿಕ್ ಕೂಡ ಖಡಕ್ ಆಗಿ ರಿಯಾಕ್ಟ್ ಮಾಡಿದ್ದಾರೆ. ದೊಡ್ಮನೆ ಆಟ 85 ದಿನಗಳನ್ನ ಪೂರೈಸಿ ಮುನ್ನುಗ್ಗುತ್ತಿದೆ. ಇದೀಗ ಮನೆಯಲ್ಲಿ ಅಸಲಿ ಆಟ ಶುರುವಾಗಿದೆ.

    ಇದನ್ನೂ ಕೂಡ ಓದಿ : 2024 ಯಾರಿಗೆ ಗ್ರಹಲಕ್ಷ್ಮಿ ಹಣ ಜಮಾ ಆಗುತ್ತಿಲ್ಲಾ, ಹೀಗೆ ಮಾಡಿ ಹಣ ಜಮಾ ಆಗುತ್ತೆ — ಮಹಿಳೆಯರಿಗೇ ಬಂಪರ್ ಗುಡ್ ನ್ಯೂಸ್

    ಘಟಾನುಘಟಿ ಸ್ಪರ್ಧಿಗಳು ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಸದ್ಯ ಒಂಬತ್ತು ಸ್ಪರ್ಧಿಗಳು ಬಿಗ್ ಮನೆಯಲ್ಲಿ ಉಳಿದುಕೊಂಡಿದ್ದಾರೆ. ಹೀಗಿರುವಾಗ ಚೆನ್ನಾಗಿದ್ದ ತನಿಶಾ ಕಾರ್ತಿಕ್ ನಡುವೆ ಬಿರುಕು ಮೂಡಿದೆ. ಬಿಗ್ ಬಾಸ್ ಟಾಸ್ಕ್ ವೊಂದನ್ನ ನೀಡಿದ್ದರು. ಅದರಲ್ಲಿ ಕೆಲ ಸ್ಪರ್ಧಿಗಳು ಫೇಲ್ ಆದ್ರೂ, ಆಟದಲ್ಲಿ ಯಾರು ಅನರ್ಹರು ಅಂತ ಬಿಗ್ ಬಾಸ್ ಸೂಚಿಸಲು ಹೇಳಿದರು. ಆಗ ತನಿಷಾ ಕಾರ್ತಿಕ್ ಗೆ ಆತುರ ಜಾಸ್ತಿ, ತಾನೆ ಎಲ್ಲ ಮಾಡಿದ್ದು ಎಂಬ ಫೀಲ್ ಇದೆ. ಅದು ಅವರಿಗೆ ಉಲ್ಟಾ ಹೊಡೆದಿರುವುದು ಅಂತ ಕಾರಣ ಕೊಟ್ಟಿದ್ದಾರೆ.

    ಇದನ್ನೂ ಕೂಡ ಓದಿ : ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಯೋಜನೆ / ಅರ್ಜಿ ಸಲ್ಲಿಸಿ ಉಚಿತವಾಗಿ ಪಡೆಯಿರಿ

    ಈ ವೇಳೆ ತನಿಶಾ ಮಾತಿಗೆ ನಮೃತ ಗೌಡ ವಿರೋಧಿಸಿದ್ದಾರೆ. ತಾಳ್ಮೆ ಅಂತ ಬಂದಾಗ ನೀವು ಕಾರ್ತಿಕ್ ನ ಹೊರಗೆ ಇರ್ತೀರಾ, ಆದ್ರೆ ನಿಮಗೆ ತಾಳ್ಮೆ ಇದೆ ಅಂತ ನನಗೆ ಅನಿಸ್ತಾ ಇಲ್ಲ ಅಂತ ನಮ್ರತ ತಿರುಗೇಟು ಕೊಟ್ಟಿದ್ದಾರೆ. ಬಳಿಕ ಕಾರ್ತಿಕ್ ಕೂಡ ತುಸು ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ತನಿಶಾಗೆ ಕಾರಣ ನೀಡುವಾಗ ಸರಿಯಾದ ಕಾರಣ ಕೊಡಿ ಅಂತ ಕಾರ್ತಿಕ್ ಕಡ್ಡಿ ಮುರಿದಂತೆ ಮಾತನಾಡಿದ್ದಾರೆ. ಇಬ್ಬರ ಮಾತಿನ ವಾಗ್ದಾಳಿಗೆ ಮನೆಮಂದಿ ಸೈಲೆಂಟ್ ಆಗಿದ್ದಾರೆ.

    ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

    ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.
    
    ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..
  • Spandana Vijay : ಪತ್ನಿ ಸ್ಪಂದನ ಬಿಟ್ಟು ಹೋದ ಸೀರೆ ಒಡವೆಗಳನ್ನ ವಿಜಯ್ ರಾಘವೇಂದ್ರ ಯಾರಿಗೆ ಕೊಟ್ಟಿದ್ದಾರೆ ಗೊತ್ತಾ.?

    Spandana Vijay : ನಟ ವಿಜಯ ರಾಘವೇಂದ್ರ ಅವರು ಪತ್ನಿ ಸ್ಪಂದನಾ ಅವರನ್ನು ಕಳೆದುಕೊಂಡು ಆ ನೋವನ್ನ ಮರೆಯಲು ಸಾಧ್ಯವಾಗದ ನೋವಿನಲ್ಲೇ ದಿನಗಳನ್ನು ದೂಡುತ್ತಿದ್ದಾರೆ. ಇದೀಗ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ಸೀರೆ ಒಡವೆಗಳನ್ನು ಏನು ಮಾಡಿದ್ದಾರೆ ಗೊತ್ತಾ.?

    ಸ್ಪಂದನ ಅವರಿಗೆ ಸೀರೆ ಒಡವೆಗಳು ಎಂದರೆ ಸಿಕ್ಕಾಪಟ್ಟೆ ಇಷ್ಟ. ಸಾಂಪ್ರದಾಯಕ ಉಡುಗೆಗಳನ್ನ ಇಷ್ಟಪಡುವ ಸ್ಪಂದನ ಅವರು ಸರಳವಾಗಿ ಹಾಗೂ ಸುಂದರವಾಗಿ ರೆಡಿ ಆಗುತ್ತಿದ್ದರು. ಇದೀಗ ಮಾತನಾಡಿರುವ ವಿಜಯ ರಾಘವೇಂದ್ರ ಅವರು, ಸ್ಪಂದನಾ ಅಗಲಿಕೆಯ ಬಳಿಕ ಜೀವನ ನಡೆಯುತ್ತಿದೆ. ಅವತ್ತು ಅದೇ ಮಾತು ಹೇಳಿದೆ. ಇವತ್ತು ಅದೇ ಮಾತು ಹೇಳುತ್ತಿರುವೆ. ಸ್ಪಂದನ ಎಂದಿಗೂ ಮಗ ಮತ್ತು ನನ್ನ ಜೊತೆ ಇರುತ್ತಾರೆ. ಪ್ರತಿ ತಿಂಗಳು ಆರನೇ ತಾರೀಖು ಬೇಸರ ಆಗುವುದು ನಿಶ್ಚಿತ. ಉಳಿದ ದಿನ ಹಿಂಸೆಗೆ ಪರ್ಯಾಯವಾಗಿ ಸ್ನೇಹಿತರು, ಕೆಲಸ ಅಂತ ಇರುತ್ತೀವಿ. ಆದರೆ ಆರನೇ ತಾರೀಖು ಅದು ಕಷ್ಟ ಆಗುತ್ತದೆ ಎನ್ನುವ ಮಾತು ಹೇಳಿದ್ದಾರೆ.

    ಇದನ್ನೂ ಕೂಡ ಓದಿ : Ganga Kalyana Scheme : ಎಲ್ಲಾ ವರ್ಗದ ರೈತರಿಗೆ ಉಚಿತ ಕೊಳವೆ ಬಾವಿ // ಗಂಗಾ ಕಲ್ಯಾಣ ಯೋಜನೆ

    ನನ್ನ ಮನಸ್ಸಿಗೆ ಬೇಸರ ಆಗುತ್ತದೆ. ಆ ದಿನ ಆಕೆಯನ್ನು ವಿಶೇಷವಾಗಿ ನೆನಪಿಸಿಕೊಳ್ಳಬೇಕು ಅನಿಸುತ್ತದೆ. ನಾನು ಬಹಳ ಗೌರವವಾಗಿ ಕಾಣುವ ವ್ಯಕ್ತಿಗಳಲ್ಲಿ ಆಕೆ ಒಬ್ಬಳು. ಸ್ಪಂದನ ಧರಿಸುತ್ತಿದ್ದ ಪ್ರತಿಯೊಂದು ವಸ್ತುಗಳನ್ನು ಕಾಪಾಡಿಕೊಂಡಿರುವೆ. ಆಕೆ ಬಹಳ ಸಿಂಪಲ್ ಆಗಿರುತ್ತಿದ್ದಳು. ತುಂಬಾನೇ ಹೊಸ ಹೊಸ ಬಟ್ಟೆಗಳನ್ನ ಅವಶ್ಯಕತೆ ಇರುವ ಬಡವರಿಗೆ ಕೊಟ್ಟಿದ್ದೇನೆ. ಆದರೆ ಕೆಲವೊಂದು ಬಟ್ಟೆ, ಒಡವೆಗಳನ್ನ ನೆನಪಿಗಾಗಿ ನನ್ನ ಬಳಿ ಜೋಪಾನವಾಗಿ ಇಟ್ಟುಕೊಂಡಿದ್ದೇನೆ. ಸ್ಪಂದನ ಸೀರೆಗಳು, ಒಡವೆಗಳು ಹಾಗೆ ಇದೆ. ಅವಳ ಜೊತೆನೇ ಇದೆ. ಅದು ಎಲ್ಲೂ ಹೋಗುವುದಿಲ್ಲ. ಅವುಗಳನ್ನು ನೋಡಿದಾಗ ಆಕೆಯನ್ನು ನೋಡಿದಂತೆ ಅನಿಸುತ್ತದೆ. ಸ್ಪಂದನ ಜೊತೆಲಿದ್ದಾಳೆ. ಮಗ ಮತ್ತು ನಾನು ಆಕೆಯನ್ನು ನೋಡುತ್ತಿರುತ್ತೀವಿ ಅನ್ನುವ ಮಾತು ಹೇಳಿದ್ದಾರೆ.

    ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

    ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.
    
    ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..
  • Bigg Boss Kannada : ಬಿಗ್ ಬಾಸ್ ಮನೆಗೆ ಶೈನ್ ಶೆಟ್ಟಿ ಹಾಗು ಶುಭ ಪೂಂಜಾ ಎಂಟ್ರಿ ನಡುವೆ ಡಬಲ್ ಎಲಿಮಿನೇಷನ್ ಟೆನ್ಶನ್.!

    Bigg Boss Kannada : ಬಿಗ್ ಬಾಸ್ ಸೀಸನ್ 10 ಇದೀಗ ಹನ್ನೊಂದನೇ ವಾರದಲ್ಲಿ ರೋಚಕ ತಿರುವುಗಳನ್ನ ಪಡೆದುಕೊಳ್ಳುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ದೊಡ್ಮನೆ ಆಟಕ್ಕೆ ಅಂತ್ಯ ಬೀಳಲಿದ್ದು, ಸ್ಪರ್ಧಿಗಳಲ್ಲಿ ಪೈಪೋಟಿ ಎದ್ದು ಕಾಣುತ್ತಿದೆ. ಕೊನೆಯ ಹಂತದಲ್ಲಿರುವಾಗ ಬಿಗ್ ಬಾಸ್(Bigg Boss Kannada) ಮನೆಗೆ ಗ್ರಾಂಡ್ ಎಂಟ್ರಿ ಕೊಟ್ಟಿದ್ದಾರೆ ಬಿಗ್ ಬಾಸ್ ಸೀಸನ್ 7 ರ ವಿಜೇತ ಶೈನ್ ಶೆಟ್ಟಿ(Shine Shetty) ಹಾಗು ನಟಿ ಶುಭ ಪೂಂಜಾ(Shubha Poonja).

    ಬಿಗ್ ಬಾಸ್(Bigg Boss Kannada)ನ ವಾರಾಂತ್ಯದ ವಾರದ ಕತೆ ಕಿಚ್ಚನ ಜೊತೆಗೆ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್(Kiccha Sudeep) ಅವರು ಕೆಸಿಸಿ ಪಂದ್ಯ ನಡೆಯುತ್ತಿದ್ದ ಕಾರಣ ಗೈರಾಗಿದ್ದರು. ಸುದೀಪ್(Sudeep) ಅವರ ಅನುಪಸ್ಥಿತಿಯಲ್ಲಿ ಶನಿವಾರದ ಎಪಿಸೋಡ್ ನಲ್ಲಿ ಬಿಗ್ ಬಾಸ್(Bigg Boss Kannada) ಸೀಸನ್ ೩ ರ ವಿಜೇತೆ ನಟಿ ಶ್ರುತಿ ಅವರು ದೊಡ್ಮನೆಗೆ ಎಂಟ್ರಿ ಕೊಟ್ಟು ನ್ಯಾಯಾಧೀಶರಾಗಿ ಹಲವು ವಿಚಾರಗಳಿಗೆ ವಾದ-ವಿವಾದಗಳನ್ನ ಆಲಿಸಿ ತೀರ್ಪು ನೀಡಿದ್ದರು.

    ಇದನ್ನೂ ಕೂಡ ಓದಿ : Labour Card Scheme : ಕಾರ್ಮಿಕ ಕಾರ್ಡು ಹೊಂದಿರುವವರ ಮಕ್ಕಳಿಗೆ ಲ್ಯಾಪ್‌ಟಾಪ್ ವಿತರಣೆ.! ಪಡೆಯುವುದು ಹೇಗೆ.?

    ಗ್ರಾಂಡ್ ಎಂಟ್ರಿ ಕೊಟ್ಟ ಶೈನ್ ಶೆಟ್ಟಿ ಹಾಗು ಶುಭ ಪೂಂಜಾ

    ಬಿಗ್ ಬಾಸ್(Bigg Boss Kannada) ಮನೆಗೆ ಶೈನ್ ಶೆಟ್ಟಿ(Shine Shetty) ಹಾಗು ಶುಭ ಪೂಜಾ(Shubha Poonja) ಎಂಟ್ರಿಯಿಂದ ಖುಷಿಯಾಗಿದ್ದ ಮನೆಮಂದಿಗೆ ಎಂದಿನಂತೆ ಎಲಿಮಿನೇಷನ್ ತಲೆ ಬಿಸಿ ಶುರುವಾಗಿದೆ. ಈ ವಾರದಲ್ಲಿ ಸಂಗೀತ ಶೃಂಗೇರಿ, ಡ್ರೋನ್ ಪ್ರತಾಪ್, ವರ್ತೂರು ಸಂತೋಷ್, ಅವಿನಾಶ್ ಶೆಟ್ಟಿ, ಮೈಕಲ್ ಹಾಗು ಸಿರಿ ಅವರು ನಾಮಿನೇಟ್ ಆಗಿದ್ದರು. ಈ ಸ್ಪರ್ಧಿಗಳಲ್ಲಿ ಯಾರು ಎಲಿಮಿನೇಟ್ ಆಗ್ತಾರೆ ಅನ್ನುವ ಟೆನ್ಶನ್ ನಲ್ಲಿದ್ದಾರೆ ಸ್ಪರ್ಧಿಗಳು. ಅದೂ ಅಲ್ಲದೇ ಈ ವಾರ ಡಬಲ್ ಎಲಿಮಿನೇಷನ್ ಕೂಡ ಇರಲಿದೆಯಂತೆ.

    ಇದನ್ನೂ ಕೂಡ ಓದಿ : 2024ರಲ್ಲಿ ಲಕ್ ಅಂದ್ರೆ ಇವರದ್ದೆ ಗುರು.! ಇವರು ಹೆಜ್ಜೆ ಇಟ್ಟಲ್ಲೆಲ್ಲಾ ದುಡ್ಡೇ ದುಡ್ಡು.!

    ಕಿಚ್ಚ ಸುದೀಪ್(Kiccha Sudeep) ಅನುಪಸ್ಥಿತಿಯಲ್ಲಿ ಕಳೆದ ಸೀಸನ್ ಗಳಲ್ಲಿಯೂ ಕೂಡ ಎಲಿಮಿನೇಷನ್ ನಡೆದಿತ್ತು. ಈಗಾಗಲೇ ಬಿಗ್ ಬಾಸ್(Bigg Boss Kannada) ಮನೆಗೆ ಎರಡು ಕಾರುಗಳು ಗ್ರಾಂಡ್ ಎಂಟ್ರಿ ಕೊಟ್ಟಿದೆ. ಬಿಗ್ ಬಾಸ್ ಡಬಲ್ ಎಲಿಮಿನೇಷನ್ ಬಗ್ಗೆ ಸೂಚನೆ ನೀಡಿದ್ದಾರೆ. ಆದರೆ ಎಲಿಮಿನೇಷನ್ ನಡೆಯುತ್ತಾ ಅನ್ನುವ ಕುತೂಹಲದಲ್ಲಿ ವೀಕ್ಷಕರು ಕಾದುಕುಳಿತಿದ್ದಾರೆ. ಯಾವ ಸ್ಪರ್ಧಿಯ ಆಟ ಈ ವಾರದಲ್ಲಿ ಅಂತ್ಯವಾಗುತ್ತದೆ ಅನ್ನುವುದೇ ಈಗಿರುವ ಟ್ವಿಸ್ಟ್.

    ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

    ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.
    
    ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..
  • Bigg Boss Kannada : ಎಲಿಮಿನೇಟ್ ಆದ ಇಬ್ಬರೂ ಸ್ಪರ್ಧಿಗಳು ಇವರೇ.! ಕೊನೆಗೆ ಮತ್ತೊಂದು ಟ್ವಿಸ್ಟ್.!

    Bigg Boss Kannada : ಬಿಗ್ ಬಾಸ್ ಮನೆಯಲ್ಲಿ ಹನ್ನೊಂದನೇ ವಾರ ಡಬಲ್ ಎಲಿಮಿನೇಷನ್.! ಬಿಗ್ ಬಾಸ್ ಮನೆಗೆ ಬಂದಂತಹ ಸ್ಪರ್ಧಿಗಳು ಇಬ್ಬರು ಸ್ಪರ್ಧಿಗಳನ್ನ ಕರೆದುಕೊಂಡು ಬಿಗ್ ಬಾಸ್(Bigg Boss Kannada) ಮನೆಯಿಂದ ಹೊರಗಡೆ ಹೋಗಿದ್ದಾರಾ.?. ಎಲಿಮಿನೇಟ್ ಆಗಿರುವಂತಹ ಇಬ್ಬರು ಸ್ಪರ್ಧಿಗಳು ಯಾರು.? ಏನಾದ್ರೂ ಟ್ವಿಸ್ಟ್ ಇದ್ಯಾ.?

    ಈ ವಾರದ ಎಲಿಮಿನೇಷನ್ ವಿಷಯಕ್ಕೆ ಬರುವುದಾದ್ರೆ, ಈ ವಾರದ ಎಲಿಮಿನೇಷನ್ ನಲ್ಲಿ ಮೊದಲು ಸೇವ್ ಆಗಿರುವುದು ಯಾರು ಅಂತ ನೋಡೋಣ. ಸಂಗೀತ, ಡ್ರೋನ್ ಪ್ರತಾಪ್, ವರ್ತೂರು ಸಂತೋಷ್, ಮೈಕಲ್ ಹಾಗು ಅವಿನಾಶ್ ಈ ಆರು ಜನ ಸ್ಪರ್ಧಿಗಳು ನಾಮಿನಟ್ ಆಗಿದ್ದರು. ಮೊದಲನೇಯದಾಗಿ ಸೇವ್ ಆಗಿರೋದು ಸಂಗೀತ ಶೃಂಗೇರಿ. ಇನ್ನು ಎರಡನೇಯದಾಗಿ ಡ್ರೋನ್ ಪ್ರತಾಪ್ ಅವರು ಸೇವ್ ಆಗಿದ್ದಾರೆ ಅಂತ ಮಾಹಿತಿ ಸಿಕ್ಕಿದೆ. ಇನ್ನು ಇವರ ನಂತರ ಸೇವ್ ಆಗಿರುವುದು ವರ್ತೂರ್ ಸಂತೋಷ್. ಹೀಗಾಗಿ ಈ ಮೂರು ಜನರನ್ನ ಹೊರತುಪಡಿಸಿ ಉಳಿದಿರುವಂತಹ ಸಿರಿ, ಅವಿನಾಶ್, ಮೈಕಲ್ ಮೂವರು ಕೂಡ ಬಿಗ್ ಬಾಸ್(Bigg Boss Kannada) ಮನೆಯಲ್ಲಿ ಡೇಂಜರ್ ಜೋನ್ ನಲ್ಲಿದ್ದರು.

    ಇದನ್ನೂ ಕೂಡ ಓದಿ : 2024ರಲ್ಲಿ ಲಕ್ ಅಂದ್ರೆ ಇವರದ್ದೆ ಗುರು.! ಇವರು ಹೆಜ್ಜೆ ಇಟ್ಟಲ್ಲೆಲ್ಲಾ ದುಡ್ಡೇ ದುಡ್ಡು.!

    ಇವರಲ್ಲಿ ಯಾರು ಸೇವ್ ಆಗಿದ್ದಾರೆ ಅಂತ ನೋಡುವುದಾದ್ರೆ ಸಿಕ್ಕಿರುವಂತಹ ಮಾಹಿತಿಯ ಪ್ರಕಾರ ಮೈಕಲ್ ಅವರು ಸೇವ್ ಆಗಿದ್ದಾರೆ ಅನ್ನುವಂತಹ ಮಾಹಿತಿ ಇದೆ. ಹೀಗಾಗಿ ಅವಿನಾಶ್ ಮತ್ತು ಸಿರಿ ಅವರು ಬಿಗ್ ಬಾಸ್(Bigg Boss Kannada) ಮನೆಯಲ್ಲಿ ಗಾರ್ಡನ್ ಏರಿಯಾದಲ್ಲಿ ಎಂಟ್ರಿ ಕೊಟ್ಟಂತಹ ಎರಡು ಕಾರುಗಳಲ್ಲಿ ಕುಳಿತು ಕೊಂಡಿದ್ದಾರೆ. ಹಾಗೇನೇ ಆ ಎರಡು ಕಾರುಗಳು ಗಾರ್ಡನ್ ಏರಿಯಾದಲ್ಲಿ ಹಲವು ಸುತ್ತುಗಳನ್ನು ಹಾಕಿ ಬಿಗ್ ಬಾಸ್ ಮನೆಯಿಂದ ಹೊರಗಡೆ ಹೊರಟಿದೆ. ಹೀಗಾಗಿ ಇವರಿಬ್ಬರು ಕೂಡ ಎಲಿಮಿನೇಟ್ ಅನ್ನೋ ರೀತಿಯಲ್ಲಿ ಕಾಣಿಸ್ತಿದ್ದಾರೆ ಪ್ರೊಮೋ ದಲ್ಲಿ. ಆದರೆ ಇಲ್ಲೊಂದು ಟ್ವಿಸ್ಟ್ ಇರುವಂತಹ ಸಾಧ್ಯತೆ ತುಂಬಾನೇ ಹೆಚ್ಚಾಗಿದೆ.

    ಯಾಕಂದ್ರೆ ಈ ರೀತಿಯಾಗಿ ರೌಂಡ್ ಹಾಕಿ ಬಿಗ್ ಬಾಸ್(Bigg Boss Kannada) ಮನೆಯಿಂದ ಹೊರಗಡೆ ಹೋಗುವಂತಹ ಎರಡು ಕಾರುಗಳಲ್ಲಿ ಯಾವುದೇ ಒಂದು ಕಾರು ವಾಪಸ್ ಕೂಡ ಬರಬಹುದು. ಹೀಗಾಗಿ 1 ಸ್ಪರ್ಧಿಯನ್ನು ಮಾತ್ರ ಎಲಿಮಿನೇಟ್ ಮಾಡಬಹುದೇನೋ. ಈ ಸಲದ ಸೀಸನ್ ನಲ್ಲಿ ಸಾಕಷ್ಟು ಬಾರಿ ನೋ ಎಲಿಮಿನೇಷನ್ ವೀಕ್ ಗಳು ಆಗಿದ್ದಾವೆ. ಹೀಗಾಗಿ ಮತ್ತೆ ಡಬಲ್ ಎಲಿಮಿನೇಷನ್ ಮಾಡದೇ ಇದ್ದರೆ ಖಂಡಿತವಾಗಲೂ ಬಿಗ್ ಬಾಸ್ ನ್ನು ಇನ್ನೂ ಹೆಚ್ಚಿನ ದಿನಗಳ ಕಾಲ ನಡೆಸಬೇಕಾಗುತ್ತೆ.

    ಇದನ್ನೂ ಕೂಡ ಓದಿ : Labour Card Scheme : ಕಾರ್ಮಿಕ ಕಾರ್ಡು ಹೊಂದಿರುವವರ ಮಕ್ಕಳಿಗೆ ಲ್ಯಾಪ್‌ಟಾಪ್ ವಿತರಣೆ.! ಪಡೆಯುವುದು ಹೇಗೆ.?

    ಹಲವು ಸೀರಿಯಲ್ ಗಳು ಕೂಡ ಬಿಡುಗಡೆಗೊಳ್ಳುವುದು ಬಾಕಿ ಇರುವುದರಿಂದ ಬಿಗ್ ಬಾಸ್(Bigg Boss Kannada) ನ ಹತ್ತನೇ ಸೀಸನ್ ನ್ನು 100 ದಿನಕ್ಕೆ ಸೀಮಿತಗೊಳಿಸಬಹುದು. ಹೀಗಾಗಿ ಮಾಹಿತಿಯ ಪ್ರಕಾರ ಅವಿನಾಶ್ ಶೆಟ್ಟಿ ಹಾಗು ಸಿರಿ. ಇವರಿಬ್ಬರು ಕೂಡ ಎಲಿಮಿನೇಟ್ ಆಗಿ ಹೊರಗಡೆ ಬಂದಿದ್ದಾರೆ ಅಂತ ಹೇಳಲಾಗ್ತಿದೆ. 95% ಇದು ಕನ್ಫರ್ಮ್ ಮಾಹಿತಿ ಆಗಿದೆ. ಸಿರಿ ಮತ್ತು ಅವಿನಾಶ್ ಶೆಟ್ಟಿ ಎಲಿಮಿನೇಟ್ ಆಗುವುದು.

    ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

    ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.
    
    ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..
  • Bigg Boss Kannada 10 : ಬಿಗ್ ಬಾಸ್ ಮನೆಯೊಳಗೆ ಮೊಬೈಲ್ ಬಳಕೆಗೆ ಅವಕಾಶ ಇದೆಯಾ.? ಫೋಟೋ ವೈರಲ್.!

    Bigg Boss Kannada 10 : ಬಿಗ್‌ಬಾಸ್ ರಿಯಾಲಿಟಿ ಷೋನಲ್ಲಿ ಭಾಗವಹಿಸಬೇಕಾದರೆ ಕೆಲವೊಂದು ನಿಯಮಗಳನ್ನು ಪಾಲಿಸಲೇಬೇಕು. ಒಮ್ಮೆ ದೊಡ್ಮನೆ ಒಳಗೆ ಸೇರಿಕೊಂಡ್ರೆ ಮುಗಿದು ಹೊರ ಜಗತ್ತಿಗೂ ಅವರೆಗೂ ಯಾವುದೇ ರೀತಿಯ ಕನೆಕ್ಷನ್ ಇರುವುದಿಲ್ಲ. ಹೊರಗಡೆ ಏನು ನಡೆಯುತ್ತಿದೆ.? ಅನ್ನುವ ಅರಿವು ಕೂಡ ಅವರಿಗಿರುವುದಿಲ್ಲ. ಮನೆಗಳಿಗೆ ಮೊಬೈಲ್ ಫೋನ್ ತೆಗೆದುಕೊಂಡು ಹೋಗುವ ಚಾನ್ಸೇ ಇಲ್ಲ.

    ಮೂರು ತಿಂಗಳ ಕಾಲ ಹೊರಗಿನ ಜಗತ್ತಿನ ಸಂಪರ್ಕ ಇಲ್ಲದೇ, ಜೈಲಿನಲ್ಲಿ ಹೇಗೆ ಒಬ್ಬ ಕೈದಿ ಇರ್ತಾನೋ ಅದೇ ರೀತಿ ದೊಡ್ಮನೆಯಲ್ಲಿ ಇರಬೇಕು. ಆದರೆ ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಫೋಟೋವೊಂದು ಭಾರೀ ಚರ್ಚೆಯನ್ನು ಹುಟ್ಟು ಹಾಕಿದೆ. ದೊಡ್ಮನೆ ಒಳಗೆ ಮೊಬೈಲ್ ಫೋನ್ ಬಳಸುವ ಅವಕಾಶ ಇದೆಯಾ.? ಅನ್ನುವ ಅನುಮಾನವನ್ನು ಹುಟ್ಟು ಹಾಕಿದೆ. ವೈರಲ್ ಆಗಿರುವ ಫೋಟೋದಲ್ಲಿ ಕನ್ನಡಿಯ ಪಕ್ಕದ ಸ್ವಿಚ್ ಬಾಕ್ಸ್ ನಲ್ಲಿ ಎರಡು ಮೊಬೈಲ್ ಚಾರ್ಜರ್ ಇಡಲಾಗಿದೆ. ಆದರೆ ಸಂಗೀತ ಅಲ್ಲಿ ಅಡ್ಡ ಕುಳಿತಿರುವುದರಿಂದ ಯಾವುದನ್ನು ಚಾರ್ಜ್ ಮಾಡಲಾಗ್ತಿದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.

    ಆದರೆ, ಮೊಬೈಲ್ ಚಾರ್ಜ್ ಇರುವುದನ್ನ ವೀಕ್ಷಕರು ನೋಡಿದ್ದಾರೆ. ಅದಕ್ಕೆ ಸಂಬಂಧಿತ ಸ್ಕ್ರೀನ್ ಶಾಟ್ ತೆಗೆದು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಕೂಡ ಮಾಡಲಾಗಿತ್ತು. ಬಿಗ್ ಬಾಸ್ ನಲ್ಲಿ ಮೊಬೈಲ್ ಬಳಕೆಗೆ ಅವಕಾಶ ಇದೆ ಎಂದು ಈ ಫೋಟೋ ಚರ್ಚೆ ಹುಟ್ಟುಹಾಕಿದೆ. ಸೋಶಿಯಲ್ ಮೀಡಿಯಾ ಟ್ರೊಲ್ ಪೇಜ್ ಗಳಂತೂ ಈ ಫೋಟೋವನ್ನ ಎಲ್ಲೆಡೆ ವೈರಲ್ ಮಾಡಿದ್ದಾರೆ. ಈ ಹಿಂದೆ ಬಿಗ್ ಬಾಸ್ ಒಳಗೆ ಸ್ಮೋಕಿಂಗ್ ಅವಕಾಶ ಇಲ್ಲ ಅಂತ ಹೇಳಲಾಗುತ್ತಿತ್ತು. ಆದರೆ ಸ್ಪರ್ಧಿಗಳು ಸ್ಮೋಕಿಂಗ್ ಮಾಡುವ ವಿಡಿಯೋ ವೈರಲ್ ಆದ್ಮೇಲೆ, ದೊಡ್ಮನೆಗೆ ಪ್ರತ್ಯೇಕವಾಗಿ ಸ್ಮೋಕಿಂಗ್ ಝೋನ್ ಕೂಡ ಇದೆ ಎಂಬುದು ಕೂಡ ಬಯಲಾಗಿತ್ತು.

    ಇದೀಗ ಮೊಬೈಲ್ ಚಾರ್ಜ್ ಇರುವುದು ನಾನಾ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದು ನಿಜಾನ ಅಥವಾ ಇದು ತಿರುಚಿದ ಫೋಟೋ ಅಂತ ರಿಯಾಲಿಟಿ ಶೋನ ನಡೆಸಿರುವಂತಹ ಆಯೋಜಕರು ಸ್ಪಷ್ಟನೆ ನೀಡಬೇಕು. ಚಿತ್ರದಲ್ಲಿ ಕಾಣಿಸುವಂತಹ ಏನಿದೆ? ಅದು ಮೊಬೈಲಿಗೆ ಫೋನ್ ಗೆ ಸಂಬಂಧಪಟ್ಟಂತ ಚಾರ್ಜ ರೀತಿ ಕಾಣುತ್ತದೆ. ಆದರೆ ಅದು ಟ್ರಿಮ್ಮರ್ ಗೆ ಸಂಬಂಧಪಟ್ಟ ಚಾರ್ಜ್ರ್. ಮೊಬೈಲ್ ಫೋನಿಗೆ ಸಂಬಂಧಪಟ್ಟ ಚಾರ್ಜ್ ಖಂಡಿತ ಅಲ್ಲ. ಯಾಕಂದ್ರೆ ಒಂದು ರಿಯಾಲಿಟಿ ಶೋ ಅಂದ್ರೆ ಅದಕ್ಕೆ ಸಿಕ್ಕಾಪಟ್ಟೆ ಖರ್ಚು ಇರುತ್ತೆ, ಅಷ್ಟೆಲ್ಲ ಖರ್ಚು ಮಾಡಿ ಈ ರೀತಿ ಒಂದು ಸಣ್ಣ ಮಾಡಿಕೊಳ್ಳೋದಿಲ್ಲ. ಹಾಗಾಗಿ ಅದು ಮೊಬೈಲ್ ಫೋನ್ ಚಾರ್ಜ್ ಅಂತ ಯಾವುದೇ ಆಗಲಿ ಯೋಚನೆ ಮಾಡಿದ್ರು. ಕೂಡ ಅದು ಅಲ್ಲ ಅಂತ ಅನಿಸುತ್ತೆ. ಇನ್ನು ನಿಮಗೆ ಈ ಚಾರ್ಜರ್‌ನ ಬಗ್ಗೆ ಏನನ್ಸುತ್ತೆ? ಅದು ನಮಗೆ ಕಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು.

    ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

    ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.
    
    ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..
  • Hema Choudhary : ಲೀಲಾವತಿ ಬಳಿಕ ಹಿರಿಯ ನಟಿ ಹೇಮಾ ಚೌಧರಿ ಅವರಿಗೆ ದೊಡ್ಡ ಆಘಾತ.! ಕಣ್ಣೀರಿಟ್ಟ ಚಿತ್ರರಂಗ.!

    Hema Choudhary : ಕೆಲ ದಿನಗಳ ಹಿಂದೆಯಷ್ಟೇ ನಟಿ ಲೀಲಾವತಿ ಅವರ ಅಗಲಿಕೆಯ ಬೆನ್ನಲ್ಲೇ ನಟಿ ಭಾರತಿ ವಿಷ್ಣುವರ್ಧನ್ ಅವರು ವಯೋಸಹಜ ಕಾಯಿಲೆಯಿಂದ ಹಾಸಿಗೆ ಹಿಡಿದಿರುವ ವಿಷಯ ನಿಮಗೆಲ್ಲಾ ಗೊತ್ತಿದೆ. ಇದೀಗ ಕನ್ನಡ ಚಿತ್ರರಂಗದ ಹಿರಿಯ ನಟಿ ಹೇಮ ಚೌಧರಿ(Hema Choudhary) ಅವರಿಗೆ ತೀವ್ರ ಅನಾರೋಗ್ಯ ಉಂಟಾಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ.

    ಇದನ್ನೂ ಕೂಡ ಓದಿ : Vinodh Raj Wife : ವಿನೋದ್ ರಾಜ್ ಮನೆ ಕೆಲಸದವರನ್ನ ಮದುವೆಯಾಗಿದ್ದು ಯಾಕೆ.? ಸತ್ಯ ಬಟಾ ಬಯಲು.!

    ಕನ್ನಡದ ನೂರಾರು ಸಿನಿಮಾಗಳಲ್ಲಿ ನಟಿಸಿರುವ ನಟಿ ಹೇಮ ಚೌಧರಿ ಅವರು ಬ್ರೈನ್ ಹೆಮರೇಜ್ ಆಗಿದೆ ಎಂದು ತಿಳಿದು ಬಂದಿದೆ. ಅವರು ಬೇಗ ಗುಣಮುಖರಾಗಲಿ ಎಂದು ಲಕ್ಷಾಂತರ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿಯೂ ಸಹ ನಟಿಯ ಆರೋಗ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಹೇಮಾ ಚೌದರಿ ಅವರಿಗೆ ಬ್ರೈನ್ ಹೆಮರೇಜ್ ಆಗಿತ್ತು. ಕೂಡಲೇ ಅವರನ್ನು ಆಸ್ಪತ್ರೆ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರ ನಿಗಾಘಟಕದಲ್ಲಿ ನಟಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಅವರ ಪುತ್ರ ಇಂಗ್ಲೆಂಡ್ ನಲ್ಲಿದ್ದು, ಅವರ ಆಗಮನಕ್ಕಾಗಿ ನಟಿ ಕಾಯುತ್ತಿದ್ದಾರೆ. ಅವರ ದೇಹ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲವೆಂದು ತಿಳಿದು ಬಂದಿದೆ.

    ಇದನ್ನೂ ಕೂಡ ಓದಿ : Loan Waiver : ಅಸಲು ಕಟ್ಟಿದರೆ ರೈತರ ಬಡ್ಡಿ ಮನ್ನಾ.! ಸಹಕಾರ ಸಂಘಗಳಲ್ಲಿನ ಸಾಲಕ್ಕೆ ಅನ್ವಯ!

    ಹಿರಿಯ ನಟಿ ಬೇಗ ಗುಣಮುಖರಾಗಲಿ ಅಂತ ಕನ್ನಡ ಚಿತ್ರರಂಗದ ಸಾವಿರಾರು ಜನ ಪ್ರಾರ್ಥಿಸುತ್ತಿದ್ದಾರೆ. ಇತ್ತೀಚಿಗಷ್ಟೆ ಹಿರಿಯ ನಟಿ ಲೀಲಾವತಿ ಅವರು ನಿಧನ ಹೊಂದಿದರು. ಹನ್ನೊಂದನೇ ದಿನದ ಕಾರ್ಯಕ್ಕೆ ಆಗಮಿಸಿದ ಹೇಮ ಚೌಧರಿ ಅವರು ವಿನೋದ್ ರಾಜ್‌ಗೆ ಸಾಂತ್ವನ ಹೇಳಿದ್ದರು. ಆದ್ರೆ ಇದೀಗ ಅವರಿಗೆ ಹಠಾತ್ ಆರೋಗ್ಯ ಸಮಸ್ಯೆ ಎದುರಾಗಿದೆ. ಎಪ್ಪತ್ತರ ದಶಕದಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಹೇಮಾ ಚೌಧರಿ ಅವರು ನೂರಾರು ಸಿನಿಮಾಗಳಲ್ಲಿ ನಟಿಸಿದ್ದರು. ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೆಲವು ಧಾರಾವಾಹಿಗಳಲ್ಲಿಯೂ ಅವರು ಕಾಣಿಸಿಕೊಂಡಿದ್ದಾರೆ. ನಟಿ ಹೇಮಾ ಅವರಿಗೆ ಅನಾರೋಗ್ಯ ಸಮಸ್ಯೆ ಆಗಿರುವುದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.

    ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

    ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.
    
    ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..
  • Vinodh Raj Wife : ವಿನೋದ್ ರಾಜ್ ಮನೆ ಕೆಲಸದವರನ್ನ ಮದುವೆಯಾಗಿದ್ದು ಯಾಕೆ.? ಸತ್ಯ ಬಟಾ ಬಯಲು.!

    Vinodh Raj Wife : ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ವಯೋಸಹಜ ಕಾಯಿಲೆಯಿಂದ ಡಿಸೆಂಬರ್ ಎಂಟರಂದು ಇಹಲೋಕ ತ್ಯಜಿಸಿದ್ದರು. ಕೆಲವು ತಿಂಗಳುಗಳ ಹಿಂದೆ ಲೀಲಾವತಿ ಅವರ ಫ್ಯಾಮಿಲಿ ಫೋಟೋ ಮತ್ತು ಮೊಮ್ಮಗನ ಮಾರ್ಕ್ಸ್ ಕಾರ್ಡ್ ವೈರಲ್ ಆಗಿತ್ತು. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡು ವಿನೋದ್ ರಾಜ್ ಗೆ ಮದುವೆ ಆಗಿದ್ದರೂ ಕೂಡ ಮದುವೆಯಾಗಿಲ್ಲ ಎಂದು ಹೇಳುವುದು ಅಥವಾ ಮುಚ್ಚಿಡ ಲು ಕಾರಣ ಏನು ಎಂದು ಅಭಿಮಾನಿಗಳು ಮತ್ತು ನೆಟ್ಟಿಗರು ಪ್ರಶ್ನೆ ಮಾಡಿದ್ದರು.

    ಇದನ್ನೂ ಕೂಡ ಓದಿ : Schemes for Farmers : ರೈತರು ಜಮೀನಿನಲ್ಲಿ ಮನೆ ಕಟ್ಟಿಕೊಳ್ಳಲು / ಕೊಟ್ಟಿಗೆ ಮನೆ, ಗುಡಿಸಲು, ಫಾರ್ಮ್ ಹೌಸ್ ಕಟ್ಟಿಕೊಳ್ಳುವವರಿಗೆ..

    ಹಳೇ ವಿಡಿಯೋಗಳು ಈಗ ಮತ್ತೊಮ್ಮೆ ವೈರಲ್ ಆಗುತ್ತಿದೆ. ಲೀಲಾವತಿ ಮರಣ ಹೊಂದಿದಾಗ ಅವರ ಅಂತಿಮ ದರ್ಶನ ಪಡೆಯಲು ಸೊಸೆ ಮತ್ತು ಮೊಮ್ಮಗ ಚೆನ್ನೈನಿಂದ ಆಗಮಿಸಿದ್ದರು. ವಿನೋದ್ ರಾಜ್ ಮದುವೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹುಡುಕಿದಾಗ ಹರಿದಾಡುತ್ತಿರುವ ಸುದ್ದಿಗಳ ನಡುವೆ ನಿರ್ದೇಶಕ ಪ್ರಕಾಶ್ ರಾಜು ಮೇಹು ಮಾತನಾಡಿರುವ ವಿಡಿಯೋ ವೈರಲ್ ಆಗುತ್ತಿದೆ. ವಿನೋದ್ ರಾಜ್ ಅವರು ಮದುವೆಯಾಗಿರುವ ವಿಚಾರ 20 ವರ್ಷಗಳ ಹಿಂದೆ ಗೊತ್ತಿತ್ತು. 2001 ರಲ್ಲಿ ವಿನೋದ್ ಮಗ ಹುಟ್ಟಿರುವುದು ಲೆಕ್ಕಾಚಾರ ಮಾಡಿ 1989-99ರಲ್ಲಿ ಇವರ ಮದುವೆ ನಡೆದಿರಬಹುದು.

    ಇದನ್ನೂ ಕೂಡ ಓದಿ : Pension Scheme : 60 ವರ್ಷ ಮೇಲ್ಪಟ್ಟ ಎಲ್ಲಾ ಪಿಂಚಣಿದಾರರಿಗೆ / ಮನೆ ಬಾಗಿಲಿಗೆ ಪಿಂಚಣಿ ನೀಡುವ ಸೌಲಭ್ಯ

    ವಿನೋದ್ ಪತ್ನಿ ಇವರೇ ಅಂತ ಯಾರೋ ಹೇಳಿದ್ದರು. ವಿನೋದ್ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗಿಯನ್ನು ಮದುವೆ ಮಾಡಿಕೊಂಡಿದ್ದಾರೆ ಅಂತ ಯಾರೋ ಹೇಳಿದ್ದರು. ಆ ಕಾರಣಕ್ಕೆ ಪಬ್ಲಿಕ್‌ನಲ್ಲಿ ಹೇಳಿಕೊಂಡಿಲ್ಲವೋ, ಏನೋ ಗೊತ್ತಿಲ್ಲ. ಅದು ನಿಜವೇ ಆಗಿದ್ದರೆ ವಿನೋದ್ ರಾಜ್ ಹೆಮ್ಮೆಯಿಂದ ಹೇಳಿಕೊಳ್ಳಬೇಕು. ಯಾಕಂದ್ರೆ ಇದರಲ್ಲಿ ಯಾವುದೇ ತಪ್ಪು ಕೆಲಸವಿಲ್ಲ. ಕೆಲಸ ಮಾಡುತ್ತಿರುವ ಹೆಂಗಸಿಗೆ ಬಾಳು ಕೊಟ್ಟಿದ್ದಾರೆ. ಹೆಮ್ಮೆಯಿಂದ ಹೇಳಿಕೊಳ್ಳಬೇಕಾದ ವಿಚಾರ. ಯಾವ ಕಾರಣಕ್ಕೆ ಮುಚ್ಚಿಟ್ಟಿದ್ದಾರೆ, ಅದರಲ್ಲಿ ಯಾವ ನಿಗೂಢತೆ ಇದೆ? ನನಗೆ ಗೊತ್ತಿಲ್ಲ. ಅವರಿಗೆ ಹೆಂಡತಿ ಮಗ ಇರುವುದು ನಿಜ. ನನಗೆ ಅಷ್ಟು ಮಾತ್ರ ಗೊತ್ತು ಎಂದಿದ್ದಾರೆ ಪ್ರಕಾಶ್ ರಾಜ್.

    ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

    ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.
    
    ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply