Bigg Boss Kannada : ಎಲಿಮಿನೇಟ್ ಆದ ಇಬ್ಬರೂ ಸ್ಪರ್ಧಿಗಳು ಇವರೇ.! ಕೊನೆಗೆ ಮತ್ತೊಂದು ಟ್ವಿಸ್ಟ್.!

Bigg Boss Kannada : ಬಿಗ್ ಬಾಸ್ ಮನೆಯಲ್ಲಿ ಹನ್ನೊಂದನೇ ವಾರ ಡಬಲ್ ಎಲಿಮಿನೇಷನ್.! ಬಿಗ್ ಬಾಸ್ ಮನೆಗೆ ಬಂದಂತಹ ಸ್ಪರ್ಧಿಗಳು ಇಬ್ಬರು ಸ್ಪರ್ಧಿಗಳನ್ನ ಕರೆದುಕೊಂಡು ಬಿಗ್ ಬಾಸ್(Bigg Boss Kannada) ಮನೆಯಿಂದ ಹೊರಗಡೆ ಹೋಗಿದ್ದಾರಾ.?. ಎಲಿಮಿನೇಟ್ ಆಗಿರುವಂತಹ ಇಬ್ಬರು ಸ್ಪರ್ಧಿಗಳು ಯಾರು.? ಏನಾದ್ರೂ ಟ್ವಿಸ್ಟ್ ಇದ್ಯಾ.?

ಈ ವಾರದ ಎಲಿಮಿನೇಷನ್ ವಿಷಯಕ್ಕೆ ಬರುವುದಾದ್ರೆ, ಈ ವಾರದ ಎಲಿಮಿನೇಷನ್ ನಲ್ಲಿ ಮೊದಲು ಸೇವ್ ಆಗಿರುವುದು ಯಾರು ಅಂತ ನೋಡೋಣ. ಸಂಗೀತ, ಡ್ರೋನ್ ಪ್ರತಾಪ್, ವರ್ತೂರು ಸಂತೋಷ್, ಮೈಕಲ್ ಹಾಗು ಅವಿನಾಶ್ ಈ ಆರು ಜನ ಸ್ಪರ್ಧಿಗಳು ನಾಮಿನಟ್ ಆಗಿದ್ದರು. ಮೊದಲನೇಯದಾಗಿ ಸೇವ್ ಆಗಿರೋದು ಸಂಗೀತ ಶೃಂಗೇರಿ. ಇನ್ನು ಎರಡನೇಯದಾಗಿ ಡ್ರೋನ್ ಪ್ರತಾಪ್ ಅವರು ಸೇವ್ ಆಗಿದ್ದಾರೆ ಅಂತ ಮಾಹಿತಿ ಸಿಕ್ಕಿದೆ. ಇನ್ನು ಇವರ ನಂತರ ಸೇವ್ ಆಗಿರುವುದು ವರ್ತೂರ್ ಸಂತೋಷ್. ಹೀಗಾಗಿ ಈ ಮೂರು ಜನರನ್ನ ಹೊರತುಪಡಿಸಿ ಉಳಿದಿರುವಂತಹ ಸಿರಿ, ಅವಿನಾಶ್, ಮೈಕಲ್ ಮೂವರು ಕೂಡ ಬಿಗ್ ಬಾಸ್(Bigg Boss Kannada) ಮನೆಯಲ್ಲಿ ಡೇಂಜರ್ ಜೋನ್ ನಲ್ಲಿದ್ದರು.

ಇದನ್ನೂ ಕೂಡ ಓದಿ : 2024ರಲ್ಲಿ ಲಕ್ ಅಂದ್ರೆ ಇವರದ್ದೆ ಗುರು.! ಇವರು ಹೆಜ್ಜೆ ಇಟ್ಟಲ್ಲೆಲ್ಲಾ ದುಡ್ಡೇ ದುಡ್ಡು.!

ಇವರಲ್ಲಿ ಯಾರು ಸೇವ್ ಆಗಿದ್ದಾರೆ ಅಂತ ನೋಡುವುದಾದ್ರೆ ಸಿಕ್ಕಿರುವಂತಹ ಮಾಹಿತಿಯ ಪ್ರಕಾರ ಮೈಕಲ್ ಅವರು ಸೇವ್ ಆಗಿದ್ದಾರೆ ಅನ್ನುವಂತಹ ಮಾಹಿತಿ ಇದೆ. ಹೀಗಾಗಿ ಅವಿನಾಶ್ ಮತ್ತು ಸಿರಿ ಅವರು ಬಿಗ್ ಬಾಸ್(Bigg Boss Kannada) ಮನೆಯಲ್ಲಿ ಗಾರ್ಡನ್ ಏರಿಯಾದಲ್ಲಿ ಎಂಟ್ರಿ ಕೊಟ್ಟಂತಹ ಎರಡು ಕಾರುಗಳಲ್ಲಿ ಕುಳಿತು ಕೊಂಡಿದ್ದಾರೆ. ಹಾಗೇನೇ ಆ ಎರಡು ಕಾರುಗಳು ಗಾರ್ಡನ್ ಏರಿಯಾದಲ್ಲಿ ಹಲವು ಸುತ್ತುಗಳನ್ನು ಹಾಕಿ ಬಿಗ್ ಬಾಸ್ ಮನೆಯಿಂದ ಹೊರಗಡೆ ಹೊರಟಿದೆ. ಹೀಗಾಗಿ ಇವರಿಬ್ಬರು ಕೂಡ ಎಲಿಮಿನೇಟ್ ಅನ್ನೋ ರೀತಿಯಲ್ಲಿ ಕಾಣಿಸ್ತಿದ್ದಾರೆ ಪ್ರೊಮೋ ದಲ್ಲಿ. ಆದರೆ ಇಲ್ಲೊಂದು ಟ್ವಿಸ್ಟ್ ಇರುವಂತಹ ಸಾಧ್ಯತೆ ತುಂಬಾನೇ ಹೆಚ್ಚಾಗಿದೆ.

ಯಾಕಂದ್ರೆ ಈ ರೀತಿಯಾಗಿ ರೌಂಡ್ ಹಾಕಿ ಬಿಗ್ ಬಾಸ್(Bigg Boss Kannada) ಮನೆಯಿಂದ ಹೊರಗಡೆ ಹೋಗುವಂತಹ ಎರಡು ಕಾರುಗಳಲ್ಲಿ ಯಾವುದೇ ಒಂದು ಕಾರು ವಾಪಸ್ ಕೂಡ ಬರಬಹುದು. ಹೀಗಾಗಿ 1 ಸ್ಪರ್ಧಿಯನ್ನು ಮಾತ್ರ ಎಲಿಮಿನೇಟ್ ಮಾಡಬಹುದೇನೋ. ಈ ಸಲದ ಸೀಸನ್ ನಲ್ಲಿ ಸಾಕಷ್ಟು ಬಾರಿ ನೋ ಎಲಿಮಿನೇಷನ್ ವೀಕ್ ಗಳು ಆಗಿದ್ದಾವೆ. ಹೀಗಾಗಿ ಮತ್ತೆ ಡಬಲ್ ಎಲಿಮಿನೇಷನ್ ಮಾಡದೇ ಇದ್ದರೆ ಖಂಡಿತವಾಗಲೂ ಬಿಗ್ ಬಾಸ್ ನ್ನು ಇನ್ನೂ ಹೆಚ್ಚಿನ ದಿನಗಳ ಕಾಲ ನಡೆಸಬೇಕಾಗುತ್ತೆ.

ಇದನ್ನೂ ಕೂಡ ಓದಿ : Labour Card Scheme : ಕಾರ್ಮಿಕ ಕಾರ್ಡು ಹೊಂದಿರುವವರ ಮಕ್ಕಳಿಗೆ ಲ್ಯಾಪ್‌ಟಾಪ್ ವಿತರಣೆ.! ಪಡೆಯುವುದು ಹೇಗೆ.?

ಹಲವು ಸೀರಿಯಲ್ ಗಳು ಕೂಡ ಬಿಡುಗಡೆಗೊಳ್ಳುವುದು ಬಾಕಿ ಇರುವುದರಿಂದ ಬಿಗ್ ಬಾಸ್(Bigg Boss Kannada) ನ ಹತ್ತನೇ ಸೀಸನ್ ನ್ನು 100 ದಿನಕ್ಕೆ ಸೀಮಿತಗೊಳಿಸಬಹುದು. ಹೀಗಾಗಿ ಮಾಹಿತಿಯ ಪ್ರಕಾರ ಅವಿನಾಶ್ ಶೆಟ್ಟಿ ಹಾಗು ಸಿರಿ. ಇವರಿಬ್ಬರು ಕೂಡ ಎಲಿಮಿನೇಟ್ ಆಗಿ ಹೊರಗಡೆ ಬಂದಿದ್ದಾರೆ ಅಂತ ಹೇಳಲಾಗ್ತಿದೆ. 95% ಇದು ಕನ್ಫರ್ಮ್ ಮಾಹಿತಿ ಆಗಿದೆ. ಸಿರಿ ಮತ್ತು ಅವಿನಾಶ್ ಶೆಟ್ಟಿ ಎಲಿಮಿನೇಟ್ ಆಗುವುದು.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply