ದರ್ಶನ್ ‘ಕ್ರಾಂತಿ’ ಸಿನಿಮಾ ನೋಡುತ್ತಾರಾ ಕಿಚ್ಚ ಸುದೀಪ್.!

ಜಸ್ಟ್ ಕನ್ನಡ : ‘ಕ್ರಾಂತಿ’ ಸಿನಿಮಾದ ಪ್ರಿ ರಿಲೀಸ್ ಇವೆಂಟ್ ಗೆ ಕಿಚ್ಚ ಸುದೀಪ್ ಅವರು ಬರುತ್ತಾರಾ.? ಅನ್ನುವಂತಹ ಒಂದು ವಿಷಯ ತುಂಬಾನೇ ಟ್ರೆಂಡ್ ಆಗಿದ್ದು, ಅಭಿಮಾನಿಗಳೆಲ್ಲರೂ ಕೂಡ ಕಿಚ್ಚ ಸುದೀಪ್ ರವರು ಬರಲೇ ಬೇಕು ಅಂತ ಹೇಳಿದ್ರು, ದರ್ಶನ್ ಅಭಿಮಾನಿಗಳು ಹಾಗೂ ಸುದೀಪ್ ಅಭಿಮಾನಿಗಳು ಕೊನೆಗೂ ‘ಕ್ರಾಂತಿ’ ಸಿನಿಮಾದ ಮೂಲಕವಾದ್ರೂ ಒಂದಾದರಲ್ಲಾ, ಕುಚಿಕು ಗೆಳೆಯರು ಅಂತ ಖುಷಿಪಟ್ಟಿದ್ದರು. ಈಗ ಮತ್ತೊಂದು ವಿಷಯ ತುಂಬಾನೇ ಟ್ರೆಂಡ್ ಆಗ್ತಾ ಇದೆ. ಸುದೀಪ್ ರವರು ಕ್ರಾಂತಿ ಸಿನಿಮಾವನ್ನ ನೋಡ್ತಾರಾ.?

ಇದರ ಬಗ್ಗೆ ಟ್ವಿಟರ್ ಹಾಗೂ ಎಲ್ಲಾ ಸೋಶಿಯಲ್ ಮೀಡಿಯಾದಲ್ಲಿ ತುಂಬಾ, ಅಂದ್ರೆ ತುಂಬಾನೇ ಟ್ರೆಂಡ್ ಆಗ್ತಾ ಇದೆ. ಬಲ್ಲ ಮೂಲಗಳ ಪ್ರಕಾರ ಸುದೀಪ್ ರವರು ‘ಕ್ರಾಂತಿ’ ಸಿನಿಮಾವನ್ನು ನೋಡುವ ಸಾಧ್ಯತೆ ಇದೆ. ಟ್ವೀಟ್ ಅನ್ನ ನೋಡಿ ಸುದೀಪ್ ರವರು ಯಾವ ರೀತಿ ರೆಸ್ಪಾನ್ಸ್ ಮಾಡ್ತಾರೆ ಅಂತ ಕಾಡು ನೋಡಬೇಕಿದೆ.

ಯಾಕೆಂದರೆ, ಸಾಮಾನ್ಯವಾಗಿ ಸುದೀಪ್ ರವರು ಯಾವಾಗಲೂ ಹೇಳ್ತಾ ಇದ್ರೂ, ಈಗಲೂ ನನ್ನ ಮನೆಯಲ್ಲಿ ಮೊದಲು ಇರುವುದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಫೋಟೋ, ದರ್ಶನ್ ಅವರ ಬರುವಿಕೆಗಾಗಿ ನಾನು ಯಾವಾಗಲೂ ಕಾಯ್ತಾ ಇರ್ತೀನಿ, ಆದರೆ ಕೆಲವೊಮ್ಮೆ ಇವರಿಬ್ಬರು ಜಗಳ ಆಡಿಕೊಂಡಿರುವುದು ಸಹಜ. ಆದರೆ ಇತ್ತೀಚೆಗೆ ದರ್ಶನ್ ಅವರಿಗೆ ಹೊಸಪೇಟೆಯಲ್ಲಿ ಆದಂತಹ ಘಟನೆಯನ್ನು ನೋಡಿ ಸುದೀಪ್ ರವರು ಮನದಾಳದ ಮಾತನ್ನು ಹಂಚಿಕೊಂಡಿದ್ದರು.

ಇದನ್ನೂ ಓದಿ : ಹೊಸ ದಾಖಲೆ ಬರೆದ ಕ್ರಾಂತಿ ಸಿನಿಮಾ.! ಎಲ್ಲಾ ಟಿಕೆಟ್ ಗಳು ಈಗಾಗಲೇ ಸೋಲ್ಡ್ ಔಟ್.! ಶಾಕಿಂಗ್!

ಅದೇ ರೀತಿ ಅದಕ್ಕಾಗಿ ದರ್ಶನ್ ಅವರು ಕೂಡ ತುಂಬಾನೇ ಪ್ರೀತಿಯಿಂದ ಕಿಚ್ಚ ಸುದೀಪ್ ರವರಿಗೆ ಉತ್ತರವನ್ನು ಸಹ ಕೊಟ್ಟಿದ್ದರು. ಈಗ ‘ಕ್ರಾಂತಿ’ ಸಿನಿಮಾ ದರ್ಶನ್ ಅಭಿಮಾನಿಗಳ ಸ್ವಾಭಿಮಾನದ ಪ್ರಶ್ನೆಯಾಗಿದೆ. ಕೇವಲ ದರ್ಶನ್ ಅಭಿಮಾನಿಗಳಲ್ಲದೇ, ನಟ ದರ್ಶನ್ ಅವರಿಗೂ ಕೂಡ ‘ಕ್ರಾಂತಿ’ ಸಿನಿಮಾ ತುಂಬಾ ಮುಖ್ಯವಾಗಿದೆ. ಸಿನಿಮಾ ಏನೇ ಆಗಲಿ ಸುದೀಪ್ ರವರು ‘ಕ್ರಾಂತಿ’ ಸಿನಿಮಾ ನೋಡುವುದಕ್ಕೆ ಬರುತ್ತಾರಾ.? ಅನ್ನೋ ತುಂಬಾ ಚರ್ಚೆ ಆಗ್ತಾ ಇದೆ. ಇದೆ ಜನವರಿ 26ನೇ ತಾರೀಖಿನಂದು ‘ಕ್ರಾಂತಿ’ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಅಗ್ತಾ ಇದ್ದು, ಕನ್ನಡ ಸಿನಿಮಾವನ್ನು ಎಲ್ಲಾ ನೋಡಿ ಪ್ರೋತ್ಸಾಹಿಸಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ಜಸ್ಟ್ ಕನ್ನಡ (Just Kannada) ಲೈಕ್ ಮತ್ತು ಶೇರ್ ಮಾಡೋದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply