Darshan Thoogudeepa : ಒಬ್ಬ ಮನುಷ್ಯನಿಗೆ ಎಷ್ಟು ಅಂತ ಕಷ್ಟ ಕೊಡ್ತೀರಾ ಎಂದು ನೋವು ಹೊರ ಹಾಕಿದ ದರ್ಶನ್.!

Darshan Thoogudeepa : ಕನ್ನಡದ ಹೆಸರಾಂತ ನಟ ದರ್ಶನ್ ಅವರನ್ನು ಟಾರ್ಗೆಟ್ ಮಾಡಲಾಗುತ್ತಿದೆಯಾ.? ಇಂತಹದ್ದೊಂದು ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಇದೀಗ ದರ್ಶನ್ ಅವರನ್ನ ಟಾರ್ಗೆಟ್ ಮಾಡಿದ್ದು ಯಾರು? ದರ್ಶನ್ ತುಂಬಾನೇ ನೋವು ಪಟ್ಟುಕೊಂಡು ಯಾಕೆ.? ನೋಡೋಣ.

ಕಾಟೇರ ಸಿನಿಮಾದ ಸಕ್ಸಸ್ ಅನ್ನು ಸಹಿಸಿಕೊಳ್ಳೋಕೆ ಆಗದೆ ಅವರಿಗೆ ತೊಂದರೆ ನೀಡಲಾಗುತ್ತಿದೆ ಎಂದು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮಾಧ್ಯಮಗಳ ಮುಂದೆ ಹೇಳಿಕೆ ನೀಡುತ್ತಿದ್ದಂತೆ ದರ್ಶನ್ ಅಭಿಮಾನಿಗಳು ಟಾರ್ಗೆಟ್ ಮಾಡ್ತಿರುವುದು ಯಾರು ಎನ್ನುವ ಚರ್ಚೆ ಶುರು ಮಾಡಿದ್ದಾರೆ. ನಟ ದರ್ಶನ್ ನಟನೆಯ ಕಾಟೇರ ಸಿನಿಮಾದ ಸಕ್ಸಸ್ ಪಾರ್ಟಿಯ ನಂತರ ಇಡೀ ಸಿನಿಮಾಗೆ ತೊಂದರೆ ತಂದೊಡ್ಡಿತ್ತು. ಬೆಳಗಿನ ಜಾವದವರೆಗೂ ಪಾರ್ಟಿ ಮಾಡಿದ್ರು ಅಂತ ನಟ ದರ್ಶನ್ ಸೇರಿ ಎಂಟು ಸ್ಟಾರ್ ನಟರಿಗೆ ನೋಟೀಸ್ ನೀಡಿದ ಪೊಲೀಸರ ಮುಂದೆ ಎಂಟು ಸ್ಟಾರ್‌ಗಳು ನಿನ್ನೆ ಠಾಣೆಗೆ ಬಂದು ವಿಚಾರಣೆ ಎದುರಿಸಿದರು.

ಇದನ್ನೂ ಕೂಡ ಓದಿ : Gruhalakshmi Updates : ಗೃಹಲಕ್ಷ್ಮಿ 5ನೇ ಕಂತಿನ ಹಣ ಬೇಕಾ.? ಹೊಸ ನಿಯಮ ಜಾರಿಗೆ / ಉಚಿತ ಹಣ ಬೇಕಿದ್ರೆ ಇದನ್ನ ಫಾಲೋ ಮಾಡಿ

ಜನವರಿ ಮೂರನೇ ತಾರೀಕಿನ ರಾತ್ರಿ ಜೆಟ್‌ಲ್ಯಾಗ್ ಪಬ್‌ನಲ್ಲಿ ಕಾಟೇರ ಸಿನಿಮಾ ತಂಡ ಸಕ್ಸಸ್ ಪಾರ್ಟಿ ಮಾಡಿತ್ತು. ಸುಮಾರು ಒಂದು ಗಂಟೆಗಳ ಕಾಲ ವಿಚಾರಣೆ ಎದುರಿಸಿ ಹೊರಬಂದ ಮೇಲೆ ಮಾತನಾಡಿದ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರು ದರ್ಶನ್ ಅವರನ್ನು ಟಾರ್ಗೆಟ್ ಮಾಡಲಾಗಿದೆ ಅಂದಿದ್ದಾರೆ. ಯಾರು ಮಾಡುತ್ತಿದ್ದಾರೆ ಅಂತಾನೂ ಗೊತ್ತು. ಕಾಟೇರ ಸಿನಿಮಾ ಸಕ್ಸಸ್ ಸಹಿಸಿಕೊಳ್ಳಲಾಗದೆ ಈ ರೀತಿ ಮಾಡುತ್ತಿದ್ದಾರೆ. ಊಟ ಕ್ಕೆ ಬಂದವರಿಗೆ ನೋಟಿಸ್ ಕೊಟ್ಟಿದ್ದು ಇದೇ ಮೊದಲು. ಬರೀ ಊಟಕ್ಕೆ ಹೋಗಿದ್ವಿ ಅವತ್ತು ತಡರಾತ್ರಿ ಪಾರ್ಟಿ ಮಾಡಿಲ್ಲ ಅಂತ ಆರೋಪ ತಳ್ಳಿ ಹಾಕಿದರು.

ಇದನ್ನೂ ಕೂಡ ಓದಿ : Labour : ನೀವು ಕಾರ್ಮಿಕರಾ.? ಕಾರ್ಮಿಕರಿಗೆ ಸಿಗುತ್ತೆ 10 ಲಕ್ಷ.! ನೋಂದಣಿ ಮಾಡಿಸಿ ಇದರ ಲಾಭ ಪಡೆಯಿರಿ

ಇನ್ನು ಎಷ್ಟು ಅಂತ ಆ ಮನುಷ್ಯನಿಗೆ ತೊಂದರೆ ಕೊಡ್ತೀರಾ ನೀವು.? ದರ್ಶನ್ ಏಳಿಗೆ ಸಹಿಸಿಕೊಳ್ಳಲು ಆಗದೇ ಈ ರೀತಿ ಕೆಲಸ ಮಾಡಿದ್ದೀರಾ.? ನೀವು ಎಷ್ಟೇ ತೊಂದರೆ ಕೊಟ್ಟರೂ, ಇನ್ನೂ ಎತ್ತರಕ್ಕೆ ಹೋಗ್ತಾರೆ. ಕೆಳಗೆ ಯಾವತ್ತೂ ಬರಲ್ಲ ಎನ್ನುವ ಮಾತು ಹೇಳಿದ್ದಾರೆ ರಾಕ್ ಲೈನ್ ವೆಂಕಟೇಶ್.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply