Rishabh Shetty : ಅಯೋಧ್ಯೆಯ ರಾಮಮಂದಿರ ಉದ್ಘಾಟನೆಗೆ ನಟ ರಿಷಬ್ ಶೆಟ್ಟಿಗೆ ಆಹ್ವಾನ

Rishabh Shetty : ದಕ್ಷಿಣ ಭಾರತದ ಕೆಲವೇ ಕೆಲವು ನಟ ನಟಿಯರನ್ನು ಅಯೋದ್ಯೆಯ ರಾಮಮಂದಿರ(Ram Mandir) ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದ್ದು, ಕಾಂತಾರ ನಟ ರಿಷಬ್ ಶೆಟ್ಟಿಯು(Rishabh Shetty) ಕೂಡ ಈ ಸಾಲಿನಲ್ಲಿ ಸೇರಿದ್ದಾರೆ. ದಕ್ಷಿಣ ಭಾರತದ ಸ್ಟಾರ್ ನಟರಾದ ಚಿರಂಜೀವಿ, ರಜನಿಕಾಂತ್, ಮೋಹನ್ ಲಾಲ್, ಸೇರಿದಂತೆ ಕೆಲವೇ ಕೆಲವು ನಟರಿಗೆ ಇಂತಹ ಅವಕಾಶ ಸಿಕ್ಕಿದ್ದು, ಕನ್ನಡದ ರಿಷಬ್ ಶೆಟ್ಟಿಗೂ(Rishabh Shetty) ಕೂಡ ಇಂಥದ್ದೊಂದು ಅವಕಾಶ ಸಿಕ್ಕಿದೆ.

ಇದನ್ನೂ ಕೂಡ ಓದಿ : Karnataka Labour Card : ಲೇಬರ್ ಕಾರ್ಡ್ ಹೊಂದಿರುವ ರಾಜ್ಯದ ಎಲ್ಲಾ ಕಾರ್ಮಿಕರಿಗೆ ಭರ್ಜರಿ ಸಿಹಿಸುದ್ಧಿ!

ಹೊಸ ವರ್ಷದ ಜನವರಿ 22 ರಂದು ಉತ್ತರ ಪ್ರದೇಶದ ಅಯೋದ್ಯೆಯಲ್ಲಿರುವ ರಾಮಮಂದಿರ(Ram Mandir) ಲೋಕಾರ್ಪಣೆಗೊಳ್ಳಲಿದ್ದು, ದೇಶದ ಪ್ರತಿಯೊಂದು ಗ್ರಾಮ ಗ್ರಾಮಗಳಲ್ಲಿ ಈಗಾಗಲೇ ಪೂಜೆ ಪುನಸ್ಕಾರ ಕಾರ್ಯಕ್ರಮಗಳು ಆಯೋಜನೆಗೊಳ್ಳುತ್ತಿದೆ. ಇದರ ಭಾಗವಾಗಿ ಬೆಂಗಳೂರಿನ ಬನಶಂಕರಿಯ ರಾಜೇಂದ್ರ ನಾಯ್ಡು ಎನ್ನುವವರು ಅಯೋದ್ಯೆಯ ರಾಮಮಂದಿರ(Ram Mandir)ಕ್ಕಾಗಿ ಘಂಟಾದಾನ ಸಮರ್ಪಣೆ ಮಾಡಿದ್ದಾರೆ.

Actor Rishabh Shetty invited to the inauguration of Ayodhya's Ram Mandir
Actor Rishabh Shetty invited to the inauguration of Ayodhya’s Ram Mandir

ಇದನ್ನೂ ಕೂಡ ಓದಿ : ಬರಪೀಡಿತ ಜಿಲ್ಲೆಗಳ ಎಲ್ಲಾ ರೈತರಿಗೆ ಗುಡ್ ನ್ಯೂಸ್ – 2 ಲಕ್ಷ ಸಾಲ ಮನ್ನಾ.! ರಾಷ್ಟ್ರೀಕೃತ ಬ್ಯಾಂಕ್ ಹಾಗು ಸಹಕಾರಿ ಬ್ಯಾಂಕ್!

ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಗಳು ಘಂಟಾದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, 30 ಸಣ್ಣ ಘಂಟೆಗಳು, 2.5 ಟನ್ ತೂಕದ ಘಂಟೆಗಳು ಹಾಗು 38 ಕೆಜಿ ತೂಕದ ಬೆಳ್ಳಿಯ ಸಾಮಾನುಗಳನ್ನು ಈ ಕಾರ್ಯಕ್ರಮದಲ್ಲಿ ಸಮರ್ಪಣೆ ಮಾಡಲಾಗಿದೆ. ಇಂದು ಪೂಜಾ ಸಾಮಗ್ರಿ ಹಾಗು ಘಂಟಾದಾನವನ್ನು ಅಯೋಧ್ಯೆಯ ರಾಮಮಂದಿರಕ್ಕೆ(Ram Mandir) ಕೊಂಡೊಯ್ಯಲಿದ್ದಾರೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply