Drone Pratap : ಸುದೀಪ್ ಮಾತಿಗೆ ಹೆದರಿ ಪ್ರತಾಪ್ ಬಳಿ ಕ್ಷಮೆ ಕೇಳಿದ ಭಾಗ್ಯಶ್ರೀ, ತುಕಾಲಿ ಸಂತು / ಸಹಸ್ಪರ್ಧಿಗಳು ಶಾಕ್.!

Drone Pratap : ಬಿಗ್ ಬಾಸ್ ಕನ್ನಡ ಸೀಸನ್(Bigg Boss Kannada) 10ರ ಮೊದಲನೇ ವಾರದಲ್ಲಿ ತಮಾಷೆ ಮಾಡುತ್ತಾ ಎಲ್ಲರ ಕಾಲೆಳೆಯುತ್ತಿದ್ದ ತುಕಾಲಿ ಸಂತು ಅವರಿಗೆ ನೇರವಾಗಿಯೇ ಚಾಟಿ ಬೀಸಿ ಕಿಚ್ಚ ಸುದೀಪ್(Kiccha Sudeep) ಮಾತಿನಲ್ಲಿ ತಿವಿದಿದ್ದಾರೆ. ಭಾನುವಾರದ ಸಂಚಿಕೆಯಲ್ಲಿ ಡ್ರೋನ್ ಪ್ರತಾಪ್(Drone Pratap) ಗಾಗಿ ಸುದೀಪ್ ಹಾಡೊಂದನ್ನು ಪ್ಲೇ ಮಾಡಿಸಿ ರಾಂಪ್ ವಾಕ್ ಮಾಡುವಂತೆ ಹೇಳಿದ್ದು, ತನಿಷಾ ಮತ್ತು ಸಂಗೀತಾ ಜೊತೆ ಸಖತ್ತಾಗಿ, ಹೊಸ ಜೋಶ್ ನಲ್ಲಿ ಪ್ರತಾಪ್ ರಾಂಪ್ ವಾಕ್ ಮಾಡಿದ್ದಾರೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : Neethu Vanajakshi : ನೀತು ವನಜಾಕ್ಷಿ ಬಗ್ಗೆ ನಿಮಗೆ ಗೊತ್ತಿರದ ಕೆಲವೊಂದು ರಹಸ್ಯಗಳು / ನೀತು ಹಿಂದೆ ಹೇಗಿದ್ದರು ಗೊತ್ತಾ.?

ತುಕಾಲಿ ಸಂತು ಅವರನ್ನು ಗುರಾಯಿಸಿ, ಒಬ್ಬರು ಎಲ್ಲರೊಂದಿಗೆ ಬೆರೆಯುವಂತೆ ಓಪನ್ ಅಪ್ ಆಗುವಂತೆ ಮಾಡುವುದು ಹೀಗೆ ಎಂದು ಪರೋಕ್ಷವಾಗಿ ಕಿಚ್ಚ ಸುದೀಪ್ ಟಾಂಗ್ ನೀಡಿದ್ದಾರೆ. ಡ್ರೋನ್ ಪ್ರತಾಪ್ ಬಗ್ಗೆ ತಮಾಷೆ ಮಾಡಿದ್ದರ ಬಗ್ಗೆ ತುಕಾಲಿ ಸಂತುವಿಗೆ ಶನಿವಾರದ ಸಂಚಿಕೆಯಲ್ಲಿ ಕ್ಲಾಸ್ ತೆಗೆದುಕೊಂಡ ಸುದೀಪ್, ಒಪ್ಪರ ವ್ಯಕ್ತಿತ್ವವನ್ನು ಕೊಲ್ಲುವುದಕ್ಕೆ ನಿಮಗೆ ಅಧಿಕಾರ ಕೊಟ್ಟವರು ಯಾರು.? ಎಂದು ಪ್ರಶ್ನೆ ಮಾಡಿದ್ದರು.

Whatsapp Group Join
Telegram channel Join

ಈ ಬಗ್ಗೆ ತುಕಾಲಿ ಸಂತು ಸಮಜಾಯಿಷಿ ನೀಡಿದರೂ, ಒಬ್ಬರ ಅಳು ಇನ್ನೊಬ್ಬರ ತಮಾಷೆ ಹೇಗೆ ಆಗುತ್ತೆ ಎಂದು ಕಿಡಿಕಾರಿದರು. ಬಳಿಕ ಸಂತೋಷ್ ಡ್ರೋನ್ ಪ್ರತಾಪ್ ಬಳಿ ಕ್ಷಮೆ ಕೇಳಿದ್ದಾರೆ. ಈ ವಾರ ಬಿಗ್ ಬಾಸ್ ಮನೆಯಿಂದ ಒಬ್ಬರು ಹೊರ ಹೋಗಲಿದ್ದು, ಅದು ಯಾರು ಎನ್ನುವ ಕುತೂಹಲ ಗರಿಗೆದರಿದೆ. ಡ್ರೋನ್ ಪ್ರತಾಪ್ ಹಾಗು ತುಕಾಲಿ ಸಂತು ಬಗ್ಗೆ ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.

ಇದನ್ನೂ ಕೂಡ ಓದಿ : Bigg Boss Kannada : ಬಿಗ್ ಬಾಸ್ ಮನೆಯಿಂದ ಹೊರಬರುವ ಸ್ಪರ್ಧಿ ಇವರೇನಾ.? ವಾರದ ಕಥೆ ಕಿಚ್ಚನ ಜೊತೆ ಯಾರು ಹೊರಕ್ಕೆ.?

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply