Drought Relief : ರೈತರಿಗೆ ಬರ ಪರಿಹಾರ ಗುಡ್ ನ್ಯೂಸ್ | ಪ್ರತೀ ಎಕರೆಗೆ ಎಷ್ಟು ಹಣ ಸಿಗುತ್ತೆ ಗೊತ್ತಾ.?

Drought Relief : ಬರ ಪರಿಹಾರಕ್ಕಾಗಿ ಕಾಯುತ್ತಿದ್ದ ಬೆಳೆ ನಷ್ಟ ಹೊಂದಿದ ರೈತರಿಗೆ ಕೊನೆಗೂ ಗುಡ್ ನ್ಯೂಸ್ ಸಿಕ್ಕಿದೆ. ಕಳೆದ ಬಾರಿ ರಾಜ್ಯದಲ್ಲಿ ಮುಂಗಾರು ಮಳೆ ಹಾಗೂ ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ರೈತರು ಬೆಳೆನಷ್ಟ ಹೊಂದಿ ಆರ್ಥಿಕ ಸಂಕಷ್ಟ ಎದುರಿಸಿದ್ದರು. ರೈತರ ಬರ ಪರಿಸ್ಥಿತಿಗೆ ನೆರವಾಗಲು ರಾಜ್ಯ ಸರ್ಕಾರ ಬರಗಾಲ ಘೋಷಿಸಿ ಮೊದಲ ಹಂತದ ಬರ ಪರಿಹಾರ 2000 ರೂಪಾಯಿಯನ್ನು ನೀಡಿತ್ತು. ಮತ್ತು ಹೆಚ್ಚಿನ ಬರ ಪರಿಹಾರಕ್ಕಾಗಿ ಕೇಂದ್ರದಿಂದ ಅನುದಾನ ನೀಡುವಂತೆ ಆಗ್ರಹಿಸಿತ್ತು.

ಮೂರ್ನಾಲ್ಕು ಬಾರಿ ಮನವಿ ಮಾಡಿದರೂ ಕೇಂದ್ರದಿಂದ ಅನುದಾನ ಬರಲು ವಿಳಂಬವಾದ್ದರಿಂದ ಕೇಂದ್ರದ ವಿರುದ್ಧ ಬರ ಪರಿಹಾರಕ್ಕಾಗಿ ಕೋರ್ಟ್ ಮೊರೆ ಹೋಗಿತ್ತು. ಕರ್ನಾಟಕದ ಬರ ಪರಿಹಾರ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ಕೋರ್ಟ್ ವಾದ ವಿವಾದ ಆಲಿಸಿ ಎರಡು ವಾರದೊಳಗೆ ಕರ್ನಾಟಕದ ಅರ್ಜಿಗೆ ಯಾವ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂಬುದನ್ನು ತಿಳಿಸಬೇಕು ಎಂದು ಕೇಂದ್ರಕ್ಕೆ ಸೂಚಿಸಿದೆ.

ಇದನ್ನೂ ಕೂಡ ಓದಿ : Crop Insurance : ರೈತರ ಖಾತೆಗೆ ₹20,000 ಹಣ ಜಮಾ! ರೈತರ ಖಾತೆಗೆ ಹಿಂಗಾರು ಬೆಳೆ ವಿಮೆಯ ಹಣ ಜಮಾ.! ಹೀಗೆ ಚೆಕ್ ಮಾಡಿಕೊಳ್ಳಿ

ಈ ಬಗ್ಗೆ ಪತ್ರಿಕಾ ಸ್ಪಷ್ಟನೆ ನೀಡಿದ ಕಂದಾಯ ಸಚಿವ ಕೃಷ್ಣಬೈರೇಗೌಡರು, ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಬರ ಪರಿಹಾರವಾಗಿ 4663/- ಕೋಟಿ ರೂಪಾಯಿ ನೀಡಲು ಕೋರಲಾಗಿದ್ದು, ಅದರನ್ವಯ ಒಬ್ಬ ರೈತರಿಗೆ ತಲಾ ₹13,000 ರಿಂದ ₹14,000 ರೂಪಾಯಿ ಬರ ಪರಿಹಾರ ನೀಡಲು ಸಾಧ್ಯವಾಗುತ್ತದೆ. ಈ ಪರಿಹಾರದಿಂದ ಕೃಷಿ ಜಮೀನಿ ನಿಂದ ಉಂಟಾದ ನಷ್ಟವನ್ನು ಭರಿಸಿಕೊಳ್ಳಲು ಸಾಧ್ಯವಾಗುತ್ತದೆ. ಕೇಂದ್ರದ ವರದಿಗೆ ಎರಡು ವಾರಗಳ ಕಾಲಾವಕಾಶವಿದ್ದು, ವರದಿ ಕೋರ್ಟ್ ಗೆ ತಲುಪಿದ ಮೇಲೆ ಎಷ್ಟು ಬರ ಪರಿಹಾರ ಸಿಗಬಹುದು ಎಂಬುದು ನಿರ್ಧಾರವಾಗಲಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply