Darshan । ದರ್ಶನ್ ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ತಂದ ದಿನಸಿ ಕಿಟ್ ಗಳೆಲ್ಲಾ ಏನಾದವು ಗೊತ್ತಾ.? ಶಾಕಿಂಗ್! । Darshan Birthday

Darshan : ಸಾಮಾನ್ಯವಾಗಿ ಡಿ ಬಾಸ್ ದರ್ಶನ್ ತಮ್ಮ ಹುಟ್ಟುಹಬ್ಬವನ್ನ ಆಚರಿಸಿಕೊಳ್ಳುವುದಿಲ್ಲ. ಮೊದಲಿನಿಂದಲೂ ಕೂಡ ಆ ದಿನ ಸಮಾಜ ಸೇವೆಗಾಗಿ ಅವರು ತಮ್ಮ ಆ ದಿನವನ್ನ ಮುಡಿಪಾಗಿ ಇಡುತ್ತಾರೆ. ಅಭಿಮಾನಿಗಳು ಹೆಚ್ಚಿನ ಹಣವನ್ನ ಖರ್ಚು ಮಾಡಿ ಕೇಕ್ ತಂದು ವಿಜೃಂಭಣೆಯಿಂದ ಹುಟ್ಟುಹಬ್ಬವನ್ನ ಆಚರಿಸಬೇಡಿ. ಅದೇ ದುಡ್ಡಿನಲ್ಲಿ ಸಮಾಜಕ್ಕೆ, ಬಡವರಿಗೆ, ಅನಾಥಾಶ್ರಮಗಳಿಗೆ ಸಹಾಯ ಮಾಡಿ ಎಂದು ದರ್ಶನ್ ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದಾರೆ.

Do you know what happened to all the grocery kits fans brought for Darshan's birthday? Shocking

ದರ್ಶನ್ ಹುಟ್ಟುಹಬ್ಬ ಆರಂಭವಾಗುವುದಕ್ಕಿಂತ ಒಂದು ವಾರ ಮುನ್ನವೇ ಅಭಿಮಾನಿಗಳಲ್ಲಿ ಸಂಭ್ರಮ ಸಡಗರ ಮನೆಮಾಡಿತ್ತು. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ದರ್ಶನ್ ಹೇಳಿದ್ದಂತೆ ಸಮಾಜಮುಖಿ ಆಗಿದ್ದರು. ಅಭಿಮಾನಿಗಳಿಗೆ ಕೇಕ್ ಹಾರಗಳನ್ನ ತರಬೇಡಿ ಅದರ ಬದಲು ಅಸಹಾಯಕರಿಗೆ ನೆರವಾಗಿ ಎಂದು ಕರೆ ನೀಡಿದ್ದರು. ಅದರಂತೆ ಪ್ರತಿ ವರ್ಷ ದರ್ಶನ್ ಹುಟ್ಟುಹಬ್ಬದಂತೆ ದರ್ಶನ್ ಅಭಿಮಾನಿಗಳು ಸ್ವಇಚ್ಛೆಯಿಂದ ತಮ್ಮ ಕೈಲಾದಷ್ಟು ದವಸ ಧಾನ್ಯಗಳನ್ನ ಮನೆಗೆ ತಲುಪಿಸಿದ್ದಾರೆ. ಈ ವರ್ಷವೂ ಕೂಡ ಸಹಸ್ರಾರು ಸಂಖ್ಯೆಯಲ್ಲಿ ದಿನಸಿಯನ್ನು ಸಂಗ್ರಹಣೆ ಮಾಡಲಾಗಿತ್ತು, ಅದೆಲ್ಲವನ್ನ ಹಂಚಿದ್ದಾರೆ.

ಇದನ್ನೂ ಕೂಡ ಓದಿ : ವಿಜಯಲಕ್ಷ್ಮಿ ಆಕ್ರೋಶಕ್ಕೆ ಈಗ ಮೇಘಾ ಶೆಟ್ಟಿ ಏನು ಮಾಡಿಕೊಂಡಿದ್ದಾರೆ ಗೊತ್ತಾ.?

ಹಾಗಾದ್ರೆ ಈ ಬಾರಿ ಅಭಿಮಾನಿಗಳಿಂದ ಸಂಗ್ರಹವಾದ ದಿನಸಿ ವಸ್ತುಗಳು ಯಾರಿಗೆ ನೀಡಿದ್ದಾರೆ. ದರ್ಶನ್ ಕೊಟ್ಟ ಸೂಚನೆ ಮೇರೆಗೆ ಫ್ಯಾನ್ಸ್ ಕೊಟ್ಟಿದ್ದು ಯಾರಿಗೆ.? ಎಂದು ತಿಳಿಯಲು ಸಂಪೂರ್ಣವಾಗಿ ಓದಿ.

ಫೆಬ್ರವರಿ 16ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬ ಇತ್ತು. ಇದನ್ನ ಒಂದು ವಾರ ಮುನ್ನವೇ ದರ್ಶನ್ ಮನೆಗೆ ಅಭಿಮಾನಿಗಳು ಅಕ್ಕಿ ಬೇಳೆ ಅಡುಗೆ ಎಣ್ಣೆ ಸೇರಿದಂತೆ ದಿನಸಿ ವಸ್ತುಗಳನ್ನ ನೀಡುತಿದ್ದರು. ಹೀಗೆ ಹುಟ್ಟುಹಬ್ಬದ ಹಿಂದಿನ ದಿನದವರೆಗೂ ಮುಂದುವರೆದಿತ್ತು. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಹೆಚ್ಚು ದಿನಸಿ ವಸ್ತುಗಳನ್ನ ಸಂಗ್ರಹಣೆ ಮಾಡಲಾಗಿತ್ತು. ಅದನ್ನು ದರ್ಶನ್ ಅವರ ಸೂಚನೆ ಮೇರೆಗೆ ಹಂಚುವ ಕೆಲಸ ನಡೆದಿದೆ. ಹುಟ್ಟುಹಬ್ಬದ ನಿಮಿತ್ತ ಸಂಗ್ರಹವಾದ ದಿನಸಿ ವಸ್ತುಗಳನ್ನ ಹಂಚುವ ಕೆಲಸ ನಡೆಯುತ್ತಿವೆ. ಸ್ವತಃ ದರ್ಶನ್ ಈ ಬಾರಿ ದಿನಸಿಯನ್ನ ಮಂಗಳಮುಖಿಯರಿಗೆ ಹಂಚುವಂತೆ ಸೂಚನೆ ನೀಡಿದ್ದರು. ಅದರಂತೆ ಅಭಿಮಾನಿಗಳು ಎಲ್ಲೆಲ್ಲಿ ಮಂಗಳಮುಖಿಯರು ಅಸಹಾಯಕ ಸ್ಥಿತಿಯಲ್ಲಿ ಇದ್ದರೋ ಅವರಿಗೆಲ್ಲ ವಾಹನಗಳಲ್ಲಿ ದಿನಸಿಯನ್ನ ಕಳುಹಿಸಿ ಕೊಡಲಾಗಿದೆ.

Do you know what happened to all the grocery kits fans brought for Darshan's birthday? Shocking

ಇದನ್ನೂ ಕೂಡ ಓದಿ : Darshan Thoogudeepa | ದರ್ಶನ್ ಅವರ ಕಾಟೇರ ಸಿನಿಮಾದ ರಿಲೀಸ್ ಡೇಟ್ ಫಿಕ್ಸ್ ಆಯ್ತಾ.?

ಈ ವಿಡಿಯೋಗಳು, ಫೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ. ದರ್ಶನ್ ಅವರು ದವಸ ದಾನ್ಯಗಳ ಜೊತೆಗೆ ಒಂದು ಪಾತ್ರವನ್ನು ಸಹ ಕಳುಹಿಸಿ ಕೊಡುತ್ತಿದ್ದಾರೆ. ಎಲ್ಲಿ ಮಂಗಳಮುಖಿಯರಿಗೆ ದಿನಸಿ ವಿತರಣೆ ಮಾಡಲಾಗಿದೆಯೋ ಆ ಎಲ್ಲ ಕಡೆಗೂ ಸಂದೇಶ ಪತ್ರಗಳನ್ನ ಕಳುಹಿಸಿಕೊಟ್ಟಿದ್ದಾರೆ. ದರ್ಶನ್ ಮನವಿಯಂತೆ ಅಭಿಮಾನಿಗಳು ಮಂಗಳಮುಖಿಯರು ವಾಸವಿರುವ ಪ್ರದೇಶವನ್ನ ಗುರುತಿಸಿ ಅಲ್ಲಿಗೆ ದಿನಸಿ ವಿತರಣೆ ಮಾಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಹಾಯಕ್ಕೆ ಮಂಗಳಮುಖಿಯರು ಸಂತೋಷವನ್ನ ವ್ಯಕ್ತ ಪಡಿಸಿದ್ದಾರೆ, ಶುಭ ಹಾರೈಸಿದ್ದಾರೆ. ತುಂಬಾನೇ ಖುಷಿ ಆಯಿತು ದೇವರು ಆಯುಷ್ಯ ಆರೋಗ್ಯ ಕೊಟ್ಟು ದರ್ಶನ್ ಅವರನ್ನ ಕಾಪಾಡಲಿ ಎಂದು ಮಂಗಳಮುಖಿಯರು ಹಾರೈಸಿದ್ದಾರೆ. ಇನ್ನೂ ದರ್ಶನ್ ಅವರ ಈ ಗುಣದ ಬಗ್ಗೆ ನೀವ್ ಏನು ಹೇಳುತ್ತೀರಾ ಕಾಮೆಂಟ್ ಮಾಡಿ ತಿಳಿಸಿ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply