Pmay Scheme : ಮನೆ ಖರೀದಿ ಅಥವಾ ಕಟ್ಟಡಕ್ಕೆ ಕೇಂದ್ರ ಸರ್ಕಾರದಿಂದ ಬಂಪರ್ ಗಿಫ್ಟ್!! #govthousingyojana #pmay

Pmay Scheme : ಕೇಂದ್ರದ ವಿತ್ತ ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್ ಅವರು ದೇಶದ ಬಡವರಿಗೆ ಭಾರಿ ದೊಡ್ಡ ಗುಡ್ ನ್ಯೂಸ್ ಕೊಟ್ಟಿದ್ದಾರೆ? ಯಾರು ಸ್ವಂತ ಮನೆ ಖರೀದಿಸಲು ಬಯಸುತ್ತಾರೆ. ಅಂಥವರಿಗೆ ಹೊಸ ಮನೆ ಅಥವಾ ಮನೆ ಕಟ್ಟಲು ಬಯಸುವವರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಬಂಪರ್ ಗಿಫ್ಟ್ ನೀಡಿದ್ದಾರೆ. ನೀವು ಕೂಡ ಇವತ್ತಿನವರೆಗೂ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದಿಂದ ಯಾವುದೇ ವಸತಿ ಯೋಜನೆಯ ಅಡಿಯಲ್ಲಿ ಮನೆಯನ್ನ ಪಡೆದುಕೊಂಡಿಲ್ಲ ಅಂದ್ರೆ ತಪ್ಪದೇ ಕೇಂದ್ರ ಸರ್ಕಾರದಿಂದ ಉಚಿತವಾಗಿ ನೀಡಲಾಗುತ್ತಿರುವ ಮನೆಯನ್ನ ಪಡೆದುಕೊಳ್ಳೋದು ಹೇಗೆ ಎಂದು ತಿಳಿದುಕೊಳ್ಳಿ.

ಕೇಂದ್ರ ಸರ್ಕಾರದಿಂದ ದೇಶದ ಪ್ರತಿಯೊಬ್ಬರಿಗೂ ಕೂಡ ಇರಲು ಸ್ವಂತ ಸೂರಿರಬೇಕು ಅನ್ನುವುದು ಕೇಂದ್ರದ ಆಶಯವಾಗಿದೆ. ಭಾರತವನ್ನ ಗುಡಿಸಲು ಮುಕ್ತ ಭಾರತವನ್ನಾಗಿಸುವುದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರವು ಮೇಲಿಂದ ಮೇಲೆ ವಿವಿಧ ವಸತಿ ಯೋಜನೆಗಳ ಮೂಲಕ ಆಯಾ ಅರ್ಹ ಫಲಾನುಭವಿಗಳಿಗೆ ಹೊಸ ಮನೆಗಳ ನಿರ್ಮಾಣಕ್ಕೆ ಧನಸಹಾಯವನ್ನು ನೀಡುತ್ತಾ ಬರುತ್ತಿದೆ. ಇನ್ನು ಕೂಡ ದೇಶದಲ್ಲಿ ನಿಜವಾದ ಫಲಾನುಭವಿಗಳಿಗೆ ಮನೆ ದೊರೆತಿಲ್ಲವೆನ್ನವುದು ಕೇಂದ್ರ ಸರ್ಕಾರದ ಗಮನಕ್ಕೆ ಬಂದಿದ್ದು, ಇತ್ತೀಚಿಗೆ ಮದುವೆಯಾಗಿ ಹೊಸ ರೇಷನ್ ಕಾರ್ಡ್ ಮಾಡಿಕೊಂಡಿರುವ ಬಡ ಕುಟುಂಬಗಳು ಈ ಯೋಜನೆಯ ಫಲಾನುಭವಿ ಆಗಬಹುದು.

ಇದನ್ನೂ ಕೂಡ ಓದಿ : Drought Relief : ಬರಪೀಡಿತ ಜಿಲ್ಲೆಗಳ ರೈತರಿಗೆ – ಸಿಎಂ ಸಿದ್ದರಾಮಯ್ಯ ಗುಡ್ ನ್ಯೂಸ್ – ₹6000 ಹಣ ಖಾತೆಗೆ ಜಮೆ.!

ಹೌದು, ಜೊತೆಗೆ ಇವತ್ತಿನವರೆಗೂ ಕೂಡ ಯಾವ ಮಹಿಳೆಯೂ ಕೂಡ ಉಚಿತವಾಗಿ ಮನೆಯನ್ನ ಪಡೆದುಕೊಂಡಿಲ್ಲವೋ, ಅಂತಹವರು ಈ ಯೋಜನೆಯ ಫಲಾನುಭವಿ ಆಗಬಹುದಾಗಿದೆ. ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಅವರು ಬಾಡಿಗೆ ಮನೆಗಳಲ್ಲಿ ಅಥವಾ ಕೊಳಗೇರಿಗಳಲ್ಲಿ ವಾಸವಾಗಿರುವವರು ತಮ್ಮ ಸ್ವಂತ ಮನೆಗಳನ್ನ ಹೊಂದುವುದಕ್ಕೆ ಯೋಜನೆಯೊಂದನ್ನ ಗುರುವಾರ ಪ್ರಕಟಿಸಿದರು. ಮುಂದಿನ ಐದು ವರ್ಷಗಳಲ್ಲಿ ಪ್ರಧಾನ ಮಂತ್ರಿ ಆವಾಜ್ ಯೋಜನೆ ಅಡಿ ಗ್ರಾಮೀಣ ಬಡವರಿಗಾಗಿ ಇನ್ನು 2 ಕೋಟಿ ಮನೆಗಳನ್ನು ನಿರ್ಮಿಸಲಾಗುವುದು ಎಂದು ಅವರು ತನ್ನ ಮಧ್ಯಂತರ ಭಾಷಣದಲ್ಲಿ ಪ್ರಕಟಿಸಿದ್ದರು.

ಮೋದಿ ಸರ್ಕಾರವು ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿಯ ಭಾಗವಾಗಿ ಕಳೆದ 10 ವರ್ಷಗಳಲ್ಲಿ ಪ್ರತಿಯೊಬ್ಬರಿಗೂ ಮನೆ, ನೀರು, ವಿದ್ಯುತ್, ಅಡುಗೆ ಅನಿಲ ಮತ್ತು ಬ್ಯಾಂಕ್ ಖಾತೆಯನ್ನ ಒದಗಿಸುವಕ್ಕೆ ಶ್ರಮಿಸಿದೆ ಎಂದು ಹೇಳಿದ ಸಚಿವೆ, ನಮ್ಮ ಸರ್ಕಾರವು ಬಾಡಿಗೆ ಮನೆಗಳು ಅಥವಾ ಕೊಳಗೇರಿಗಳಲ್ಲಿ ವಾಸವಿರುವ ಮಾಧ್ಯಮ ವರ್ಗದ ಅರ್ಹ ಜನರಿಗೆ ತಮ್ಮ ಸ್ವಂತ ಮನೆಗಳನ್ನ ಖರೀದಿಸಲು ಅಥವಾ ನಿರ್ಮಿಸಲು ನೆರವಾಗುವ ಉದ್ದೇಶದಿಂದ ಹೊಸ ಯೋಜನೆಯೊಂದನ್ನ ಆರಂಭಿಸಲಿದೆ ಎಂದು ತಿಳಿಸಿದರು.

ಇದನ್ನೂ ಕೂಡ ಓದಿ : Poultry Farming : ಕೋಳಿ ಸಾಕಾಣಿಕೆ ಮಾಡಲು 25 ಲಕ್ಷ ಸಹಾಯಧನ ರೈತರಿಗೆ ನಿರುದ್ಯೋಗಿಗೆ ಗೃಹಿಣಿಯರಿಗೆ.!! #farming

ಕೋವಿಡ್ ಸಾಂಕ್ರಾಮಿಕವೂ ಉಂಟು ಮಾಡಿದ ಅಡೆತಡೆಗಳ ಹೊರತಾಗಿ, ಪ್ರದಾನ ಮಂತ್ರಿ ಆವಾಸ್ ಯೋಜನೆಯ ಅನುಷ್ಠಾನವು ಮುಂದುವರೆದಿದೆ. ಮೂರು ಕೋಟಿ ಮನೆಗಳ ನಿರ್ಮಾಣದ ಗುರಿ ಸಾಧನೆಯನ್ನ ನಾವು ಸಮೀಪಿಸಿದ್ದೇವೆ. ಕುಟುಂಬಗಳ ಸಂಖ್ಯೆಯಲ್ಲಿ ಹೆಚ್ಚಳದಿಂದಾಗಿ ಹೆಚ್ಚುತ್ತಿರುವ ಅಗತ್ಯವನ್ನ ಪೂರೈಸುವುದಕ್ಕೆ ನಾವು ಮುಂದಿನ ಐದು ವರ್ಷಗಳಲ್ಲಿ ಎರಡು ಕೋಟಿ ಮನೆಗಳನ್ನ ನಿರ್ಮಿಸಲಿದ್ದೇವೆ ಎಂದು ನಿರ್ಮಲ ಸೀತಾರಾಮನ್ ಅವರು ಹೇಳಿದ್ದಾರೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply