Ambulance Driver : ಆಂಬುಲೆನ್ಸ್ ಡ್ರೈವರ್ ಅಳುತ್ತಲೇ ಗಾಡಿ ಓಡಿಸುತ್ತಿದ್ದ.! ಕಾರಣ ಕೇಳಿದ್ರೆ ನೀವೂ ಕೂಡ ಶಾಕ್ ಆಗ್ತೀರಾ.!

Ambulance Driver : ನಮಸ್ಕಾರ ಸ್ನೇಹಿತರೇ, ಯಾರಾದರೂ ತೊಂದರೆಯಲ್ಲಿದ್ದಾಗ, ಅಪಘಾತಗಳಾದಾಗ ಅವರನ್ನು ಸರಿಯಾದ ಸಮಯಕ್ಕೆ ಬಂದು ಕಾಪಾಡುವುದು ಅಂದ್ರೆ, ಅದು ಆಂಬುಲೆನ್ಸ್ ಡ್ರೈವರ್ ಗಳು. ಆದರೆ ಇಲ್ಲೋರ್ವ ಆಂಬುಲೆನ್ಸ್ ಡ್ರೈವರ್ ತನ್ನ ಡ್ಯೂಟಿ ಮಾಡುವಾಗ ಕಣ್ಣೇರು ಹಾಕುತ್ತಾ ಗಾಡಿ ಓಡಿಸುತ್ತಿದ್ದ. ಅದರ ಹಿಂದಿನ ಕಥೆ ಕೇಳಿದಾಗ ಇಡೀ ರಾಜ್ಯವೇ ಒಂದು ಕ್ಷಣಕ್ಕೆ ಬೆರಗಾಗಿದೆ. ಈ ಘಟನೆ ನಡೆದಿರುವುದು ನಮ್ಮ ಕರ್ನಾಟಕದಲ್ಲಿ. ಅಸಲಿಗೆ ಏನಿದು ಸುದ್ಧಿ ಅಂತ ತಿಳಿದರೆ ನಿಮ್ಮ ಕಣ್ಣು ಕೂಡ ಒದ್ದೆಯಾಗುತ್ತದೆ.

ಇದನ್ನೂ ಕೂಡ ಓದಿ : 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ – ಇನ್ನು ಮುಂದೆ ಪ್ರತಿ ತಿಂಗಳಿಗೆ ₹5000 ಹಣ – ವೃದ್ಧರ ಪಿಂಚಣಿ ಗುಡ್ ನ್ಯೂಸ್.!

ಯಾರಾದರೂ ತೊಂದರೆಯಲ್ಲಿದ್ದಾಗ 108 ಗೆ ಕರೆ ಮಾಡಿದ್ರೆ ಕೂಡಲೇ ಅಲ್ಲಿಗೆ ಬಂದು ಸಹಾಯ ಮಾಡುತ್ತಾರೆ. ಇನ್ನು ಅದೇ ರೀತಿ ಮೈಸೂರಿಗೆ ಸೇರಿರುವ ಸ್ಯೆಯದ್ ಮುಬಾರಕ್ ಎನ್ನುವ ಆಂಬುಲನ್ಸ್ ಡ್ರೈವರ್ ಎಂದಿನಂತೆ ತನ್ನ ಡ್ಯೂಟಿಯಲ್ಲಿದ್ದ. ಅದೇ ಸಂದರ್ಭದಲ್ಲಿ ಓರ್ವ ಪೇಶಂಟ್ ನ್ನ ಮನೆಯಿಂದ ಆಸ್ಪತ್ರೆಗೆ ಸಾಗಿಸುವಾಗ ಆತನಿಗೆ ಒಂದು ಕರೆ ಬರುತ್ತದೆ. ಸಯ್ಯದ್ ಮುಬಾರಕ್ ನ ಮಗ ಮೈಸೂರು ಜಿಲ್ಲಾಸತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದುಬಂದಿದೆ.

ಇದನ್ನೂ ಕೂಡ ಓದಿ : Loan Waiver : ರೈತರಿಗೆ ಸಿಎಂ ಗುಡ್ ನ್ಯೂಸ್ – 2 ಲಕ್ಷ ಸಾಲ ಮನ್ನಾ ಮಾಡಿ ಘೋಷಣೆ – ಸಾಲ ಮನ್ನಾ ಯೋಜನೆ ಜಾರಿಗೆ

ಇಷ್ಟಾದರೂ ತನ್ನ ಮಗನ ಹತ್ತಿರ ಹೋಗದೇ ಮೈಸೂರಿನಿಂದ ಚಾಮರಾಜನಗರದ ವರೆಗೆ ರೋಗಿಯನ್ನು ಶಿಫ್ಟ್ ಮಾಡಿ, ಆ ನಂತರ ಮಗನನ್ನು ನೋಡಲು ಹೋಗಿದ್ದಾರೆ. ಸಯ್ಯದ್ ಮುಬಾರಕ್ ಅವರ ಮಗ ಕುದಿಯುತ್ತಿದ್ದ ಬಿಸಿ ನೀರಿನಲ್ಲಿ ಬಿದ್ದು ಮೈಯೆಲ್ಲಾ ಸುಟ್ಟು ಗಾಯಗಳಾಗಿತ್ತು. ಇನ್ನು ಆಸ್ಪತ್ರೆಯಲ್ಲಿ ಹದಿನೈದು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಮಗನ ಸಾವಿನ ವಿಷಯ ತಿಳಿದರೂ, ತನ್ನ ಕೆಲಸವನ್ನ ಮಾಡಿ ಮುಗಿಸಿದ ಸಯ್ಯದ್ ಮುಬಾರಕ್ ಗೆ ಒಂದು ಹ್ಯಾಟ್ಸಾಫ್ ಹೇಳಲೇಬೇಕು.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply