Farmer Loan : ರೈತರ ಸಾಲ ಮನ್ನಾ ಘೋಷಣೆ – ರಾಷ್ಟ್ರೀಕೃತ ಬ್ಯಾಂಕ್ ಮತ್ತು ಸಹಕಾರಿ ಬ್ಯಾಂಕ್ ಸಾಲ – ಸಿಎಂ ಸಿದ್ದರಾಮಯ್ಯ

Farmer Loan : ಇತ್ತೀಚಿಗಷ್ಟೇ ರಾಜ್ಯದ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯನವರು ಬಜೆಟ್ ಮಂಡನೆ ಮಾಡಿದ್ದು, ರೈತರ ಬಗ್ಗೆ ಅಷ್ಟೊಂದು ಕಾಳಜಿ ಇಲ್ಲ ಎನ್ನುವುದನ್ನ ಪ್ರತಿಪಕ್ಷಗಳು ಟೀಕಿಸುತ್ತಿರುವುದುನ್ನ ಗಮನಿಸಿದ ರಾಜ್ಯದ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯನವರು ರಾಜ್ಯದಾದ್ಯಂತ ಇರುವ ರಾಜ್ಯದ ಎಲ್ಲ ರೈತರ ಸಾಲ ಮನ್ನಾ ಘೋಷಣೆ ಮಾಡಿದ್ದಾರೆ.

ಹೌದು, ಈಗಾಗಲೇ ಪಂಚ ಗ್ಯಾರಂಟಿ ಯೋಜನೆಗಳು ರಾಜ್ಯದಲ್ಲಿ ಜಾರಿಯಲ್ಲಿತ್ತು. ಆರ್ಥಿಕ ಹೊರೆ ಉಂಟಾಗುತ್ತಿದೆ ಎನ್ನುವುದು ಪ್ರತಿಪಕ್ಷಗಳ ವಾದವಾಗಿರುವ ಕಾರಣ ರೈತರ ಸಾಲ ಮನ್ನ ಮಾಡಲು ಈಗಿರುವ ಸರ್ಕಾರದಿಂದ ಆಗುವುದಿಲ್ಲ ಎಂದು ಟೀಕಿಸಿದ್ದರು. ಆದರೆ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರೈತರನ್ನು ಸಾಲದಿಂದ ಮುಕ್ತರನ್ನಾಗಿಸಲು ರೈತರ ಸಾಲ ಮನ್ನಾ ಘೋಷಣೆ ಮಾಡಿ ರಾಜ್ಯದ ಎಲ್ಲ ರೈತರಿಗೆ ಬಂಪರ್ ಗಿಫ್ಟ್ ನೀಡಿದ್ದಾರೆ.

ಇದನ್ನೂ ಕೂಡ ಓದಿ : BPL APL AAY : ರೇಷನ್ ಕಾರ್ಡ್ ವಿತರಣೆ – ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಕೆ ಆರಂಭ.!

ಎಂತಹ ರೈತರ ಸಾಲಗಳನ್ನು ಮನ್ನಾ ಮಾಡಲಾಗುತ್ತಿದೆ.? ಯಾವ ಸಾಲಗಳನ್ನು ಮನ್ನ ಮಾಡಲಾಗುತ್ತಿದೆ.? ಎಷ್ಟು ಲಕ್ಷ ರೂಪಾಯಿಗಳವರೆಗೆ ಸಾಲ ಮನ್ನಾ ಆಗುತ್ತದೆ.? ಯಾವಾಗ ಮನ್ನಾ ಆಗುತ್ತದೆ.? ಈ ಎಲ್ಲ ಪ್ರಶ್ನೆಗಳಿಗೆ ಸೇರಿದಂತೆ ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಲೇಖನವನ್ನ ನೋಡಿ.

ಯಾರಿಗೆ ಸಾಲ ಹಿಂತಿರುಗಿಸಲು ಸಾಧ್ಯವಾಗಿಲ್ಲವೋ ಅಂತಹವರ ಸಾಲ ಮನ್ನಾ ಮಾಡಲು ಕೂಡ ಸರ್ಕಾರ ತೀರ್ಮಾನಿಸಿದೆ. ಇತ್ತೀಚೆಗೆ ಬಜೆಟ್ ನಲ್ಲಿ ರೈತರ ಸಾಲ ಮನ್ನಾ ಬಗ್ಗೆ ತೀರ್ಮಾನಿಸಲಾಗಿತ್ತು.ಮಧ್ಯಮಾವಧಿ ಮತ್ತು ದೀರ್ಘಾವಧಿಯ ಸುಸ್ತಿ ಸಾಲಗಳ ಮೇಲಿನ ಬಡ್ಡಿ ಮನ್ನಾ ಮಾಡಲು ನಿರ್ಧರಿಸಿರುವ ಸರ್ಕಾರ, ಇದಕ್ಕಾಗಿ 496 ಕೋಟಿ ರೂಪಾಯಿಗಳ ಮೀಸಲಿಟ್ಟಿದೆ. 57,000 ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಡಿಸಿಸಿ ಬ್ಯಾಂಕ್‌ಗಳಲ್ಲಿರುವ ಸಾಲ ಬಡ್ಡಿ ಮನ್ನಾ ಮಾಡಲು ಸಿದ್ದರಾಮಯ್ಯ ಸರ್ಕಾರ ಮುಂದಾಗಿದೆ.

ಇದನ್ನೂ ಕೂಡ ಓದಿ : Pan Card : ನಿಮ್ಮ ಪ್ಯಾನ್ ಕಾರ್ಡ್ ಕ್ಯಾನ್ಸಲ್ ಆಗುತ್ತೆ – ಬೇಗ ಈ ಕೆಲಸವನ್ನು ಮಾಡಿ..!

ರೈತರ ಆರ್ಥಿಕತೆಗಾಗಿಯೇ ವಿಶೇಷ ಅನುದಾನ :- 2023-24 ನೇ ಬಜೆಟ್ ನಲ್ಲಿ ರೈತರ ಪರ ಯೋಜನೆಗಳಿಗಾಗಿ ೨೦೦ ಕೋಟಿ ಅನುದಾನವನ್ನ ನೀಡಲಾಗಿದ್ದು, ಕೃಷಿ ಭಾಗ್ಯ ಯೋಜನೆಗೆ ಈ ಹಣವನ್ನ ಮೀಸಲಿಡಲು ನಿರ್ಧರಿಸಲಾಗಿದೆ. ಈ ಹಿಂದೆ ಜಾರಿಯಲ್ಲಿದ್ದ ಕೆಲವು ಕೃಷಿ ಪರ ಯೋಜನೆಗಳನ್ನ ಮತ್ತೆ ಸರ್ಕಾರ ಆರಂಭಿಸಲಿದೆ. ಬಡ್ಡಿ ರಹಿತ ಅಲ್ಪಾವಧಿಯ ಸಾಲವನ್ನ ಮೂರು ಲಕ್ಷದಿಂದ ಐದು ಲಕ್ಷ ರೂಪಾಯಿಗಳವರೆಗೆ ಹೆಚ್ಚಿಸಲಾಗುವುದು. ಇನ್ನು ೩% ಬಡ್ಡಿದರದಲ್ಲಿ ಮಧ್ಯಮಾವಧಿಯ ಹಾಗು ದೀರ್ಘಾವಧಿಯ ಸಾಲವನ್ನ ನೀಡಲಾಗುವುದು. ಇದರ ಮೊತ್ತ ಹತ್ತು ಲಕ್ಷದಿಂದ ಹದಿನೈದು ಲಕ್ಷಕ್ಕೆ ಏರಿಸಲಾಗುವುದು.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply