Darshan Thoogudeepa : ದಸರ ಹಬ್ಬದ ದಿನವೇ ಚಾಮುಂಡಿ ಬೆಟ್ಟಕ್ಕೆ ಬಂದು ಗುಡ್ ನ್ಯೂಸ್ ಕೊಟ್ಟ ಡಿಬಾಸ್ ದರ್ಶನ್.! ಗುಡ್ ನ್ಯೂಸ್ ಏನು.?

Darshan Thoogudeepa : ಸ್ಯಾಂಡಲ್ ವುಡ್ ನಟ ಡಿಬಾಸ್ ದರ್ಶನ್ ಅವರು ಯಾವಾಗಲೂ ಸುದ್ಧಿಯಲ್ಲಿರುತ್ತಾರೆ. ಪತ್ನಿ ವಿಜಯಲಕ್ಷ್ಮಿ ಹಾಗು ಮಗ ವಿನೀಶ್ ಜೊತೆ ಖುಷಿಯಾಗಿರುವ ಡಿಬಾಸ್, ಇದೀಗ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಬಂದು ಸಿಹಿಸುದ್ಧಿಯೊಂದನ್ನ ಹಂಚಿಕೊಂಡಿದ್ದಾರೆ. ಹಾಗಾದ್ರೆ ದರ್ಶನ್ ಕೊಟ್ಟ ಗುಡ್ ನ್ಯೂಸ್ ಏನು.?

ಮೈಸೂರಿನಲ್ಲಿ ದಸರ ಹಬ್ಬದ ಸಂಭ್ರಮ ಮುಗಿಲು ಮುಟ್ಟಿದೆ. ದಸರಾ ಹಬ್ಬದ ಸಂಭ್ರಮದಲ್ಲಿ ನಟ ದರ್ಶನ್ ಅವರು ಪತ್ನಿ ವಿಜಯಲಕ್ಷ್ಮಿ ಹಾಗು ಮಗ ವಿನೀಶ್ ಜೊತೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ. ನಿಮಗೆಲ್ಲಾ ಗೊತ್ತಿರುವ ಹಾಗೆ ದರ್ಶನ್ ಅವರು ತಾಯಿ ಚಾಮುಂಡೇಶ್ವರಿ ದೇವಿಯ ಪರಮ ಭಕ್ತರು. ಆಗಾಗ ಚಾಮುಂಡಿ ಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಕೂಡ ಸಲ್ಲಿಸುತ್ತಾರೆ.

Gruhalakshmi Scheme : ಮೊದಲ ಕಂತಿನ ಜೊತೆಗೆ ಎರಡನೇ ಕಂತಿನ ಹಣವನ್ನ ಈ ಜಿಲ್ಲೆಗಳಲ್ಲಿ ಬಿಡುಗಡೆ.!

ಹೌದು, ನಟ ದರ್ಶನ್ ಅವರಿಗೆ ಪ್ರಾಣಿ, ಪಕ್ಷಿ ಅಂದರೆ ಎಷ್ಟು ಇಷ್ಟನೋ, ಬಗೆಬಗೆಯ ಬೈಕು, ಕಾರುಗಳೆಂದರೆ ಅಷ್ಟೇ ಇಷ್ಟ. ಈಗಾಗಲೇ ದರ್ಶನ್ ಅವರ ಬಳಿ ಕೋಟಿ ಕೋಟಿ ಬೆಲೆಬಾಳುವ ಐಷಾರಾಮಿ ಕಾರು, ಬೈಕುಗಳನ್ನ ತಮ್ಮ ಗೋಡೌನ್ ನಲ್ಲಿ ನಿಲ್ಲಿಸಿದ್ದಾರೆ. ಇದೀಗ ದರ್ಶನ್ ಅವರು ದಸರ ಹಬ್ಬದ ಆಯುಧ ಪೂಜೆಯ ಸಮಯದಲ್ಲಿ ಮನೆಗೆ ಮತ್ತೊಂದು ಐಷಾರಾಮಿ ಕಾರನ್ನ ತಂದಿದ್ದಾರೆ.

ನಿನ್ನೆ ತಾನೇ ದರ್ಶನ್ ಅವರು ಲ್ಯಾಂಡ್ ರೋವರ್ ಡೆಪೆಂಡರ್ ಕಾರನ್ನ ಖರೀದಿಸಿದ್ದು, ಕಾರು ತೆಗೆದುಕೊಂಡ ಖುಷಿಗೆ ನಟ ದರ್ಶನ್ ಅವರು ಪತ್ನಿ ವಿಜಯಲಕ್ಷ್ಮಿ ಹಾಗು ಪುತ್ರ ವಿನೀಶ್ ಜೊತೆ ಚಾಮುಂಡೇಶ್ವರಿ ದೇವಿ ಸನ್ನಿಧಿಗೆ ಭೇಟಿ ನೀಡಿ ಕಾರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದರ್ಶನ್ ಅವರನ್ನ ಫ್ಯಾಮಿಲಿ ಸಮೇತ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ದಸರ ಹಬ್ಬಕ್ಕೆ ದರ್ಶನ್ ಅವರ ಕಾಟೇರ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಲಿದೆ ಎನ್ನುವ ಮಾತು ಸಹ ಕೇಳಿ ಬರುತ್ತಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply