ಈ ಜಾತ್ರೆಯಲ್ಲಿ ದೇವರಿಗೆ ಸರಾಯಿ ನೈವೇದ್ಯ ! ಏನು ಈ ಜಾತ್ರೆಯ ವಿಶೇಷ ?

ದೇವರಿಗೆ ನೈವೇದ್ಯವಾಗಿ ಭಕ್ತರು, ಹೂ, ಹಣ್ಣು, ಆಹಾರ ಪದಾರ್ಥ ನೀಡುವುದನ್ನು ನಾವೆಲ್ಲಾ ಸಾಮಾನ್ಯವಾಗಿ ನೋಡಿದ್ದೇವೆ.ಆದರೆ ಈ ಜಾತ್ರೆಯಲ್ಲಿ ದೇವರಿಗೆ ಮದ್ಯವನ್ನೇ ನೈವೇದ್ಯ ಮಾಡಲಾಗುತ್ತದೆ. ಜೊತೆಗೆ ಇಲ್ಲಿಗೆ ಆಗಮಿಸುವ ಭಕ್ತರು ಸಹ ಮದ್ಯ ಸೇವನೆ ಮಾಡುತ್ತಾರೆ.

ಶಿವರಾತ್ರಿ ಬಳಿಕ ನಡೆಯುವ ಬಬಲಾದಿ ಸದಾಶಿವ ಮುತ್ಯಾನ ಜಾತ್ರೆಯಲ್ಲಿ ಹೂ, ಹಣ್ಣಿನ ಬದಲು ದೇವರಿಗೆ ಎಣ್ಣೆಯನ್ನು ಸಮರ್ಪಿಸಲಾಗುತ್ತದೆ. ಹೀಗಾಗಿ, ಈ ಜಾತ್ರೆಯನ್ನು ಸಾರಾಯಿ ಜಾತ್ರೆ ಎಂದೇ ಕರೆಯಲಾಗುತ್ತದೆ. ಮಹಿಳೆಯರು ಕೂಡಾ ಇದನ್ನೇ ನೈವೇದ್ಯವಾಗಿ ಸ್ವೀಕರಿಸಿತ್ತಾರೆ.  

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನಲ್ಲಿ ಬಬಲಾದಿ ಸದಾಶಿವನ ಜಾತ್ರೆ ಅದ್ಧೂರಿಯಾಗಿ ನಡೆಯುತ್ತಿದೆ. ಈ ವೇಳೆ ದೇವರಿಗೆ ಮದ್ಯವನ್ನೇ ನೈವೇದ್ಯವಾಗಿ ಆರ್ಪಿಸಿ ಭಕ್ತರು ಭಕ್ತಿಯನ್ನು ಮೆರೆಯುತ್ತಿದ್ದಾರೆ.ಯಾವುದಾದ್ರು ಹರಕೆ ಕಟ್ಟಿಕೊಂಡ ಮಹಿಳಾ ಹಾಗೂ ಪುರುಷ ಭಕ್ತರು ಅದು ಈಡೇರಿದ ಬಳಿಕ ತಮ್ಮ ಹರಕೆಯಂತೆ ವಿವಿಧ ಬ್ರ್ಯಾಂಡ್​ಗಳ ಮದ್ಯವನ್ನ ದೇವರಿಗೆ ಸಮರ್ಪಿಸುತ್ತಾರೆ.

ಪ್ರತಿ ವರ್ಷ ನಡೆಯುವ ಜಾತ್ರೆಯಲ್ಲಿ ಹೇಳಲಾಗುವ ಕಾರ್ಣಿಕ ಯಾವತ್ತೂ ಸುಳ್ಳಾಗಿಯೇ ಇಲ್ಲ. ನೂರಾರು ವರ್ಷಗಳಿಂದ ಇಲ್ಲಿ ಹೇಳುವ ಕಾಲಜ್ಞಾನದ ಹೇಳಿಕೆಗಳು ಸತ್ಯವಾಗುತ್ತಲೇ ಬಂದಿವೆ. 

ಜಾತ್ರೆ ವೇಳೆ ದೇವಸ್ಥಾನದ ಆವರಣದಲ್ಲಿ ಪ್ರತಿ ರೈತನಿಗೂ ಬೊಗಸೆಯಷ್ಟು ಧವಸ-ಧಾನ್ಯಗಳನ್ನು ನೀಡಲಾಗುತ್ತದೆ. ಈ ಧಾನ್ಯವನ್ನು ರೈತರು ತಾವು ಬಿತ್ತನೆ ಮಾಡುವ ಬೀಜದೊಂದಿಗೆ ಸೇರಿಸಿ ಹಾಕಿದ್ರೆ ಆ ವರ್ಷದ ಬೆಳೆ ಭರ್ಜರಿಯಾಗಿ ಬರುತ್ತದಂತೆ. 

Leave a Reply