ರಾಜ್ಯ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ(Gruhalakshmi) ಯೋಜನೆಯ ಅಡಿಯಲ್ಲಿ ಇದೀಗ ಮಹಿಳೆಯರ ಬ್ಯಾಂಕ್ ಖಾತೆಗೆ(Bank Account) ಸರ್ಕಾರವು ಹಣ ಜಮಾ ಮಾಡಲು ಸರ್ಕಸ್ ಮಾಡುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಜನಸಾಮಾನ್ಯರು ಹಾಗು ಮಹಿಳೆಯರು ಆಕ್ರೋಶವನ್ನ ಹೊರಹಾಕುತ್ತಿದ್ದಾರೆ. ಸುಮಾರು ಮಹಿಳೆಯರಿಗೆ ಇದುವರೆಗೂ ಐದರಿಂದ ಆರು ಕಂತುಗಳು ಹಣ ವರ್ಗಾವಣೆ ಮಾಡಲಾಗಿದ್ದು, ಆದರೆ ಇನ್ನು ಸಾಕಷ್ಟು ಮಹಿಳೆಯರಿಗೆ ಮೊದಲ ಎರಡು ಕಂತುಗಳ ಹಣ ಬಿಟ್ಟು ಇನ್ನುಳಿದ ಕಂತುಗಳು ಹಣ ಬಂದಿಲ್ಲ.
ಇದನ್ನೂ ಕೂಡ ಓದಿ : LPG Gas Cylinder : ದೇಶದ ಜನತೆಗೆ ಮತ್ತೊಂದು ಗುಡ್ ನ್ಯೂಸ್ ಉಚಿತ ಗ್ಯಾಸ್ ಸಿಲಿಂಡರ್ ಪಡೆಯಲು ಅರ್ಜಿ ಸಲ್ಲಿಸಿ!
ಹೀಗಾಗಿ ಇದಕ್ಕೆ ಸರ್ಕಾರವು ಹಣ ಯಾಕೆ ಜಮಾ ಆಗುತ್ತಿಲ್ಲ ಎಂದು ಅಧಿಕೃತ ಮಾಹಿತಿ ತಿಳಿಸಿದ್ದು, ರೇಷನ್ ಕಾರ್ಡ್(Ration Card) ನಲ್ಲಿ ತೊಂದರೆ, ಆಧಾರ್ ಕಾರ್ಡ್ ಲಿಂಕ್ ಮಾಡದೇ ಇರುವುದು ಹಾಗು ರೇಷನ್ ಕಾರ್ಡ್ ನಲ್ಲಿ ಮತ್ತೊಂದು ಹೆಸರು ಮತ್ತು ಆಧಾರ್ ಕಾರ್ಡ್ನಲ್ಲಿ ಬೇರೆ ಹೆಸರು, ಹಾಗೆಯೇ ಬ್ಯಾಂಕ್ ಖಾತೆಯಲ್ಲಿ ಬೇರೆ ಹೆಸರಿರುವ ಹಿನ್ನೆಲೆಯಲ್ಲಿ ಹಲವು ಮಹಿಳೆಯರಿಗೆ ಹಣ ಬಂದಿಲ್ಲ. ಇನ್ನು ಎಲ್ಲವೂ ಸರಿ ಇದ್ದರೂ ಕೂಡ ಕೆಲವೊಂದಿಷ್ಟು ತಾಂತ್ರಿಕ ಸಮಸ್ಯೆ ಇದೆ ಎಂದು ಸರ್ಕಾರವು ಇದೀಗ ಹೇಳುತ್ತಿದೆ.
![Gruhalakshmi Scheme](https://i0.wp.com/kannadaquiz.online/wp-content/uploads/2023/10/WhatsApp-Image-2023-10-31-at-5.26.10-PM.jpeg?resize=900%2C516&ssl=1)
ನಿಮ್ಮ ಖಾತೆಗೆ ಹಣ ಬರುತ್ತಿಲ್ಲವಾ? ಹೀಗಿದ್ದಲ್ಲಿ ನೀವು ಏನು ಮಾಡಬೇಕು? ಇದುವರೆಗೂ ನಿಮ್ಮ ಖಾತೆಗೆ ಎಷ್ಟು ಕಂತು ಬಂದಿದೆ? ಹಾಗು ಮುಂದಿನ ಕಂತುಗಳು ಹೇಗೆ ನೀವು ಪಡೆದುಕೊಳ್ಳುವುದು.? ಹೇಗೆ ಅನ್ನುವುದನ್ನ ಈ ಲೇಖನದಲ್ಲಿ ನಿಮಗೆ ನೀಡಲಾಗಿದೆ.
ಇದನ್ನೂ ಕೂಡ ಓದಿ : Drought Relief : ಬರಪೀಡಿತ ರೈತರಿಗೆ 2ನೇ ಕಂತಿನ ಹಣ ಬಿಡುಗಡೆ – NDRF ಮತ್ತು SDRF ವರದಿ ₹22,500 ಹಣ
ಮೊದಲಿಗೆ ಮಹಿಳೆಯರ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ(Gruhalakshmi) ಯೋಜನೆಯ ಹಣ ಜಮಾ ಆಗದಿದ್ದರೆ. ನೀವು ನಿಮ್ಮ ತಾಲೂಕಿನ ಅಥವಾ ನಿಮ್ಮ ಜಿಲ್ಲೆಯ ಹತ್ತಿರ ಇರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಭೇಟಿ ಮಾಡಬೇಕು. ಭೇಟಿ ಮಾಡುವಾಗ ನಿಮ್ಮ ರೇಷನ್ ಕಾರ್ಡ್, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ಬುಕ್ ನ ಪ್ರತಿ ಹಾಗು ಭಾವಚಿತ್ರ ಸೇರಿದಂತೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಸ್ವೀಕೃತ ಪತ್ರದೊಂದಿಗೆ ನೀವು ತಾಲೂಕಿನ ಅಥವಾ ನಿಮ್ಮ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆಗೆ ಭೇಟಿ ಮಾಡಿದ್ರೆ, ನಿಮಗೆ ನಿಮಗೆ ಈ ಹಿಂದಿನ ಬಾಕಿಯಿರುವ ಗೃಹಲಕ್ಷ್ಮಿ ಕಂತಿನ ಹಣಗಳು ಕೂಡ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ. ಹೀಗಾಗಿ ಈ ತಿಳಿಸಿದ ಎಲ್ಲ ದಾಖಲಾತಿಗಳೊಂದಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆಗೆ ಭೇಟಿ ನೀಡಿ ಚೆಕ್ ಮಾಡಿಸಿಕೊಳ್ಳಿ.
ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.
ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ. ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..
- Pension Scheme : ಪ್ರತಿ ತಿಂಗಳು ನಿಮಗೆ ₹5,000/- ರೂಪಾಯಿ ಪೆನ್ಷನ್ ಹಣ ಬೇಕಾ.? ಕೂಡಲೇ ಈ ಯೋಜನೆಗೆ ಅರ್ಜಿ ಸಲ್ಲಿಸಿ
- Gold-Silver Rate : ಏದುಸಿರು ಬಿಡುತ್ತಿರುವ ಚಿನ್ನ.! ರೆಕಾರ್ಡ್ ಉಡೀಸ್ ಮಡಿದ ಬಂಗಾರ.!
- PM Fasal Bima Yojane : ಬೆಳೆ ವಿಮೆ ಮಾಡಿಸುವ ರೈತರಿಗೆ ಕೃಷಿ ಸಚಿವ ಬಂಪರ್ ಗಿಫ್ಟ್ – ಬೆಳೆವಿಮೆ ಇದ್ದವರಿಗೂ, ಇಲ್ಲದವರಿಗೂ..
- Small Farmers : ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಬಂಪರ್ ಗಿಫ್ಟ್ – ₹3,000 ಹಣ ರೈತರ ಬ್ಯಾಂಕ್ ಖಾತೆಗೆ ಜಮಾ.!
- Senior Citizens : 60 ವರ್ಷ ಮೇಲ್ಪಟ್ಟವರಿಗೆ ಬಂಪರ್ – ಅಜ್ಜ ಅಜ್ಜಿ ಇದ್ದವರು ತಪ್ಪದೆ ನೋಡಿ – ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್.!