ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಬ್ಲಾಕ್ ಬಸ್ಟರ್ ಸಿನಿಮಾ ‘ಕಾಂತಾರ’ ಚಿತ್ರ ಇಡೀ ಭಾರತೀಯ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸುತ್ತಿರುವ ನಡುವೆಯೇ ಸಿನಿಮಾದಲ್ಲಿನ ದೈವಾರಾಧನೆ, ಭೂತಕೋಲ ವಿಚಾರವು ಸಾಕಷ್ಟು ಜನಪ್ರಿಯತೆ ಪಡೆಯುತ್ತಿವೆ. ಇದೀಗ ಇದೇ ವಿಚಾರವಾಗಿ ಭೂತಕೋಲದ ಬಗ್ಗೆ ನಟ ಅಹಿಂಸಾ ಚೇತನ್ ನೀಡಿರುವ ಹೇಳಿಕೆ ಹೊಸದೊಂದು ವಿವಾದಕ್ಕೆ ಕಾರಣವಾಗಿದೆ.
‘ಭೂತಕೋಲ’ ಇದು ಹಿಂದೂ ಸಂಸ್ಕೃತಿಗೆ ಸೇರಿದ್ದಲ್ಲ. ಅದು ಹಿಂದೂ ಧರ್ಮಕ್ಕಿಂತ ಹಿಂದಿನದ್ದು ಎಂದು ನಟ ಚೇತನ್ ತಿಳಿಸಿದ್ದಾರೆ. ರಿಷಬ್ ಶೆಟ್ಟಿಯ ‘ಕಾಂತಾರ’ ಸಿನಿಮಾದಲ್ಲಿ ಬರುವ ಭೂತಕೋಲ ಹಿಂದೂ ಸಂಸ್ಕ್ರತಿಗೆ ಸೇರಿದೆ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ. ಆದ್ರೆ ಭೂತಕೋಲ ಹಿಂದೂ ಸಂಸ್ಕ್ರತಿಗೆ ಸೇರಿದ್ದಲ್ಲ ಎನ್ನುವ ವಾದವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಅದೂ ಅಲ್ಲದೇ ತಮ್ಮ ಹೇಳಿಕೆಗೆ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆಯನ್ನು ನೀಡಿರುವ ನಟ ಚೇತನ್ ಅವರು, ‘ಕಾಂತಾರ’ ಕನ್ನಡ ಸಿನಿಮಾ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡುತ್ತಿರುವುದು ಸಂತೋಷದ ವಿಚಾರ. ಆದ್ರೆ ಭೂತಕೋಲ ಇದು ಹಿಂದೂ ಸಂಸ್ಕೃತಿಗೆ ಸೇರಿದ್ದಲ್ಲ. ಇದು ನಮ್ಮ ಪಂಬದ, ಎಂಬ ಪುಸ್ತಕದಲ್ಲಿ ಇದರ ಬಗ್ಗೆ ಮಾಹಿತಿ ಇದೆ. ನಮ್ಮ ಪಂಬದ, ನಲಿಕೆ, ಪರವರ ಇವು ಬಹುಜನ ಸಂಪ್ರದಾಯಗಳು. ವೈದಿಕ ಬ್ರಾಹ್ಮಣ್ಯ ಹಿಂದೂ ಧರ್ಮಕ್ಕಿಂತ ಹಿಂದಿನಿಂದ ಇರುವವು, ಹಿಂದೂ ಸಂಸ್ಕೃತಿಯಲ್ಲಿ ಭೂತಕೋಲ ಬರುತ್ತದೆ ಎಂದು ಹೇಳುವುದು ತಪ್ಪು, ಭೂತಕೋಲ ಎನ್ನುವುದು ಪಂಬದ ಸಮುದಾಯದ ಆಚರಣೆ. ಭೂತಕೋಲದಲ್ಲಿ ಬ್ರಾಹ್ಮಣ್ಯ ಎನ್ನುವುದು ಇಲ್ಲ. ಬ್ರಾಹ್ಮಣ್ಯವನ್ನು ಆದಿವಾಸಿ ಸಂಸ್ಕೃತಿ ಎನ್ನಲಾಗದು. ಕೊರಗ ಸಮುದಾಯಕ್ಕೆ ಅವರದ್ದೇ ಆದ ಸಂಪ್ರದಾಯವಿದೆ. ‘ಕೊರಗಜ್ಜ’ ಆದಿವಾಸಿ ಸಂಸ್ಕೃತಿಗೆ ಸೇರಿದ್ದಾನೆ, ಹಾಗೇ ಭೂತಕೋಲ ಎನ್ನುವುದು ಪಂಬದ ಸಂಪ್ರದಾಯ ಹಿಂದೂ ಎಂಬ ಪದವನ್ನು ಯಾವ ರೀತಿ ಬಳಸುತ್ತೇವೆ ಎನ್ನೋದು ಮುಖ್ಯವೆಂದು ವಿವರಿಸಿದ್ದಾರೆ.
- Pension Scheme : ಪ್ರತಿ ತಿಂಗಳು ನಿಮಗೆ ₹5,000/- ರೂಪಾಯಿ ಪೆನ್ಷನ್ ಹಣ ಬೇಕಾ.? ಕೂಡಲೇ ಈ ಯೋಜನೆಗೆ ಅರ್ಜಿ ಸಲ್ಲಿಸಿ
- Gold-Silver Rate : ಏದುಸಿರು ಬಿಡುತ್ತಿರುವ ಚಿನ್ನ.! ರೆಕಾರ್ಡ್ ಉಡೀಸ್ ಮಡಿದ ಬಂಗಾರ.!
- PM Fasal Bima Yojane : ಬೆಳೆ ವಿಮೆ ಮಾಡಿಸುವ ರೈತರಿಗೆ ಕೃಷಿ ಸಚಿವ ಬಂಪರ್ ಗಿಫ್ಟ್ – ಬೆಳೆವಿಮೆ ಇದ್ದವರಿಗೂ, ಇಲ್ಲದವರಿಗೂ..
- Small Farmers : ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಬಂಪರ್ ಗಿಫ್ಟ್ – ₹3,000 ಹಣ ರೈತರ ಬ್ಯಾಂಕ್ ಖಾತೆಗೆ ಜಮಾ.!
- Senior Citizens : 60 ವರ್ಷ ಮೇಲ್ಪಟ್ಟವರಿಗೆ ಬಂಪರ್ – ಅಜ್ಜ ಅಜ್ಜಿ ಇದ್ದವರು ತಪ್ಪದೆ ನೋಡಿ – ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್.!