Ashwini Puneeth Rajkumar : ಅಪ್ಪುವಿನ ಈ ಒಂದು ಆಸೆ ಈಡೇರಲೇ ಇಲ್ಲ ಎಂದು ಬೇಜಾರು ಮಾಡಿಕೊಂಡ ಅಶ್ವಿನಿ ಪುನೀತ್ ರಾಜ್ ಕುಮಾರ್

Ashwini Puneeth Rajkumar : ನಮಸ್ಕಾರ ಸ್ನೇಹಿತರೇ, ಸ್ಯಾಂಡಲ್ ವುಡ್ ನಟ ಪುನೀತ್ ರಾಜ್ ಕುಮಾರ್ ಕನ್ನಡ ಸಿನಿಮಾ ರಂಗದ ಶ್ರೇಷ್ಠ ನಟ, ಕನ್ನಡ ಚಿತ್ರರಂಗದಲ್ಲೇ ಅತೀ ಹೆಚ್ಚು ಅಭಿಮಾನಗಳನ್ನು ಸಂಪಾದಿಸಿರುವ ನಟ, ಅಪ್ಪು ನಿಧನದ ನಂತರ ಅವರು ಮಾಡಿದಂತಹ ಸಾಕಷ್ಟು ಸಮಾಜ ಸೇವೆಗಳು ಮುನ್ನೆಲೆಗೆ ಬಂದಿದ್ದವು, ಪುನೀತ್ ಅವರು ಅದೆಷ್ಟೋ ಮಕ್ಕಳಿಗೆ ಶಿಕ್ಷಣ ನೀಡಿದ್ದರು. ಆದರೆ ಕರುನಾಡು ಅಂತಹ ಶ್ರೇಷ್ಠ ನಟನನ್ನು ಕಳೆದುಕೊಂಡಿತು. ಇದೀಗ ಅಪ್ಪುವಿನ ಬಗ್ಗೆ ಅವರ ಧರ್ಮಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಮಾತನಾಡಿ, ಅಪ್ಪುವಿನ ಈ ಒಂದು ಆಸೆ ನೆರವೇರಲೇ ಇಲ್ಲ ಅಂದಿದ್ದಾರೆ.

Whatsapp Group Join
Telegram channel Join

ಇದನ್ನೂ ಕೂಡ ಓದಿ : SBI Bank Rules : ಎಸ್ ಬಿಐ ಅಕೌಂಟ್ ಹೊಂದಿದವರಿಗೆ ಹೊಸ ನಿಯಮ ಜಾರಿಗೆ / ಉದ್ಯೋಗಿಗಳಿಗೆ ಬಂಪರ್ ಆಫರ್.!

ಸ್ಯಾಂಡಲ್ ವುಡ್ ನಟ ಪುನೀತ್ ರಾಜ್ ಕುಮಾರ್ ಅವರು ದೈಹಿಕವಾಗಿ ನಮ್ಮ ಜೊತೆ ಇಲ್ಲದಿದ್ದರೂ, ಅಪ್ಪು ಅವರ ನೆನಪುಗಳು ಅಮರ. ಅಪ್ಪು ನಮ್ಮೊಂದಿಗೆ ಇಲ್ಲವೆನ್ನುವ ಸತ್ಯ ಅರಗಿಸಿಕೊಳ್ಳಲು ಸಾಧ್ಯವೇ ಇಲ್ಲ. ಪ್ರತೀ ಕ್ಷಣ ಅದೆಷ್ಟೋ ಯುವ ಜನರಿಗೆ, ಯುವ ನಟರಿಗೆ, ಯುವ ಪ್ರತಿಭಾವಂತರಿಗೆ ಹಾಗೂ ಅಭಿಮಾನಿಗಳಿಗೆ ಇವರು ಪ್ರೇರಣೆ. ಅಶ್ವಿನಿ ಅವರೊಂದಿಗೆ ದಾಂಪತ್ಯ ಜೀವನ ಪ್ರಾರಂಭಿಸಿದ ಅಪ್ಪು ಅವರಿಗೆ ಇಬ್ಬರು ಪುತ್ರಿಯರಿದ್ದಾರೆ. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಹಾಗೂ ಫ್ಯಾಮಿಲಿಯೊಂದಿಗೆ ಹೆಚ್ಚು ಸಮಯ ಕಳೆಯುತ್ತಿದ್ದರು. ಸಿನಿಮಾದ ಜೊತೆಗೆ ಫ್ಯಾಮಿಲಿ ಮ್ಯಾನ್ ಆಗಿಯೂ ಗುರುತಿಸಿಕೊಂಡು ಎಲ್ಲರಿಗೂ ಇಷ್ಟವಾಗಿದ್ದರು.

Whatsapp Group Join
Telegram channel Join

ಅಪ್ಪುವಿಗೆ ಈ ಒಂದು ಆಸೆ ಇತ್ತಂತೆ :-

ಪುನೀತ್ ಅವರು ವರ್ಕ್ ಔಟ್ ಮಾಡುವುದು ಹೇಗೆ ಇಷ್ಟ ಪಡುತ್ತಿದ್ದರೋ, ಹಾಗೇ ಆಹಾರವನ್ನು ಕೂಡ ಇಷ್ಟ ಪಡುತ್ತಿದ್ದರು. ಅಪ್ಪು ಅವರಿಗೆ ರಾಗಿ ಮುದ್ದೆ, ಚಿಕನ್ ಬಿರಿಯಾನಿ ಅಂದರೆ ಬಲು ಪ್ರೀತಿಯಂತೆ. ಶೂಟಿಂಗ್ ನಲ್ಲಿರಲಿ ಅಥವಾ ಮನೆಯಲ್ಲಿರಲಿ ಚಿಕನ್ ಬಿರಿಯಾನಿ ಇಷ್ಟವಂತೆ, ವೆಜ್ ಗಿಂತಲೂ ನಾನ್ ವೆಜ್ ತುಂಬಾ ಇಷ್ಟ ಪಡುತ್ತಿದ್ದರು. ಪುನೀತ್ ರಾಜ್ ಕುಮಾರ್ ಅವರಿಗೆ ಕಾಫಿ ಕೂಡ ಇಷ್ಟವಂತೆ, ನಾನೊಂದು ಕೆಫೆ ತೆರೆಯಬೇಕೆಂದು ಅಪ್ಪು ಅವರು ಆಗಾಗ್ಗೆ ಹೇಳುತ್ತಿದ್ದರಂತೆ. ಒಮ್ಮೆ ಕಾಫಿ ಕೆಫೆ ತೆರೆದೇ ತೆರೆಯುತ್ತೇನೆ, ಅದರ ಬಗ್ಗೆ ಬಹಳಷ್ಟು ಆಸಕ್ತಿ ಅಪ್ಪು ಅವರಲ್ಲಿತ್ತು, ಆದರೆ ಅದು ಸಾಧ್ಯವಾಗಲೇ ಇಲ್ಲ ಎಂದು ಅಶ್ವಿನಿ ಪುನೀತ್ ರಾಜ್ ಕುಮಾರ್ ಹೇಳಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಅಡುಗೆ ಪ್ರೀತಿ, ಇಷ್ಟದ ಆಹಾರದ ಕುರಿತು ಕೆಲವೊಂದು ಮಾಹಿತಿಯನ್ನ ಬಿಚ್ಚಿಟ್ಟಿದ್ದಾರೆ.

ಇದನ್ನೂ ಕೂಡ ಓದಿ : SBI Bank Rules : ಎಸ್ ಬಿಐ ಅಕೌಂಟ್ ಹೊಂದಿದವರಿಗೆ ಹೊಸ ನಿಯಮ ಜಾರಿಗೆ / ಉದ್ಯೋಗಿಗಳಿಗೆ ಬಂಪರ್ ಆಫರ್.!

ಹೃದಯಾಘಾತದಿಂದ ನಟ ಪುನೀತ್ ರಾಜ್ ಕುಮಾರ್ ಅವರು ಅಭಿಮಾನಿಗಳನ್ನ ಅಗಲಿದ್ದಾರೆ. ಪ್ರತೀದಿನ ಅವರ ಸಮಾಧಿಗೆ ಹಲವು ಅಭಿಮಾನಿಗಳು ಭೇಟಿ ನೀಡಿ ನಮನ ಸಲ್ಲಿಸುತ್ತಾರೆ. ನಮ್ಮನ್ನಗಲಿ ವರ್ಷ ಕಳೆದರೂ ಕೂಡ ಪರಮಾತ್ಮನ ನೆನಪು ಮಾತ್ರ ಅಭಿಮಾನಿಗಳ ಮನದಲ್ಲಿ ಜೀವಂತವಾಗಿದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..