ವಿಜಯಲಕ್ಷ್ಮಿಗೆ ಪಾಪ ಈ ಗತಿ ಬರಬಾರದಿತ್ತು, ಆಕೆಗೆ ಮೋಸ ಮಾಡಿದ್ದು ಎಷ್ಟು ಜನ ಗೊತ್ತಾ.?

ಸೌಂದರ್ಯವನ್ನು ತನ್ನ ಕೈಯಲ್ಲಿಟ್ಟುಕೊಂಡು ಹುಟ್ಟಿದ ನಟಿ ವಿಜಯಲಕ್ಷ್ಮಿ, ಆದ್ರೆ, ಪಾಪ ಅವರ ಜೀವನದಲ್ಲಿ ಆದ ಘಟನೆಗಳನ್ನು ನೋಡಿದರೆ ನೋವು ತರಿಸತ್ತೆ, ಅಸಲಿಗೆ ಏನಾಯ್ತು ಗೊತ್ತಾ.?

ಹುಟ್ಟಿದ್ದು ಚೆನ್ನೈ ನಲ್ಲಾದರೂ, ಇಷ್ಟ ಪಟ್ಟು ಓದಲು ಬಂದಿದ್ದು ಬೆಂಗಳೂರಿಗೆ, ಅವರ ಬ್ಯೂಟಿ ನೋಡಿ ನಾಗಮಂಡಲ ಚಿತ್ರದಲ್ಲಿ ಅವಕಾಶ ಕೊಟ್ಟರು, ಅದರ ಸಕ್ಸಸ್ ನಂತರ ಫುಲ್ ಬ್ಯುಸಿ ಆದರು ವಿಜಯಲಕ್ಷ್ಮಿ.

ಒಬ್ಬ ಸಹ ನಿರ್ದೇಶಕನ ಜೊತೆ ಫ್ರೆಂಡ್ಲಿ ಯಾಗಿದ್ದ ವಿಜಯಲಕ್ಷ್ಮಿಯನ್ನು ಆತ ಮದುವೆಯಾಗುವಂತೆ ಪೀಡಿಸಿದ, ಎಷ್ಟರ ಮಟ್ಟಿಗೆ ಎಂದರೆ, ಆತನ ಹಿಂಸೆ ತಾಳಲಾರದೆ, ನಿದ್ರೆ ಮಾತ್ರೆ ತಗೊಂಡು ಸುಸೈಡ್ ಗೆ ಯತ್ನ ಮಾಡಿದ್ದಳು, ಆದ್ರೆ ಹೇಗೋ ಬದುಕುಳಿದಳು.

ಅನಂತರ 2006 ರಲ್ಲಿ ಸೃಜನ್ ಲೋಕೇಶ್ ಜೊತೆ ವಿಜಯಲಕ್ಷ್ಮಿಗೆ ಎಂಗೇಜ್ ಮೆಂಟ್ ಆಯಿತು. ಮೂರು ವರ್ಷ ವಿಜಯಲಕ್ಷ್ಮಿ ಜೊತೆ ಸುತ್ತಾಡಿದ ಸೃಜನ್ ಕೊನೆಗೂ ಎಂಗೇಜ್ ಮೆಂಟ್ ಕ್ಯಾನ್ಸಲ್ ಮಾಡಿದರು. ಮುಂದೇನಾಯ್ತು.?

ಸೃಜನ್ ಕೈ ಕೊಟ್ಟ ಮೇಲೆ, ಮದುವೆಯಾಗ್ತೀನಿ ಅಂತ ಹೇಳಿ ನಟ ಹಾಗು ರಾಜಕಾರಣಿ ಸೀಮನ್ ಅವರು ವಿಜಯಲಕ್ಷ್ಮಿ ಜೊತೆ 3 ವರ್ಷ ಲೀವಿಂಗ್ ರಿಲೇಶನ್ ಇಟ್ಕೊಂಡು ಕೊನೆಗೆ ಮದುವೆಯಾಗಲ್ಲ ಅಂದ, ಪೋಲೀಸ್ ಸ್ಟೇಷನ್ ಮೆಟ್ಟಿಲೇರಿದರೂ ನ್ಯಾಯ ಸಿಗಲಿಲ್ಲ ವಿಜಯಲಕ್ಷ್ಮಿಗೆ. ಈಗ ಒಂಟಿಯಾಗಿದ್ದಾಳೆ.

Leave a Reply