‘ಪಪ್ಪು’ ಪದ ಬಳಸಬಾರದಂತೆ – ಬಿಜೆಪಿಗೆ ಸೂಚನೆ

ಗುಜರಾತ್ ವಿಧಾನಸಭಾ ಚುನಾವಣಾ ಜಾಹೀರಾತಿಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯನ್ನು ಅವಮಾನಿಸುವ ರೀತಿಯಲ್ಲಿ ‘ಪಪ್ಪು’ ಪದ ಬಳಕೆಗೆ ಮುಂದಾದ ಗುಜರಾತ್ ಬಿಜೆಪಿಗೆ ಮುಖಭಂಗವಾಗಿದೆ. ಚುನಾವಣೆ ಆಯೋಗವು ಚುನಾವಣಾ ಜಾಹೀರಾತಿನಲ್ಲಿ ‘ಪಪ್ಪು’ ಪದ ಬಳಸದಂತೆ ತಾಕೀತು ಮಾಡಿದೆ. ರಾಹುಲ್ ಗಾಂಧಿಯನ್ನು ಗೇಲಿ ಮಾಡಲು ಭಾರತೀಯ ಜನತಾ ಪಾರ್ಟಿ ‘ಪಪ್ಪು’ ಎಂಬ ಪದವನ್ನು ಸಾಮಾಜಿಕ ಜಾಲತಾಣಗಳಲ್ಲಿ ಯಥೇಚ್ಛವಾಗಿ ಬಳಸುತ್ತಾ ಬಂದಿದೆ. ಮುಂದಿನ ತಿಂಗಳು ಗುಜರಾತ್‌ನಲ್ಲಿ ಅಸೆಂಬ್ಲಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿಯನ್ನು ಹಣಿಯಲು ಎಲೆಕ್ಟ್ರಾನಿಕ್ ಜಾಹೀರಾತಿನಲ್ಲಿ ‘ಪಪ್ಪು’ ಪದ … Read more

ಅಚ್ಛೇ ದಿನ್…! ಯಾರಿಗೆ?..

ಮೋದಿಯ ಆಗಮನ… ದಲಿತ ಮತ್ತು ಅಲ್ಪಸಂಖ್ಯಾತರ  ಧಮನ ಗುಜರಾತ್, ಕಾಶ್ಮೀರ ಹೊತ್ತಿ ಉರಿಯುತ್ತಿದೆ. ಬುರ್ಹಾನ್ ವನಿ ಹತ್ಯೆಯ ನಂತರ ಕಾಶ್ಮೀರದಲ್ಲಿ ಸತ್ತವರು ಎಷ್ಟು ಮಂದಿಯೋ, ಯಾರಿಗೂ ಲೆಕ್ಕ ಸಿಗುತ್ತಿಲ್ಲ. ಮಾಧ್ಯಮಗಳನ್ನು ಪೊಲೀಸರು ತಮ್ಮ ಹತೋಟಿಗೆ ತೆಗೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳು ಬಂದ್ ಆಗಿವೆ.ಗುಜರಾತ್ನಲ್ಲಿ ಸತ್ತ ದನದ ಚರ್ಮ ತೆಗೆಯುತ್ತಿದ್ದ ದಲಿತ ಯುವಕರನ್ನು ಕಟ್ಟಿ ಹಾಕಿ ನಾಯಿಗೆ ಹೊಡೆಯುವಂತೆ ಹೊಡೆಯಲಾಗಿದೆ. ದಲಿತರು ದಂಗೆಯೆದ್ದಿದ್ದಾರೆ. ಸತ್ತ ದನದ ಮೂಳೆ ಮಾಂಸಗಳನ್ನೆಲ್ಲ ತಂದು ಸರ್ಕಾರಿ ಕಚೇರಿಗಳಲ್ಲಿ ಎಸೆದು ನೀವೇ ಸಂಸ್ಕಾರ ಮಾಡಿಕೊಳ್ಳಿ ಎಂದು ಸವಾಲೆಸೆದಿದ್ದಾರೆ. ಪ್ರತಿರೋಧನೆ ಮಾಡುವ ಪ್ರತಿಪಕ್ಷ ಯಾವುದೊ … Read more

ವಾಟ್ಸಪ್ ಬಳಕೆ

ಇತ್ತೀಚೆಗೆ ಸ್ಮಾರ್ಟ್ ಪೋನ್ ಬಳಕೆದಾರರ ಸಂಖ್ಯೆ ಹೆಚ್ಚಿದಂತೆಲ್ಲಾ, ಸಾಮಾಜಿಕ ಜಾಲತಾಣಗಳನ್ನು ಬಳಸುವವರ ಸಂಖ್ಯೆಯೂ ಹೆಚ್ಚಾಗಿದೆ. ಈ ಜಾಲತಾಣಗಳಲ್ಲಿ ವಾಟ್ಸಾಪ್ ಬಳಕೆದಾರರ ಸಂಖ್ಯೆ ಗಣನೀಯ ಪ್ರಮಾಣದಲ್ಲಿದೆ.ವಾಟ್ಸಾಪ್ ಅನ್ನು ಇನ್ ಸ್ಟಾಲ್ ಮಾಡಿಕೊಂಡ ಸಂದರ್ಭದಲ್ಲಿ ನೀವು ಕಳುಹಿಸಿದ ಸಂದೇಶಗಳು ನಿಮ್ಮ ಸ್ನೇಹಿತರಿಗೆ ಸುರಕ್ಷಿತವಾಗಿ ರವಾನೆಯಾಗುತ್ತವೆ. ಡೇಟಾ ಬೇಸ್ ಗೆ ಬರುವುದಿಲ್ಲ. ನೀವು ಮಾಡಿದ ಚಾಟ್ ಸುರಕ್ಷಿತವಾಗಿರುತ್ತವೆ. ಡೇಟಾ ಬೇಸ್ ನಲ್ಲಿ ಯಾರೂ ನೋಡುವ ಸಾಧ್ಯತೆ ಇಲ್ಲ ಎಂದು ಆಂಡ್ರಾಯಿಡ್ ಫೋನ್ ಗಳಲ್ಲಿ ಇನ್ ಸ್ಟಾಲ್ ಮಾಡಿಕೊಂಡ ಸಂದರ್ಭದಲ್ಲಿ ಸಂದೇಶ ಬರುತ್ತದೆ. … Read more

ನಿರ್ಗತಿಕರಿಗೆ ಊಟ ಭಾಗ್ಯ : ಸಚಿವ ಖಾದರ್ ನಡೆಗೆ ಸಿಎಂ ಮೆಚ್ಚುಗೆ

ವಸತಿ ವ್ಯವಸ್ಥೆಯಿಲ್ಲದ ನಿರ್ಗತಿಕರಿಗೆ ಊಟದ ವ್ಯವಸ್ಥೆ ಕಲ್ಪಿಸುವ ಯೋಜನೆ ಜಾರಿಯಾಗಲಿದ್ದು, ಮೊದಲ ಹಂತದಲ್ಲಿ ರಾಜ್ಯದ ಯಾವುದಾದರೊಂದು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಯೋಜನೆ ಪ್ರಾರಂಭಿಸಲಾಗುತ್ತದೆ ಎಂದು ಹಾಗೂ ನಾಗರಿಕ ಪೊರೈಕೆ ಖಾತೆ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ. ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ರಾಜ್ಯಧಾನಿ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಆಹಾರ ಇಲಾಖೆಯ ಉನ್ನತ ಮಟ್ಟದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ನಿರ್ಗತಿಕರಿಗೆ ಊಟದ ವ್ಯವಸ್ಥೆ ಕಲ್ಪಿಸುವ ಯೋಜನೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯ ರಾಜ್ಯದ ಯಾವುದಾದರೊಂದು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇದನ್ನು ಜಾರಿಗೊಳಿಸಲು … Read more

ಇಸ್ಲಾಮಿಕ್ ಬ್ಯಾಂಕಿಂಗ್ ಸಿಸ್ಟಮ್ ಜಾರಿಗೆ ತರಲು ಆರ್.ಬಿ.ಐ ಚಿಂತನೆ

ಮುಸ್ಲಿಂ ಸಮುದಾಯದಲ್ಲಿ ಬಡ್ಡಿ ವ್ಯವಹಾರಕ್ಕೆ ನಿಷೇದ ಇರುವುದರಿಂದ ಬಹಳಷ್ಟು ಮುಸ್ಲಿಂ ಸಮುದಾಯದವರು ಬ್ಯಾಂಕಿಂಗ್ ವ್ಯವಹಾರಗಳಿಂದ ದೂರ ಉಳಿದಿದ್ದಾರೆ ಎಂದು ಹೇಳಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್.ಬಿ.ಐ) ಬ್ಯಾಂಕಿಂಗ್ ವ್ಯವಹಾರಕ್ಕೆ ಮುಸ್ಲಿಂ ಸಮುದಾಯದವರನ್ನು ಹೆಚ್ಚಾಗಿ ಸೆಳೆಯುವ ಉದ್ದೇಶದಿಂದ ಇಸ್ಲಾಮಿಕ್ ಬ್ಯಾಂಕಿಂಗ್ ಸಿಸ್ಟಮ್ ಜಾರಿಗೆ ತರಲು ಚಿಂತನೆ ನಡೆಸಿದ್ದು, ಶೀಘ್ರವೇ ಕಾರ್ಯರೂಪಕ್ಕೆ ತರಲು ಯೋಚಿಸಲಾಗಿದೆ. ಭಾರತದಲ್ಲಿ ಅತೀ ದೊಡ್ಡ ಅಲ್ಪಸಂಖ್ಯಾತ ಸಮುದಾಯವಾಗಿರುವ ಮುಸ್ಲಿಂ ಸಮುದಾಯವನ್ನು ಹಣಕಾಸು ಕ್ಷೇತ್ರದಲ್ಲಿ ಪಾಲ್ಗೊಳ್ಳುವಂತೆ ಮಾಡುವ ಉದ್ದೇಶ ಹೊಂದಲಾಗಿದೆ.  ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ವಾರ್ಷಿಕ … Read more

ಇಂಗು ತಿಂದ ಮಂಗನಂತಾದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ

ಗೋವಾ : ಆರ್ ಎಸ್ ಎಸ್ ನ ಗೋವಾ ಘಟಕದ ಮುಖ್ಯಸ್ಥ ಸುಭಾಶ್ ವೆಲ್ಲಿಂಗ್ಕರ್ ಅವರನ್ನು ಕಿತ್ತೊಗೆದಿರುವ ಆರ್ ಎಸ್ ಎಸ್ ನ ನಿರ್ಧಾರದಿಂದ ಸಂಘದಲ್ಲೇ ಬಿನ್ನಾಭಿಪ್ರಾಯ ಉಂಟಾಗಿದೆ. ಹಲವಾರು ಹಿರಿಯ ಆರ್ ಎಸ್ ಎಸ್ ನಾಯಕರ ಪ್ರಕಾರ ಬಿಜೆಪಿ ರಾಷ್ಟೀಯ ಅಧ್ಯಕ್ಷ ಅಮಿತ್ ಶಾರ ಕುತಂತ್ರದಿಂದಲೇ ಸುಭಾಶ್ ಅವರನ್ನು ಹುದ್ದೆಯಿಂದ ಕೆಳಗಿಳಿಸಲಾಗಿದೆಯೆಂದು ವರದಿಯೊಂದು ತಿಳಿಸಿದೆ. ಗೋವಾದಲ್ಲಿ ಭಾರತೀಯ ಭಾಷಾ ಸುರಕ್ಷಾ ಮಂಚ್ ಅಲ್ಲಿನ ಶಾಲೆಗಳಲ್ಲಿ ಕೊಂಕಣಿ ಮತ್ತು ಮರಾಠಿಯನ್ನು ಕಲಿಕಾ ಮಾಧ್ಯಮವಾಗಿಸಬೇಕೆಂದು ಬೇಡಿಕೆ ಸಲ್ಲಿಸುತ್ತಿರುವುದು ಮತ್ತು … Read more

ರಿಲಯನ್ಸ್ ಗೆ ಪ್ರಧಾನಿ ಮೋದಿ ಬಹಿರಂಗ ಬೆಂಬಲ : ಕೇಜ್ರಿವಾಲ್ ಟೀಕೆ

ನವದೆಹಲಿ : ರಿಲಯನ್ಸ್ ಕಂಪನಿಯ ಜಾಹಿರಾತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಛಾಯಾಚಿತ್ರ ಪ್ರಕಟವಾಗಿರುವುದಕ್ಕೆ  ವ್ಯಂಗ್ಯವಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮೋದಿಯವರನ್ನು “ಮಿಸ್ಟರ್ ರಿಲಯನ್ಸ್” ಎಂದು ಕರೆದಿದ್ದಾರೆ. ಜಿಯೋ ಫೋನ್ ಗಳಿಗೆ ಭಾರಿ ಭಾರಿ ಆಫರ್ ಪ್ರಕಟಿಸಿರುವ ರಿಲಯನ್ಸ್ ಇಂಡಸ್ಟ್ರೀಸ್ಗೆ ಪ್ರಧಾನಿ ಮೋದಿ ಬಹಿರಂಗವಾಗಿ ಬೆಂಬಲ ನೀಡಿದ್ದಾರೆ ಎಂದು ಆರೋಪಿಸಿರುವ ಕೇಜ್ರಿವಾಲ್ “ನೀವು ರಿಲಯನ್ಸ್ ಗೆ ರೂಪದರ್ಶಿಯಾಗಿಯೇ ಇರಿ” ಎಂದು ಪ್ರಧಾನಿಗೆ ಸಲಹೆ ನೀಡಿದ್ದಾರೆ. ಅಂಬಾನಿಯ ರಿಲಯನ್ಸ್ ಕಂಪನಿಗೆ ರೂಪದರ್ಶಿಯಾದರೆ ನಿಮಗೆ 2019 ರ ಚುನಾವಣೆಯಲ್ಲಿ … Read more

ಮಂಗಳೂರು ವಿವಿ ವಿಧ್ಯಾರ್ಥಿನಿಯರ ಶೌಚಾಲಯದಲ್ಲಿ ರಹಸ್ಯ ಮೊಬೈಲ್ ಕ್ಯಾಮರಾ ಪತ್ತೆ

ಮಂಗಳೂರು : ಮಂಗಳಗಂಗೋತ್ರಿ ವಿಶ್ವವಿದ್ಯಾಲಯದ (ಮಂಗಳೂರು ವಿವಿ) ವಿಧ್ಯಾರ್ಥಿನಿಯರ ಶೌಚಾಲಯದಲ್ಲಿ ರಹಸ್ಯವಾಗಿ ಮೊಬೈಲ್ ಇಟ್ಟು ಚಿತ್ರೀಕರಿಸಿರುವ ವಿಡಿಯೋಗಳು ಹರಿದಾಡುತ್ತಿರುವ ಅತ್ಯಂತ ಹೇಯ ಮತ್ತು ಕಳವಳಕಾರಿ ವಿಚಾರ ಬೆಳಕಿಗೆ ಬಂದಿದೆ. ಶೌಚಾಲಯದಲ್ಲಿ ರಹಸ್ಯವಾಗಿಟ್ಟಿರುವ ಮೊಬೈಲನ್ನು ಆಗಸ್ಟ್ 24 ರಂದು ವಿಧ್ಯಾರ್ಥಿನಿಯೊಬ್ಬಳು ಪತ್ತೆ ಹಚ್ಚಿ ವಿಶ್ವವಿದ್ಯಾಲಯದ ಗಮನಕ್ಕೆ ತಂದಿದ್ದು, ಈ ಬಗ್ಗೆ ಆಂತರಿಕವಾಗಿ ವಿಶ್ವವಿದ್ಯಾಲಯ ತನಿಖೆ ನಡೆಸಿತ್ತು. ಇಂಟೆಕ್ಸ್ ಕಂಪನಿಗೆ ಸೇರಿದ ಮೊಬೈಲ್ ಇದಾಗಿದ್ದು, ಶೌಚಾಲಯದ ಮೇಲ್ಬಾಗದಲ್ಲಿ ಒಂದು ಹಲಗೆ ಇಟ್ಟು, ಅದಕ್ಕೆ ಮೊಬೈಲ್ ಕ್ಯಾಮರಾಕ್ಕೆ ಬೇಕಾಗುವಷ್ಟು ರಂಧ್ರ ಮಾಡಿ … Read more