PM Scheme for Farmer : ರೈತರಿಗಾಗಿ ಹೊಸ ಹೊಸ ಯೋಜನೆಗಳನ್ನ ಪ್ರಧಾನಮಂತ್ರಿ ನರೇಂದ್ರ ಮೋದಿಯಿಂದ ಘೋಷಣೆ.?

PM Scheme for Farmer : ನಮಸ್ಕಾರ ಸ್ನೇಹಿತರೇ, ಕೃಷಿ ಕ್ಷೇತ್ರ ಮತ್ತು ರೈತರಿಗಾಗಿ ತಮ್ಮ ಸರ್ಕಾರದ ವಾರ್ಷಿಕ ವೆಚ್ಚ 6.5 ಲಕ್ಷ ಕೋಟಿ ರೂಪಾಯಿ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ, ಪ್ರತೀ ರೈತನಿಗೆ ಪ್ರತೀ ವರ್ಷ ಸುಮಾರು 50,000/- ರೂಪಾಯಿಗಳ ಲಾಭವನ್ನ ಖಾತರಿ ಪಡಿಸಲಾಗಿದೆ ಎಂದು ಹೇಳಿದ್ದಾರೆ. ಇದು ಮೋದಿಯವರ ಗ್ಯಾರಂಟಿ. ನಾನು ಏನು ಮಾಡಿದ್ದೇನೆ ಎಂದು ನಿಮಗೆ ಹೇಳುತ್ತಿದ್ದೀನಿ. ಕೇವಲ ಭರವಸೆ ನೀಡುತ್ತಿಲ್ಲ ಎಂದು ಮೋದಿ ಹೇಳಿದರು.

Whatsapp Group Join
Telegram channel Join

ಇದನ್ನೂ ಕೂಡ ಓದಿ : Gruhalakshmi Updates : ಗೃಹಲಕ್ಷ್ಮಿ ಹಣ ಜಮಾ ಆಗಿಲ್ವಾ.? ಚಿಂತಿಸಬೇಡಿ ಹೀಗೆ ಮಾಡಿದರೆ ಒಟ್ಟಿಗೆ ₹4,000/- ಬರುತ್ತೆ

17ನೇ ಭಾರತೀಯ ಸಹಕಾರಿ ಕಾಂಗ್ರೆಸ್ ನ ಉದ್ಘಾಟನಾ ಅಧಿವೇಶನವನ್ನ ಉದ್ದೇಶಿಸಿ ಮಾತನಾಡಿದ ಮೋದಿಯವರು, 2014ಕ್ಕಿಂತ ಮೊದಲು ಸಣ್ಣ ಮತ್ತು ಮಧ್ಯಮ ವರ್ಗದ ರೈತರು ಸರ್ಕಾರದ ಸವಲತ್ತುಗಳಿಂದ ವಂಚಿತರಾಗಿದ್ದರು. ಬದಲಾದ ನೀತಿಗಳು ಕಳೆದ 9 ವರ್ಷಗಳಲ್ಲಿ ತೆಗೆದುಕೊಂಡ ನಿರ್ಧಾರಗಳಿಂದ ಬಂದ ಬದಲಾವಣೆಗಳನ್ನು ನೀವು ಅನುಭವಿಸುತ್ತಿದ್ದೀರಿ ಎಂದರು. 2014ರ ಹಿಂದೆ ಸರ್ಕಾರದಿಂದ ಸಿಗುವ ನೆರವು ಕಡಿಮೆ ಎಂದು ರೈತರು ಹೇಳುತ್ತಿದ್ದರು.

Whatsapp Group Join
Telegram channel Join

ಯಾವುದೇ ಸಣ್ಣ ಸಹಾಯ ಬೇಕಾದರೂ ಮಧ್ಯವರ್ತಿಗಳ ಮೊರೆ ಹೋಗುತ್ತಿದ್ದರು. ಸಣ್ಣ ಮತ್ತು ಮಧ್ಯಮ ವರ್ಗದ ರೈತರು ಸರ್ಕಾರದ ಯೋಜನೆಗಳ ಲಾಭದಿಂದ ವಂಚಿತರಾಗಿದ್ದರು ಎಂದರು. ಕಳೆದ 9 ವರ್ಷಗಳಲ್ಲಿ ಪರಿಸ್ಥಿತಿ ಬದಲಾಗಿದೆ. ಇಂದು ಕೋಟ್ಯಾಂತರ ಸಣ್ಣ ರೈತರು ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿಯನ್ನ ಪಡೆಯುತ್ತಿದ್ದಾರೆ. ಇನ್ನು ಮಧ್ಯವರ್ತಿಗಳಿಲ್ಲ, ಬೋಗಸ್ ಫಲಾನುಭವಿಗಳಿಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ 2.5 ಲಕ್ಷ ಕೋಟಿ ರೂಪಾಯಿಗಳನ್ನು ವರ್ಗಾಯಿಸಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಇದನ್ನೂ ಕೂಡ ಓದಿ : HSRP Number Plate : ಸ್ವಂತ ವಾಹನ ಹೊಂದಿರುವವರು ತಪ್ಪದೇ ನೋಡಿ / ಕೇಂದ್ರ ಸರ್ಕಾರದಿಂದ ಹೊಸ ರೂಲ್ಸ್ ಜಾರಿಗೆ

ವಿಶ್ವದಾದ್ಯಂತ ರಸಗೊಬ್ಬರ ಮತ್ತು ರಾಸಾಯನಿಕಗಳ ಬೆಲೆಗಳ ಹೆಚ್ಚಳದಿಂದ ನಮ್ಮ ರೈತರಿಗೆ ಹೊರೆಯಾಗಿಲ್ಲ. ಇದಕ್ಕೂ ಭರವಸೆ ನೀಡಲಾಗಿದೆ. ಇದು ಮೋದಿಯವರ ಗ್ಯಾರಂಟಿ. ಇದನ್ನು ಕೇಂದ್ರದ ಬಿಜೆಪಿ ಸರ್ಕಾರ ನಿಮಗೆ ನೀಡಿದೆ ಎಂದು ಹೇಳಿದ್ದಾರೆ. ಪಾರದರ್ಶಕತೆ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತದ ಮಾದರಿಯಾಗುವಂತೆ ಸಹಕಾರಿ ಸಂಸ್ಥೆಗಳಿಗೆ ಪ್ರಧಾನ ಮಂತ್ರಿಯವರು ಕರೆ ನೀಡಿದರು. ಹಾಗು ದೇಶವು ಅಡುಗೆ ಎಣ್ಣೆಯಲ್ಲಿ ಸ್ವಾವಲಂಬಿಯಾಗಲು ಸಹಾಯ ಮಾಡಿದೆ. ರಾಸಾಯನಿಕ ಮುಕ್ತ ಕೃಷಿಯನ್ನು ಪ್ರಚಾರ ಮಾಡುವ ಮತ್ತು ಪರ್ಯಾಯ ರಸಗೊಬ್ಬರಗಳ ಬಳಕೆಯನ್ನ ಉತ್ತೇಜಿಸುವ ಉದ್ದೇಶ ಹೊಂದಿರುವ ಇತ್ತೀಚಿನ ಪಿಎಂ ಪ್ರಣಮ್ ಯೋಜನೆಯನ್ನ ಪ್ರಧಾನಿ ಸ್ಥಾಪಿಸಿದರು.

ಇದನ್ನೂ ಕೂಡ ಓದಿ : Dhruva Sarja : ಸೀಮಂತಕ್ಕೆ ಯಾಕೆ ಬಂದಿಲ್ಲ ಎಂದವರಿಗೆ ಖಡಕ್ ಆಗಿ ಮೇಘನಾ ರಾಜ್ ಹೇಳಿದ್ದೇನು.?

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply