Darshan Thoogudeepa : ತನ್ನ ತಂದೆ ತೀರಿಕೊಂಡಾಗ ಅಂತ್ಯಕ್ರಿಯೆಗೆ ಹೋಗಲು ಬಸ್ ಟಿಕೆಟ್ ಗೂ ದುಡ್ಡಿಲ್ಲದೆ ಪರದಾಡಿದ ಹುಡುಗ ಈಗ ಕನ್ನಡದ ಟಾಪ್ ನಟ

Darshan Thoogudeepa : ಆರೋಗ್ಯ ಸಮಸ್ಯೆಯಿಂದ ಶ್ರೀನಿವಾಸ್ ತೂಗುದೀಪ್ ಅವರು ನಟನೆಯನ್ನು ಮಾಡಲು ಸಾಧ್ಯವಾಗಲಿಲ್ಲ, ಆಗ ಒಂದು ಲೀಟರ್ ಹಾಲು ಕೊಂಡುಕೊಳ್ಳಲು ಕಷ್ಟ ಪಡುವ ಸ್ಥಿತಿ ನಿರ್ಮಾಣವಾಯಿತು ಮನೆಯಲ್ಲಿ, ದರ್ಶನ್ ನಟನೆಗೆ ಹೆಚ್ಚು ಒಲವು ತೋರಿಸಿದರು.

ತಂದೆಯ ಮಾತಿನಂತೆ ನೀನಾಸಂ ನಲ್ಲಿ ನಟನೆಯನ್ನು ಕಲಿಯಲು ಹೊರಟರು ದರ್ಶನ್, ಕೈಯಲ್ಲಿ ದುಡ್ಡಿಲ್ಲದಿದ್ದರೂ ಹೇಗೋ ಕಾಲ ಕಳೆಯುತ್ತಿದ್ದಾಗ, ಜೀರ್ಣಿಸಿಕೊಳ್ಳಲಾಗದ ಸುದ್ದಿಯೊಂದು ದರ್ಶನ್ ಗೆ ಬಂತು, ಅದೇ ಅವರ ಮರಣ.

ನೀನಾಸಂ ನಿಂದ ತಂದೆಯ ಅಂತಿಮ ದರ್ಶನಕ್ಕೆ ಮೈಸೂರಿಗೆ ಬರಬೇಕು, ಆದ್ರೆ ಕೈಯಲ್ಲಿ ಒಂದು ರೂಪಾಯಿ ಕಾಸಿಲ್ಲ, ಆ ಕಷ್ಟ ಯಾರಿಗೂ ಬರಬಾರದು, ವಿಧಿಯಿಲ್ಲದೆ ನೀನಾಸಂ ನಲ್ಲಿ ಅಡುಗೆ ಮಾಡುತ್ತಿದ್ದ ರತ್ನ ಅವರನ್ನು 500 ರೂಪಾಯಿ ಸಾಲವಾಗಿ ಕೇಳಿದರು ದರ್ಶನ್.

ದರ್ಶನ್ ಅಂದ್ರೆ ತುಂಬಾ ಪ್ರೀತಿ ತೋರಿಸುತ್ತಿದ್ದ ರತ್ನ ಅವರು 500 ರೂಪಾಯಿ ಕೊಟ್ಟು ಕಳುಹಿಸಿದರು. ಎಲ್ಲಾ ಕಷ್ಟಗಳನ್ನು ಸಹಿಸಿಕೊಂಡ ದರ್ಶನ್, ಗೆಲುವನ್ನು ಗುರಿಯಾಗಿಸಿಕೊಂಡರು, ಕನ್ನಡದ ಟಾಪ್ ನಟನಾಗಿ ಬೆಳೆದರು.

ಈಗ ದರ್ಶನ್ ಕೋಟಿ ಕೋಟಿ ಸಂಪಾದನೆ ಮಾಡುತ್ತಿದ್ದಾರೆ, ಆದ್ರೆ ಅದನ್ನು ನೋಡಿ ಸಂತೋಷಪಡಲು ಅವರ ತಂದೆ ಇಲ್ಲ. ಜೀವನ ಅಂದ್ರೆ ಹಾಗೇ, ಒಂದನ್ನು ಕೊಟ್ಟು ಇನ್ನೊಂದನ್ನು ನಮ್ಮಿಂದ ತೆಗೆದುಕೊಳ್ಳುತ್ತದೆ.

ಇನ್ನೂ ಹೆಚ್ಚಿನ ನ್ಯೂಸ್ ಅಪ್ಡೇಟ್ ಗಳಿಗಾಗಿ ‘ಜಸ್ಟ್ ಕನ್ನಡ JustKannada’ ಲೈಕ್ ಮತ್ತು ಶೇರ್ ಮಾಡುವುದನ್ನ ಮರೆಯಬೇಡಿ.

ತಾಜಾ ಮಾಹಿತಿ ಪಡೆಯಲು 'ಜಸ್ಟ್ ಕನ್ನಡ ಟೆಲಿಗ್ರಾಂ ಚಾನೆಲ್' ಸೇರಿಕೊಳ್ಳಿ.

ಜಸ್ಟ್ ಕನ್ನಡ 'ಫೇಸ್ ಬುಕ್ ಪುಟವನ್ನು' ಫಾಲೋ ಮಾಡಿ..

Leave a Reply